ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಂತಿಮವಾಯಿತು ಮುಹೂರ್ತ ನವೆಂಬರ್ 11 ರಿಂದ ಯಾಲಕ್ಕಿ ನಾಡಿನಲ್ಲಿ ನುಡಿ ಜಾತ್ರೆ…..

Suddi Sante Desk

ಬೆಂಗಳೂರು

ಹಾವೇರಿಯಲ್ಲಿ ನವೆಂಬರ್ 11 ರಿಂದ 13 ರವರೆಗೆ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸರ್ಕಾರ ಒಪ್ಪಿಗೆ ನೀಡಿದೆ.ಅಧಿಕೃತ ಘೋಷಣೆ ಯೊಂದು ಮೂರ್ನಾಲ್ಕು ದಿನಗಳಲ್ಲಿ ಹೊರಬೀಳಲಿದೆ.ಈ ಮೊದಲು ಸೆಪ್ಟೆಂಬರ್ 23 ರಿಂದ 25 ರವರೆಗೆ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಲಾಗಿತ್ತು.ಆದರೆ ದಾಸಶ್ರೇಷ್ಠ ಕನಕದಾಸರ ಜಯಂತಿ ನವೆಂಬರ್ 11 ರಂದು ಇದೆ.ಹಾವೇರಿ ಜಿಲ್ಲೆಯಲ್ಲಿ ಜನಿಸಿದ ಕನಕದಾಸರ ಗೌರವಾರ್ಥ ನವೆಂಬರ್ 11ರಂದು ಸಾಹಿತ್ಯ ಸಮ್ಮೇಳನ ಆರಂಭಿಸಲು ಚಿಂತನೆ ನಡೆದಿದೆ.

ನವೆಂಬರ್ 11 ರಿಂದ 13 ರವರೆಗೆ ಸಾಹಿತ್ಯ ಸಮ್ಮೇಳನ ನಡೆಸಲು ದಿನಾಂಕ ನಿಗದಿಪಡಿಸಿದ್ದು ಅಧಿಕೃತ ಘೋಷಣೆ ಶೀಘ್ರ ಹೊರಬೀಳಲಿದ್ದು ನಂತರ ಚಟುವಟಿಕೆಗಳು ಆರಂಭ ವಾಗಲಿವೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.