ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ಶೀಘ್ರದಲ್ಲೇ ಮತ್ತೆ 15 ಸಾವಿರ ಶಿಕ್ಷಕರ ನೇಮಕ ಮತ್ತೆ ಹೊಸದಾಗಿ ಶಿಕ್ಷಕರ ನೇಮಕಾತಿ ಕುರಿತು ಮಾಹಿತಿ ನೀಡಿದ ಸಚಿವರು…..

Suddi Sante Desk

ದಾವಣಗೆರೆ

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸಬೇಕು ಎಂಬ ಕಾರಣಕ್ಕೆ ಈ ಬಾರಿ 15 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದರು.ದಾವಣಗೆರೆ ತಾಲ್ಲೂಕಿನ ಹಳೆ ಬಿಸಲೇರಿ ಗ್ರಾಮದಲ್ಲಿ ದಾನಿಗಳಾದ ಗೌರಮ್ಮ ಕುಂದೂರು ವೀರಭದ್ರಪ್ಪ ಟ್ರಸ್ಟ್ ಹಾಗೂ ಬೆಂಗಳೂರಿನ ಕುಂದೂರು ಕನ್‍ಸ್ಟ್ರಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಸರ್ಕಾರಿ ಪ್ರಾಥಮಿಕ ಶಾಲೆಗೆ ನಿರ್ಮಿಸಿರುವ ಕಟ್ಟಡದ ಹಸ್ತಾಂತರ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ 48,000 ಶಾಲೆಗಳಲ್ಲಿ 29,000 ಶಾಲೆಗಳು ಸುಸಜ್ಜಿತ ಕಟ್ಟಡ ಮತ್ತು ಎಲ್ಲ ಮೂಲಸೌಕರ್ಯಗಳನ್ನು ಹೊಂದಿವೆ.ಸುಮಾರು 7000 ಶಾಲೆಗಳಲ್ಲಿ ಕಟ್ಟಡಗಳು ಸರಿ ಇಲ್ಲ.ಮೂಲ ಸೌಲಭ್ಯಗಳ ಕೊರತೆ ಇವೆ.ಉಳಿದ ಶಾಲೆಗ ಳಲ್ಲಿ ಕೊಠಡಿಗಳು ಚೆನ್ನಾಗಿವೆ.ಆದರೆ ಮೈದಾನ, ಆವರಣ ಗೋಡೆ ಇನ್ನಿತರ ಸೌಕರ್ಯಗಳಿಲ್ಲ.ದಾವಣಗೆರೆ ಜಿಲ್ಲೆಗೆ 1200 ಕೊಠಡಿಗಳ ಅಗತ್ಯವಿದೆ ಎಂದು ಬೇಡಿಕೆ ಸಲ್ಲಿಸಿ ದ್ದಾರೆ.ಸದ್ಯ ರಾಜ್ಯದಲ್ಲಿ 7000 ಕೊಠಡಿಗಳನ್ನು ನಿರ್ಮಿ ಸಲು ಉದ್ದೇಶಿಸಲಾಗಿದೆ.ಹಂತಹಂತವಾಗಿ ಎಲ್ಲಾ ಸೌಕ ರ್ಯಗಳನ್ನು ನೀಡಲಾಗುವುದು ಎಂದರು.

ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಗೊಳಿಸಿ ಸುಸಜ್ಜಿತ ಶಾಲೆಯ ಕಟ್ಟಡಗಳನ್ನು ನಿರ್ಮಿಸಿ ತಾನು ಹುಟ್ಟಿದ ನೆಲಕ್ಕೆ ಕೊಡುಗೆ ನೀಡಿದ ಕೆ.ವಿ.ಬಸವನಗೌಡ ಹಾಗೂ ಅವರ ಕುಟುಂಬದವರ ಸಾಮಾಜಿಕ ಸೇವಾ ಕಾರ್ಯ ಸ್ಮರಣೀಯವಾದುದು ಎಂದು ಶ್ಲಾಘಿಸಿದರು.

ಕೇಂದ್ರ ಸರ್ಕಾರ ರೂಪಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ಕೂಲ್ ಕಾಂಪ್ಲೆಕ್ಸ್ ಎನ್ನುವ ಅಂಶವಿದೆ. ಮಗು ವಿಗೆ ಮೂರು ವರ್ಷ ಆದಲ್ಲಿಂದ 12ನೇ ತರಗತಿ ಮುಗಿಸು ವವರೆಗೆ ಒಂದೇ ಕಡೆ ಓದಲು ಅವಕಾಶ ಸಿಗಬೇಕು ಎಂಬುದು ಇದರ ಉದ್ದೇಶ.ಮಗು ಅಂಗನವಾಡಿಯಲ್ಲಿ ಕಲಿತು 1ನೇ ತರಗತಿಗೆ ಬೇರೆ ಪರಿಸರಕ್ಕೆ ಹೋದರೆ ಅಲ್ಲಿ ಹೊಂದಿಕೊಳ್ಳಲು ಎರಡು ತಿಂಗಳು ಬೇಕು.ಇದೇ ರೀತಿ ಪ್ರೌಢಶಾಲೆಗೆ,ಪಿಯುಸಿಗೆ ಬೇರೆ ಕಡೆ ಹೋಗುವಾಗ ಹೊಂದಿಕೊಳ್ಳುವ ಸಮಸ್ಯೆ ಉಂಟಾಗುತ್ತದೆ.ಒಂದೇ ಕಡೆ ವಿದ್ಯಾಭ್ಯಾಸ ನಡೆದಾಗ ಈ ಸಮಸ್ಯೆ ಇರುವುದಿಲ್ಲ. ಹಳೇ ಬಿಸಲೇರಿಯಲ್ಲಿ ಕೂಡ ಅಂಗನವಾಡಿಯಿಂದ 7ನೇ ತರಗತಿ ವರೆಗೆ ಒಂದೇ ಕಡೆ ವಿದ್ಯಾಭ್ಯಾಸ ಸಿಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.