ಈ ಸರ್ಕಾರಿ ಶಾಲೆಗೆ ತಲೆನೋವಾದ ಗ್ರಾಮದ ಹೆಸರು ಹೆಸರಿನಿಂದ ಬೇಸತ್ತು ಶಾಲೆಗೆ ತಮ್ಮ ಮಕ್ಕಳನ್ನು ಕಳಿಸುತ್ತಿಲ್ಲ ಪೋಷಕರು…..

Suddi Sante Desk

ಚಾಮರಾಜನಗರ

ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆಯ ಕುರಿತು ಪರ ವಿರೋಧ‌ ಕೇಳಿಬರುತ್ತಿದ್ದರೆ ಇಲ್ಲೊಂದು ಸರ್ಕಾರಿ ಶಾಲೆ ಯಲ್ಲಿ ಗ್ರಾಮದ ಹೆಸರಿನ ವಿಚಾರದಲ್ಲಿ ವಿವಾದ ಭುಗಿಲೆದ್ದು ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ.ಹೌದು ತಾಲೂಕಿನ ಹೊಸದೊಡ್ಡಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನಾಮಫಲಕದಲ್ಲಿ ‘ಮೈಸೂರಪ್ಪನ ದೊಡ್ಡಿ’ ಬದಲು ‘ಹೊಸದೊಡ್ಡಿ’ ಎಂದು ನಮೂದಿಸುವಂತೆ ಒತ್ತಾಯಿಸಿ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸದೇ ತರಗತಿಯನ್ನು ಬಹಿಷ್ಕರಿಸಿದ್ದಾರೆ.ಮೈಸೂರಪ್ಪನ ದೊಡ್ಡಿ ಯಲ್ಲಿ ಈ ಹಿಂದೆ ಶಾಲೆಯನ್ನು ತೆರೆಯಲಾಗಿತ್ತು.ಆದರೆ ದಾಖಲಾತಿ ಕುಸಿತ ಕಂಡ ಹಿನ್ನಲೆ ಉಳಿಕೆ ವಿದ್ಯಾರ್ಥಿಗಳನ್ನು ಸಮೀಪದ ಹೊಸದೊಡ್ಡಿ ಶಾಲೆಗೆ ವರ್ಗಾಯಿಸಿ ಶಾಲೆಯ ಹೆಸರನ್ನು ಮೈಸೂರಪ್ಪನ ದೊಡ್ಡಿ ಶಾಲೆ ಎಂದು ನಮೂ ದಿಸಲಾಗಿತ್ತು.

ಗ್ರಾಮಸ್ಥರು ಶಾಲೆಯ ಹೆಸರನ್ನು ಹೊಸದೊಡ್ಡಿ ಎಂದು ನಾಮಕರಣ ಮಾಡಬೇಕೆಂದು ಆಗಿಂದಾಗ್ಗೆ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದರು.ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ.ಇದರಿಂದ ಬೇಸತ್ತ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸದೇ ತರಗತಿಗಳಿಗೆ ಬಹಿಷ್ಕಾರ ಹಾಕಿದರು.ಶಿಕ್ಷಕರು ಮತ್ತು ಬಿಇಒ ಮನವೊಲಿಸಿದರೂ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲಿಲ್ಲ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.