ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಿದ ಶಾಸಕ‌ ಅಮೃತ ದೇಸಾಯಿ ಕೋಟ್ಯಾಂತರ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ…..

Suddi Sante Desk

ಧಾರವಾಡ –

ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು ಹೌದು ಧಾರವಾಡ ನಗರ ಶಹರದ ವಾರ್ಡ ನಂ 04, 05, 06 & 07 ರಲ್ಲಿ ಹಲವು ಕಾಮಗಾರಿಗಳಿಗೆ ಭೂಮಿ ಪೂಜಾ ಕಾರ್ಯಕ್ರಮವನ್ನು ಮಾಡಲಾಯಿತು.
ಧಾರವಾಡ ಶಹರದ ವಾರ್ಡ ನಂ 04 ರ ಮಟ್ಟಿ ಪ್ಲಾಟ್ ೮ ನೇ ಕ್ರಾಸ್ ಮತ್ತು ೫ನೇ ಕ್ರಾಸ್ ರಸ್ತೆಗಳ ಅಭಿವೃದ್ಧಿ ಕಾಮ ಗಾರಿ ಧಾರವಾಡ ಶಹರದ ವಾರ್ಡ ನಂ 06 ರ ಬಣಗಾರ ಓಣಿ ಮತ್ತು ಕಾದ್ರೋಳ್ಳಿ ಓಣಿ ರಸ್ತೆಗಳ ಅಭಿವೃದ್ಧಿ ಕಾಮ ಗಾರಿ,ಧಾರವಾಡ ಶಹರದ ವಾರ್ಡ ನಂ 05 ರ ಗಣೇಶನಗರ ಹಾಗೂ ಶಿಂಧೆ ಪ್ಲಾಟ್ ರಸ್ತೆ ಅಭಿವೃದ್ಧಿ ಕಾಮಗಾರಿ. ಧಾರವಾಡ ಶಹರದ ವಾರ್ಡ ನಂ 07 ರ ತುಳಜಾ ಭವಾನಿ ಗುಡಿ ಓಣಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.

ಈ ಸಂಧರ್ಭದಲ್ಲಿ ಪಾಲಿಕೆಯ ಸದಸ್ಯರಾದ ಈರೇಶ ಅಂಚಟಗೇರಿ,ಸುನಿಲ ಮೊರೆ,ನಿತಿನ್ ಇಂಡಿ,ಮಂಜು ಮಾಳೆ,ವಿನಾಯಕ್ ಗೋಂದಳಿ,ಬಸವರಾಜ್ ಪಳೋಟಿ ಸೇರಿದಂತೆ ವಾರ್ಡಿನ ಅನೇಕ ಗಣ್ಯರು ಮತ್ತು ಸಾರ್ವಜನಿ ಕರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.