ಪ್ರಾಧ್ಯಾಪಕರ ಪರೀಕ್ಷೆ ಯಲ್ಲಿ ಅಕ್ರಮ ಶಿಕ್ಷಣ ಸಚಿವರ ಮೇಲೆ ದೂರು ದಾಖಲು – ವಿಶ್ವವಿದ್ಯಾಲ ಯದ ಸಿಂಡಿಕೇಟ್ ಸದಸ್ಯರಿಂದ ದೂರು ದಾಖಲು…..

Suddi Sante Desk

ಬೆಂಗಳೂರು –

ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾ ಯಣ ವಿರುದ್ಧ ಮಲ್ಲೇಶ್ವರಂ ಠಾಣೆಯಲ್ಲಿ ದೂರು ದಾಖ ಲಾಗಿದೆ.ಸಚಿವ ಅಶ್ವತ್ಥನಾರಾಯಣ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್,ಅಕ್ರಮದಲ್ಲಿ ಭಾಗಿಯಾಗಿ ರುವ ನಿರಂಜನ್,ಅಪ್ಪಾಜಿಗೌಡ ಸೇರಿದಂತೆ 6 ಜನರ ವಿರುದ್ಧ ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಎ.ಪಿ.ರಂಗನಾಥ್ ದೂರು ನೀಡಿದ್ದಾರೆ.

ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿ ಅಕ್ರಮದಲ್ಲಿ ಪ್ರತಿ ಅಭ್ಯರ್ಥಿಗಳಿಂದ 30-40 ಲಕ್ಷ ಹಣ ಪಡೆದು ಓಎಂ ಆರ್ ಶೀಟ್ ತಿದ್ದುಪಡಿ ಮಾಡಿ ಆಯ್ಕೆ ಮಾಡಲಾಗಿದೆ. ಹಗರಣದಲ್ಲಿ ಸಚಿವರು,ಐಎಎಸ್ ಅಧಿಕಾರಿಗಳು,ಮಾಜಿ ಕುಲಪತಿಗಳು,ಉನ್ನತ ಹುದ್ದೆಗಳಲ್ಲಿರುವವರು ಭಾಗಿಯಾಗಿ ದ್ದಾರೆ.ಸರ್ಕಾರವೇ ಅಕ್ರಮದಲ್ಲಿ ಭಾಗಿಯಾದವರನ್ನು ರಕ್ಷಣೆ ಮಾಡುತ್ತಿದೆ.ದೂರು ನೀಡಿದರೂ ಎಫ್‌ಐಆರ್ ದಾಖಲಾಗದಂತೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ತಡೆಯುತ್ತಿದ್ದಾರೆ ಎಂದು ಆರೋಪಿಸಿರುವ ರಂಗನಾಥ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆಗೆ ಸರ್ಕಾರ ಆದೇಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.