ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿ ಬರೆದ ಉತ್ತರ ನೋಡಿ ಮೌಲ್ಯಮಾಪಕರು ಶಾಕ್ ಪಾಸ್ ಮಾಡುವಂತೆ ಬರೆದಿದ್ದ ಪೊಟೊ ವೈರಲ್…..

Suddi Sante Desk

ವಿಜಯಪುರ –

ಸಾಮಾನ್ಯವಾಗಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪರೀಕ್ಷಾರ್ಥಿಗಳು ದೇವರಿಗೆ ಮೊರೆ ಹೋಗೋದು, ಪರೀಕ್ಷೆ ಯಲ್ಲಿ ನಕಲು ಮಾಡೋದು ನೋಡಿದ್ದೇವೆ.ಆದರೆ ಇಲ್ಲೊಬ್ಬನು ಎಸ್‌ ಎಸ್‌ ಎಲ್ ಸಿ ಪರೀಕ್ಷಾರ್ಥಿ ಪಾಸ್ ಮಾಡುವಂತೆ ಉತ್ತರ ಪತ್ರಿಕೆಯಲ್ಲಿ ಮೌಲ್ಯಮಾಪಕರಿಗೆ ಸಾಷ್ಟಾಂಗ ನಮಸ್ಕಾರ ಹಾಕಿ ಪಾಸ್ ಮಾಡುವಂತೆ ಕೇಳಿ ಕೊಂಡಿರುವ ಚಿತ್ರಣ ವೊಂದು ವಿಜಯಪುರ ದಲ್ಲಿ ಬೆಳಕಿಗೆ ಬಂದಿದೆ

ವಿಜಯಪುರ ನಗರದ ಸ್ನೇಹ ಸಂಗಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್‌ ಎಸ್‌ ಎಲ್ ಸಿ ಪರೀಕ್ಷೆ ಮೌಲ್ಯಮಾಪನ ನಡೆಯುತ್ತಿದೆ.ಮೌಲ್ಯಮಾಪನ ಮಾಡುತ್ತಿದ್ದ ವೇಳೆ ಪರೀಕ್ಷಾರ್ಥಿ ಉತ್ತರ ಪತ್ರಿಕೆ ನೋಡಿ ಮೌಲ್ಯಮಾಪಕರಿಗೆ ಅಚ್ಚರಿ ಮೂಡಿದೆ.ಗ್ರಾಮ ಪಂಚಾಯಿತಿಯೊಂದರಲ್ಲಿ ವಾಟರ್ ಮ್ಯಾನ್ ಆಗಿರುವವ ಬಾಹ್ಯ ಪರೀಕ್ಷಾರ್ಥಿಯಾಗಿ SSLC ಪರೀಕ್ಷೆ ಬರೆದಿದ್ದಾನೆ.ಉತ್ತರ ಪತ್ರಿಕೆ ಮೌಲ್ಯಮಾಪ ನವನ್ನು ಸಿದ್ದರಾಮೇಶ್ವರ ಪ್ರೌಢ ಶಾಲೆಯ ಶಿಕ್ಷಕ ಸಿದ್ದಪ್ಪ ಅಂಬಳನೂರು ಮಾಡುತ್ತಿದ್ದಾಗ ಉಪಾಧ್ಯಾಯರಿಗೆ ಸಾಷ್ಟಾಂಗ ನಮಸ್ಕಾರ ಪಾಸ್ ಮಾಡಿ ನಾನು ಬಿಲ್ ಕಲೆಕ್ಟರ್ ಆಗಬೇಕಿದೆ.ನನ್ನ ಪಾಸ್ ಮಾಡಿದರೆ ನಿಮಗೆ ದೇವರು ಒಳ್ಳೆಯದು ಮಾಡುತ್ತಾನೆ.ಒಳ್ಳೆಯ ಮನಸ್ಸಿನಿಂದ ನನ್ನ ಪಾಸ್ ಮಾಡಿಕೊಡಿ.ಪರೀಕ್ಷೆಯ ಮಾರ್ಕ್ಸ್ ಮೇಲೆ ಎಲ್ಲವೂ ನಿಂತಿದೆ.ನನ್ನನ್ನ ದಯವಿಟ್ಟು ಪಾಸ್ ಮಾಡಿ ಎಂದು ಗೋಗರೆದಿರುವುದು ನೋಡಿ ಅಚ್ಚರಿಗೊಂಡಿದ್ದಾರೆ.

ಬಳಿಕ ಆ ಉತ್ತರ ಪತ್ರಿಕೆ ಫೋಟೋ ತೆಗೆದುಕೊಂಡು ಶಿಕ್ಷಕ ಸಿದ್ದಪ್ಪ ಅವರು ತಮ್ಮ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿ ದ್ದಾರೆ.ಇದೀಗ ಅದು ಎಲ್ಲೆಡೆ ವೈರಲ್ ಆಗುತ್ತಿದೆ. ಮೌಲ್ಯ ಮಾಪಕರು ಉತ್ತರ ಪತ್ರಿಕೆಯೊಂದನ್ನು ಹೀಗೆ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿರೋದು ಪರೀಕ್ಷಾ ಪ್ರಮಾದವಾಗು ವುದಿಲ್ಲವೇ ಎಂಬುದು ಈಗ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.