ACB ಬಲೆಗೆ ಬಿದ್ದ ಇಬ್ಬರು ಸರ್ಕಾರಿ ಅಧಿಕಾರಿಗಳು – ಕೈ ತುಂಬಾ ಸಂಬಳವಿದ್ದರೂ 7 ಸಾವಿರಕ್ಕೆ ಕೈ ಚಾಚಿ ಟ್ರ್ಯಾಪ್…..

Suddi Sante Desk

ಚಿಕ್ಕಮಗಳೂರು –

ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ ಟಿ.ಸಿ. ಮಂಜುನಾಥ್‌,ಸಹಾಯಕ ಎಂಜಿನಿಯರ್‌ ಎಸ್‌. ಚಿದಾನಂದ ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ)ಪೊಲೀಸರ ಬಲೆಗೆ ಬಿದ್ದಿದ್ದಾರೆ.ಹೌದು
ತಾಲ್ಲೂಕಿನ ಹಾಂದಿಯಲ್ಲಿ ವಿದ್ಯುತ್‌ ಗುತ್ತಿಗೆದಾರನಿಂದ 7 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.

ಎಸಿಬಿ ಡಿಎಸ್‌ಪಿ ಸುನಿಲ್‌,ಇನ್ಸ್ಪೆಕ್ಟರ್ ಅನಿಲ್‌ ರಾಥೋಡ್‌ ಅವರು ಇಬ್ಬರನ್ನು ಬಂಧಿಸಿ ಲಂಚದ ಹಣ ವಶಕ್ಕೆ ಪಡೆದಿ ದ್ದಾರೆ.ಪಂಪ್‌ಸೆಟ್‌ಗೆ ವಿದ್ಯುತ್‌ ಪೂರೈಸುವ ನಿಟ್ಟಿನಲ್ಲಿ ವಿದ್ಯುತ್‌ ಮಾರ್ಗ ಸಮೀಕ್ಷೆಗೆ ಈ ಎಂಜಿನಿಯರ್‌ಗಳು ₹ 12 ಸಾವಿರ ಲಂಚ ಬೇಡಿಕೆ ಇಟ್ಟಿದ್ದಾರೆ ಎಂದು ಮೂಡಿಗೆ ರೆಯ ವಿದ್ಯುತ್‌ ಗುತ್ತಿಗೆದಾರ ಅಭಿಲಾಷ್‌ ದೂರು ನೀಡಿ ದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.