ಸೈಕಲ್,ಶೂ,ಸಾಕ್ಸ್ ನಿರೀಕ್ಷೆಯಲ್ಲಿದ್ದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ನೀಡಿದ CM – ಸುದ್ದಿ ಸಂತೆ ಯ ವರದಿ ಬೆನ್ನಲ್ಲೇ ಸಮಸ್ಯೆ ಗೆ ಸ್ಪಂದಿಸಿದ ನಾಡ ದೊರೆ…..

Suddi Sante Desk

ಮೈಸೂರು

ಈ ವರ್ಷವೂ ರಾಜ್ಯದ ಸರ್ಕಾರಿ ಶಾಲಾ ವಿದ್ಯಾರ್ಥಿ ಗಳಿಗೆ ಸೈಕಲ್‌ ಶೂ ಮತ್ತು ಸಾಕ್ಸ್ ಯೋಜನೆ ಆರ್ಥಿಕ ಕಾರಣ ದಿಂದಾಗಿ ಬಹುಶಃ ವಿತರಣೆ ಮಾಡೊದಿಲ್ಲ ಎಂಬ ವಿಚಾರ ಕುರಿತು ಸುದ್ದಿ ಸಂತೆ ಸಮಗ್ರವಾದ ವರದಿಯೊಂದನ್ನು ಪ್ರಸಾರ ಮಾಡಿತ್ತು.ಈ ಒಂದು ವರದಿ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದಿಸಿ ಶಾಲಾ ಮಕ್ಕಳಿಗೆ ಸೈಕಲ್,ಶೂ ಮತ್ತು ಸಾಕ್ಸ್ ವಿತರಿಸಲಾಗುವುದು ಎಂದಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಿಎಂ ಸ್ವಲ್ಪ ವಿಳಂಬವಾ ಗಿದ್ದು, ಮಕ್ಕಳಿಗೆ ಸೈಕಲ್ ಮತ್ತು ಶೂ ವಿತರಿಸಲಾಗುವುದು ಜೊತೆಗೆ ಈ ವಿಚಾರದ ಕುರಿತಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಪರಿಶೀಲನೆ ನಡೆಸಿದ್ದಾರೆ ಎಂದರು.ಇನ್ನೂ ಇದಕ್ಕೂ ಮುನ್ನ ಇಮನದು ಬೆಳಿಗ್ಗೆ ಅಷ್ಟೇ ಸುದ್ದಿ ಸಂತೆ ಸಮಗ್ರವಾದ ವರದಿಯೊಂದನ್ನು ಪ್ರಕಟಿಸಿತ್ರು

ಸರ್ಕಾರಿ ಶಾಲೆಯ 8ನೇ ತರಗತಿ ಮಕ್ಕಳಿಗೆ ಸೈಕಲ್ ಒಂದ ರಿಂದ ಹತ್ತನೇ ತರಗತಿಯ ಮಕ್ಕಳಿಗೆ ಶೂ,ಸಾಕ್ಸ್ ವಿತರಿಸ ಲಾಗುತ್ತಿತ್ತು.2019 -20 ರಿಂದ ಸೈಕಲ್ ವಿತರಣೆ ಸ್ಥಗಿತ ಗೊಂಡಿದೆ.ಕಳೆದ ಎರಡು ಶೈಕ್ಷಣಿಕ ವರ್ಷಗಳಲ್ಲಿ ಶಾಲೆ ಮಕ್ಕಳಿಗೆ ಶೂ,ಸಾಕ್ಸ್ ವಿತರಿಸಿಲ್ಲ.ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಅನುದಾನ ಮೀಸಲಿಡದ ಹಿನ್ನೆಲೆಯಲ್ಲಿ ಈ ಬಾರಿ ಯೂ ಸರ್ಕಾರಿ ಶಾಲೆಯ ಮಕ್ಕಳಿಗೆ ಸೈಕಲ್,ಶೂ,ಸಾಕ್ಸ್ ವಿತರಿಸುವುದಿಲ್ಲ ಎನ್ನಲಾಗಿತ್ತು.ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು.ವಿಪಕ್ಷಗಳ ನಾಯಕರು ಕೂಡ ಟೀಕಿಸಿದ್ದರು. ಈಗ ಸಿಎಂ ಈ ವರ್ಷವೇ ಸೈಕಲ್, ಶೂ ವಿತರಿಸುವುದಾಗಿ ಹೇಳಿದ್ದು ಯಾವಾಗ ಇವುಗಳು ವಿದ್ಯಾರ್ಥಿ ಗಳ ಕೈ ಸೇರುತ್ತವೆ ಎಂಬೊಂದನ್ನು ಕಾದು ನೋಡಬೇಕಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.