ಶಾಲೆಗಳಲ್ಲಿ ಹೋಮ,ಹವನ ವರದಿ ಕೇಳಿದರು DC – ಕೂಡಲೇ ವರದಿ ನೀಡುವಂತೆ DDPI ಗೆ ಜಿಲ್ಲಾಧಿಕಾರಿ ಸೂಚನೆ…..

Suddi Sante Desk

ಬಂಟ್ವಾಳ

ಶಾಲೆಗಳಲ್ಲಿ ಹೋಮ ಹವನ ಮಾಡಿದ ವಿಚಾರ ಕುರಿತು ಮಂಗಳೂರು ಜಿಲ್ಲಾಧಿಕಾರಿ ವರದಿ ಕೇಳಿದ್ದಾರೆ‌.ಹೌದು ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪಡಿಬಾಗಿಲು ಶಾಲೆ ಸೇರಿದಂತೆ ಜಿಲ್ಲೆಯ ಕೆಲವು ಶಾಲೆಗಳಲ್ಲಿ ಶಾಲಾ ಆರಂಭದ ದಿನ ವೈದಿಕ ಆಚರಣೆಯಾದ ಹೋಮ,ಹವನ ನಡೆಸಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು ಹೀಗಾಗಿ ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು ಡಿಡಿಪಿಐಯಿಂದ ವರದಿ ಕೇಳಿದ್ದಾರೆ

ಶಿಕ್ಷಕರು,ಊರಿನ ಗಣ್ಯರು,ಜನಪ್ರತಿನಿಧಿಗಳು ಮಕ್ಕಳಿಗೆ ಹೂ ನೀಡಿ ಶಾಲೆಗೆ ಸ್ವಾಗತಿಸುವುದು ವಾಡಿಕೆ.ಶಾಲಾ ಪ್ರಾರಂಭೋತ್ಸವ ಸಂದರ್ಭದಲ್ಲಿ ಶಾಲೆಯನ್ನು ತಳಿರು ತೋರಣ,ಹೂಗಳಿಂದ ಶೃಂಗರಿಸಲಾಗಿರುತ್ತದೆ.ಆದರೆ ಇಲ್ಲಿನ ಶಾಲೆಗಳಲ್ಲಿ ವೈದಿಕ ಆಚರಣೆ ನಡೆಸಲಾಗಿದೆ ಎಂಬ ವಿಚಾರವೀಗ ಸದ್ದು ಮಾಡುತ್ತಿದೆ.ಕೆಲ ದಿನಗಳ ಹಿಂದೆ ಹಿಜಾಬ್ ವಿಚಾರ ಮುನ್ನೆಲೆಯಲ್ಲಿದ್ದ ಸಂದರ್ಭ ಸಮಾನತೆ ಪಾಲಿಸಬೇಕು ಎಂದು ಹಿಂದೂ ಸಂಘಟನೆಗಳು ಒತ್ತಾಯಿ ಸಿದ್ದವು.ಇದೀಗ ಹೋಮ ಹವನಕ್ಕೆ ಆಕ್ಷೇಪಗಳು ಕೇಳಿ ಬಂದಿದ್ದು ಜಿಲ್ಲಾಧಿಕಾರಿ ವರದಿ ಕೇಳಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.