This is the title of the web page
This is the title of the web page

Live Stream

[ytplayer id=’1198′]

December 2025
T F S S M T W
 123
45678910
11121314151617
18192021222324
25262728293031

| Latest Version 8.0.1 |

Local News

ಶಿಕ್ಷಕರ ಅಕಾಲಿಕ ಸಾವಿಗೆ ಕೂಡಲೇ ಪರಿಹಾರ ನೀಡಿ ಒತ್ತಾಯಿಸಿದ ಫುಲೆ ಶಿಕ್ಷಕಿಯರ ಸಂಘ

WhatsApp Group Join Now
Telegram Group Join Now

ಧಾರವಾಡ –

ಕೊವಿಡ್ ಎರಡನೇ ಅಲೆಗೆ ಸಿಕ್ಕಿ ನೂರಾರು ಶಿಕ್ಷಕರು ಸತ್ತಿರುವ ಸುದ್ದಿ ಎಲ್ಲರಲ್ಲೂ ನೋವನ್ನು ತಂದಿದೆ. ಶಿಕ್ಷಕರ ಇಂತಹ ಸಾವುಗಳು ನಿಜಕ್ಕೂ ದುರದೃಷ್ಟಕ ರವೇ ಸರಿ.ಅವರನ್ನೇ ಅವಲಂಬಿಸಿದ್ದ ಅವರ ಕುಟುಂಬಗಳು ಇಂದು ದುಃಖದಲ್ಲಿ ಮರುಗುತ್ತಿವೆ. ಇಂತಹ ದುಸ್ಥಿತಿ ನಿಜಕ್ಕೂ ಯಾರಿಗೂ ಬರಬಾರದಿತ್ತು ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ. ಎಸ್ ಮುಳ್ಳೂರ ರವರು ತಮ್ಮ ಮನಸಿನ ನೋವ ನ್ನು ಹಂಚಿಕೊಂಡಿದ್ದಾರೆ.

ಸರ್ಕಾರಿ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಯಾವುದೇ ಶಿಕ್ಷಕರು ಇಂದು ಕೊರೊನಾ ಗೆ ಬಲಿಯಾಗಿರಬಹುದು ಅಂತಹ ಶಿಕ್ಷಕರ ಕುಟುಂ ಬಗಳಿಗೆ ಪರಿಹಾರ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ.ಉಪಚುನಾವಣೆ ಕರ್ತವ್ಯದ ಮೇಲೆ ಹಾಗೂ ಕೊವಿಡ್ ಕರ್ತವ್ಯದ ಮೇಲೆ ಸಾವನ್ನಪ್ಪಿದ ಶಿಕ್ಷಕರೇ ಹೆಚ್ಚಾಗಿದ್ದು, ಪ್ರತೀ ಶಿಕ್ಷಕರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ ಅವರಿಗೆ ದೊರೆ ಯಬೇಕಾದ ಪರಿಹಾರ ಹಣವನ್ನು ಕೂಡಲೇ ಅವರ ಕುಟುಂಬಗಳಿಗೆ ನೀಡಬೇಕೆಂದು ಸರ್ಕಾರ ವನ್ನು ಈ ಮೂಲಕ ಒತ್ತಾಯಿಸುತ್ತೇವೆ.

ಹಾಗೆಯೇ ಕೋವಿಡ್ ‌ಕರ್ತವ್ಯಕ್ಕೆ ‌ನಿಯೋಜಿಸುವ ಶಿಕ್ಷಕರುಗಳಿಗೆ ಸೂಕ್ತವಾದ ರಕ್ಷಣ ಪಿಪಿಇ ಕಿಟ್ ಒದ ಗಿಸಬೇಕು ಪ್ರತೀ ಶಿಕ್ಷಕ ಸಮೂಹವನ್ನು ಕೊರೊನಾ ವಾರಿಯರ್ ಎಂದು ಪರಿಗಣಿಸಬೇಕು ಪ್ರತಿ ಶಿಕ್ಷಕ ಶಿಕ್ಷಕಿಯರುಗಳಿಗೆ ಕೊವಿಡ್ ಲಸಿಕೆ ಹಾಕಿಸಿಕೊಳ್ಳಲು ಮೊದಲ ಸಾಲಿನ ಆದ್ಯತೆ ನೀಡಬೇಕೆಂದು ಘನ ಸರ್ಕಾರವನ್ನು‌ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಒತ್ತಾಯಿಸಿದೆ.

ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕಿನ ಅಧ್ಯಕ್ಷ ರು,ಕಾರ್ಯದರ್ಶಿಗಳು, ಹಾಗೂ ಎಲ್ಲಾ ಪದಾಧಿಕಾರಿ ಗಳ ವತಿಯಿಂದ ಡಾ.ಲತಾ.ಎಸ್.ಮುಳ್ಳೂರ ಸಂಸ್ಥಾ ಪಕ ರಾಜ್ಯಾಧ್ಯಕ್ಷರು ಶ್ರೀಮತಿ ಜ್ಯೋತಿ ಹೆಚ್.
ರಾಜ್ಯ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಹಲವರು ಒತ್ತಾಯವನ್ನು ಮಾಡಿದ್ದಾರೆ


Google News

 

 

WhatsApp Group Join Now
Telegram Group Join Now
Suddi Sante Desk