ಶೀಘ್ರದಲ್ಲೇ ಹೆಚ್ಚಾಗಲಿದೆ ಸರ್ಕಾರಿ ನೌಕರರ ಸಂಬಳ – ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ……

Suddi Sante Desk

ಬೆಂಗಳೂರು –

ಕೇಂದ್ರ ಸರ್ಕಾರ ಶೀಘ್ರದಲ್ಲೇ ಕೇಂದ್ರ ಸರ್ಕಾರಿ ನೌಕಕರಿಗೆ ತುಟ್ಟಿಭತ್ಯೆ(ಡಿಎ)ಹೆಚ್ಚಳ ಮಾಡಲು ಚಿಂತನೆ ನಡೆಸಿದೆ. ಸರ್ಕಾರ ವರ್ಷಕ್ಕೆ ಎರಡನೇ ಬಾರಿ ತುಟ್ಟಿಭತ್ಯೆ ಹೆಚ್ಚಳ ಮಾಡುತ್ತಿದೆ.ಜುಲೈ 1ರಿಂದಲೇ ತುಟ್ಟಿಭತ್ಯೆ ಹೆಚ್ಚಳವಾಗ ಲಿದ್ದು 7ನೇ ವೇತನ ಆಯೋಗವು ಜುಲೈ 1 ರಂದು ಕೇಂದ್ರವು ಸರ್ಕಾರಿ ನೌಕರರಿಗೆ ಮತ್ತೊಮ್ಮೆ ಡಿಎ ಹೆಚ್ಚಳ ಮಾಡುವ ಸಾಧ್ಯತೆಯಿದೆ.ಕೇಂದ್ರ ಸರ್ಕಾರಿ ನೌಕರರು ತಮ್ಮ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಶೀಘ್ರ ದಲ್ಲೇ ಸಿಹಿ ಸುದ್ದಿ ಪಡೆಯಲಿದ್ದಾರೆ.ತುಟ್ಟಿಭತ್ಯೆ ಹೆಚ್ಚಳ ಕುರಿತು ಸರ್ಕಾರ ಶೀಘ್ರವೇ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.ಜುಲೈ 1ರಿಂದ ನೌಕರರು ಮತ್ತು ಪಿಂಚಣಿದಾರರ ಡಿಎ ಹೆಚ್ಚಳವಾಗಲಿದ್ದು ಈ ವರ್ಷದ ಜನವರಿಯಲ್ಲಿ ಸರ್ಕಾರವು ನೌಕರರ ತುಟ್ಟಿಭತ್ಯೆಯನ್ನು ಶೇಕಡಾ 31 ರಿಂದ 34 ಕ್ಕೆ ಹೆಚ್ಚಿ ಸಿತ್ತು ಡಿಎ ಹೆಚ್ಚಳದಿಂದ ಸುಮಾರು 50 ಲಕ್ಷ ಉದ್ಯೋಗಿ ಗಳು ಪ್ರಯೋಜನ ಪಡೆಯಲಿದ್ದಾರೆ.

ಜನವರಿಯಲ್ಲಿ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಶೇಕಡಾ 3 ರಷ್ಟು ಡಿಎ ಹೆಚ್ಚಳ ಮಾಡಿತ್ತು.ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ) ಅಂಕಿಅಂಶಗಳನ್ನು ಆಧರಿಸಿ ಡಿಎ ಹೆಚ್ಚಳ ಮಾಡುತ್ತದೆ.ಶೇಕಡಾ 4ರಷ್ಟು ಡಿಎ ಹೆಚ್ಚಾಗಲಿದೆ. ಈಗ ತುಟ್ಟಿಭತ್ಯೆ ಶೇಕಡಾ 4ರಷ್ಟು ಹೆಚ್ಚಾದರೆ ಅದು ಶೇ. 38ಕ್ಕೆ ಏರಿಕೆಯಾಗಲಿದೆ.ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ನೀಡಿದರೆ ಪಿಂಚಣಿದಾರರಿಗೆ ಡಿಆರ್ ನೀಡಲಾಗುತ್ತದೆ.

ಎಷ್ಟು ಸಂಬಳ ಹೆಚ್ಚಾಗುತ್ತೆ?

ಹೌದು 7ನೇ ವೇತನ ಆಯೋಗದ ಪ್ರಕಾರ ತುಟ್ಟಿಭತ್ಯೆ (ಡಿಎ)ಶೇಕಡಾ 4 ರಷ್ಟು ಹೆಚ್ಚಾದರೆ ವೇತನದ ಲೆಕ್ಕಾಚಾರ ಹೀಗಿರಲಿದೆ.ಒಂದು ವೇಳೆ ನೌಕರನ ಮೂಲ ವೇತನ 56,900 ಆಗಿದ್ದು ತುಟ್ಟಿ ಭತ್ಯೆ 21,622ರಷ್ಟು ಡಿಎ ಪಡೆಯ ಲಿದ್ದಾರೆ.ಪ್ರಸ್ತುತ ಶೇಕಡಾ 34ರ ದರದಲ್ಲಿ 19,346 ರೂಪಾಯಿ ಡಿಎ ಪಡೆಯುತ್ತಿದ್ದಾರೆ.ಶೇಕಡಾ 4 ರಷ್ಟು ಡಿಎ ಹೆಚ್ಚಳದಿಂದ ವೇತನ 2,276 ರೂಪಾಯಿ ಏರಿಕೆಯಾಗಲಿದೆ ವೇತನ ವಾರ್ಷಿಕವಾಗಿ 27,312 ರೂಪಾಯಿ ಹೆಚ್ಚಳವಾಗ ಲಿದೆ.ಸುಮಾರು 50 ಲಕ್ಷ ಕೇಂದ್ರ ಸರ್ಕಾರದ ನೌಕರರು ಪ್ರಯೋಜನ ಪಡೆಯಲಿದ್ದಾರೆ.

ಗ್ರಾಹಕ ದರ ಸೂಚಿಯಂತೆ ಭತ್ಯೆ ಏರಿಕೆ ಹಣದುಬ್ಬರದ ಪರಿಣಾಮವನ್ನು ತಡೆದುಕೊಳ್ಳುವ ಸಲುವಾಗಿ ವೇತನದ ಜೊತೆಗೆ ಪಾವತಿ ಮಾಡುವಂಥ ಒಂದು ಭಾಗ ತುಟ್ಟಿ ಭತ್ಯೆ ಈ ಏರಿಕೆಯ ಅನುಕೂಲವನ್ನು 50 ಲಕ್ಷದಷ್ಟಿರುವ ಕೇಂದ್ರ ಸರಕಾರಿ ನೌಕರರು ಹಾಗೂ 62.26 ಲಕ್ಷದಷ್ಟಿರುವ ಪಿಂಚ ಣಿದಾರರು ಪಡೆಯಲಿದ್ದಾರೆ.ಜನವರಿ ಮತ್ತು ಫೆಬ್ರವರಿ ಯಲ್ಲಿ ಗ್ರಾಹಕ ದರ ಸೂಚ್ಯಂಕ (ಎಐಸಿಪಿಐ)ಕ್ರಮವಾಗಿ 125.1 ಮತ್ತು 125 ರಷ್ಟಿತ್ತು, ಮಾರ್ಚ್‌ನಲ್ಲಿ ಅದು 126ಕ್ಕೆ ಏರಿತು.ಸೂಚ್ಯಂಕದ ಆಧಾರದ ಮೇಲೆ ಶೇಕಡಾ 4 ರಷ್ಟು ಡಿಎ ಹೆಚ್ಚಳವನ್ನು ನಿರೀಕ್ಷಿಸಲಾಗಿದೆ.

ಹಣದುಬ್ಬರ ಕಡಿಮೆ ಮಾಡಲು ಡಿಎ ಹೆಚ್ಚಳ

ಹಣದುಬ್ಬರ ಕಡಿಮೆ ಮಾಡಲು ಸರ್ಕಾರವು ಪ್ರತಿ ವರ್ಷ ಜನವರಿ ಮತ್ತು ಜುಲೈನಲ್ಲಿ ಡಿಎಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಚಿಲ್ಲರೆ ಹಣದುಬ್ಬರ ಹೆಚ್ಚಿನ ಮಟ್ಟದಲ್ಲಿರುವುದ ರಿಂದ ತುಟ್ಟಿಭತ್ಯೆ ಹೆಚ್ಚಳದ ಸಾಧ್ಯತೆಗಳು ಹೆಚ್ಚಾಗಿದೆ. ಏಪ್ರಿಲ್‌ ನಲ್ಲಿ ಸಿಪಿಐ ಆಧಾರಿತ ಹಣದುಬ್ಬರ ಎಂಟು ವರ್ಷಗಳ ಗರಿಷ್ಠ ಶೇಕಡಾ 7.79 ರಷ್ಟಕ್ಕೆ ಏರಿಕೆಯಾಗಿದೆ ಕೇಂದ್ರ ಸರ್ಕಾರ ನೌಕರ ನಗರ ವಲಯದಲ್ಲಿ, ಅರೆ ನಗರ ವಲಯದಲ್ಲಿ ಅಥವಾ ಗ್ರಾಮೀಣ ವಲಯದಲ್ಲಿ ಕೆಲಸ ಮಾಡುತ್ತಾರೆಯೇ ಎಂಬುದರ ಆಧಾರದ ಮೇಲೆ ತುಟ್ಟಿ ಭತ್ಯೆ ಪ್ರಮಾಣ ಉದ್ಯೋಗಿಯಿಂದ ಉದ್ಯೋಗಿಗೆ ಬದಲಾ ಗುತ್ತದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.