This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

State News

ಕೋವಿಡ್ ಮಹಾಮಾರಿಗೆ ಶಿಕ್ಷಕ ಸಂಘಟನೆಯ ಜಿಲ್ಲಾ ಕಾರ್ಯ ದರ್ಶಿ ಸಾವು – ಸಾವಿಗೀಡಾದ ಮುರಾಳರಿಗೆ ರಾಜ್ಯ ಸಂಘಟನೆಯ ನಾಯಕರು ಭಾವಪೂರ್ಣ ನಮನ

WhatsApp Group Join Now
Telegram Group Join Now

ಬೆಂಗಳೂರು –

ದಿನದಿಂದ ದಿನಕ್ಕೆ ಕರೋನ ರಾಜ್ಯದಲ್ಲಿ ತನ್ನ ಆರ್ಭ ಟವನ್ನು ತೋರುತ್ತಿರುವ ಕರೋನಾಗೆ ಶಿಕ್ಷಕ ಸಂಘಟ ನೆಯ ಜಿಲ್ಲಾ ಕಾರ್ಯದರ್ಶಿಯೊಬ್ಬರು ಬಲಿಯಾಗಿ ದ್ದಾರೆ.ಹೌದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ವಿಜಯಪುರದ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳ ಆರ್ ಎನ್ ಮುರಾ ಳ ಕರೋನಾ ಗೆ ಬಲಿಯಾಗಿದ್ದಾರೆ.

ಆರ್ ಎನ್ ಮುರಾಳ ಅವರು ಸಿಂದಗಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರಾಗದ್ದು ಇವರು ಎರಡು ಬಾರಿ ತಾಲೂಕಾ ಅಧ್ಯಕ್ಷರಾಗಿ ಒಂದು ಬಾರಿ ಜಿಲ್ಲಾ ಸಂಘದ ಉಪಾಧ್ಯಕ್ಷರಾಗಿ ಪ್ರಸ್ತುತ ಜಿಲ್ಲಾ ಸಂಘಟ ನಾ ಕಾರ್ಯದರ್ಶಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ದಕ್ಷ, ಪ್ರಾಮಾಣಿಕ,ಸಂಘಟನಾ ಚತುರ,ಉತ್ತಮ ಹೋ ಟಗಾರರಾಗದ್ದ ಇವರಿಗೆ ಒಂದು ವಾರದ ಹಿಂದೆ ಸೋಂಕು ಕಾಣಿಸಿಕೊಂಡಿತ್ತು.ನಂತರ ಬಾಗಲಕೋ ಟೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಚಿಕಿತ್ಸೆ ಫಲಿಸದೇ ಇವರು ಆಸ್ಪತ್ರೆಯಲ್ಲಿ ನಿಧನರಾಗಿ ದ್ದಾರೆ.ಇನ್ನೂ ಇವರ ಒಂದು ಸಾವಿನಿಂದಾಗಿ ವಿಜಯ ಪುರ ಮತ್ತು ರಾಜ್ಯ ಘಟಕವು ಮಹಾನ್ ನಾಯಕನ ನ್ನು ಸಂಘಟನಾ ಚತುರನನ್ನು ಕಳೆದುಕೊಂಡು ಅನಾಥವಾಗಿದೆ.ಇನ್ನೂ ಇವರ ನಿಧನಕ್ಕೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತು ಸಂಘದ ಸರ್ವ ಸದಸ್ಯರು ಸಂತಾಪವನ್ನು ಸೂಚಿಸಿದ್ದಾರೆ.

ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ಸುರೇಶ ಶೇಡಶ್ಯಾಲ,ಬಿ ಟಿ ಗೌಡರ,ಜುಬೇರ ಕೆರೂರ,ಜೆ ಬಿ ಬಾಲೋಸೂರ,ಹೆಚ್ ಬಿ ಕೋನಾಡಿ ಸೇರಿದಂತೆ ಹಲವರು ಅಗಲಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗೆ ಭಾವಪೂರ್ಣ ನಮನವನ್ನು ಸಲ್ಲಿಸಿ ದ್ದಾರೆ.ಅಲ್ಲದೇ ದುಖಃವನ್ನು ತಡೆದುಕೊಳ್ಳುವ ಶಕ್ತಿ ಯನ್ನು ಆ ದೇವರು ಕುಟುಂಬಕ್ಕೆ ನೀಡಲಿ ಹಾಗೆ ಅವರಿಗೆ ಚಿರ ಶಾಂತಿ ನೀಡಲಿ ಅವರ ಕುಟುಂಬಕ್ಕೆ ನೊವು ಸಹಿಸಿಕೊಳ್ಳುವ ಶಕ್ತಿ ದೇವರು ಕೊಡಲಿ ಎಂದು ಪ್ರಾರ್ಥಿಸಿದ್ದಾರೆ


Google News

 

 

WhatsApp Group Join Now
Telegram Group Join Now
Suddi Sante Desk