ACB ಬಲೆಗೆ ಬಿದ್ದ ಆರೋಗ್ಯ ಇಲಾಖೆಯ ನೌಕರ – 5 ಸಾವಿರ ರೂಪಾಯಿ ಲಂಚಕ್ಕೆ ಕೈ ಹಾಕಿದವನ ಕೈ ಹಿಡಿದ ACB ಟೀಮ್…..

Suddi Sante Desk

ಚಾಮರಾಜನಗರ

ಸಂಬಳ ಮತ್ತು ವರ್ಕ್ ಆರ್ಡರ್ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟು ಹಣ ಪಡೆಯುವಾಗ ಆರೋಗ್ಯ ಇಲಾಖೆ ನೌಕರ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಚಾಮರಾಜನ ಗರದಲ್ಲಿ ನಡೆದಿದೆ.ಜಿಲ್ಲಾಡಳಿತ ಭವನದ ಡಿಎಚ್‌ಒ ಕಚೇರಿ ಯಲ್ಲಿ ಈ ಒಂದು ಘಟನೆ ನಡೆದಿದೆ.‌

ಡಿಎಚ್‌ಒ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮಹೇಶ್ ಎಂಬಾತ ಎಸಿಬಿ ಬಲೆಗೆ ಬಿದ್ದ ನೌಕರನಾಗಿದ್ದು ನೌಕರ ಮಹೇಶ್ ಕೊಳ್ಳೇಗಾಲದ ವ್ಯಕ್ತಿಯೊಬ್ಬರಿಗೆ ಮೂರು ತಿಂಗಳ ವೇತನ ಮತ್ತು ಕೆಲಸದ ಬಗ್ಗೆ ಆದೇಶ ನೀಡಲು ಸತಾಯಿಸಿ ಕೊನೆಗೆ 5 ಸಾವಿರ ರೂ.ಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ.

ಈ ಬಗ್ಗೆ ಕೊಳ್ಳೇಗಾಲದ ವ್ಯಕ್ತಿಯು ಎಸಿಬಿಗೆ ದೂರು ನೀಡಿದ್ದು ವ್ಯಕ್ತಿಯ ದೂರಿನ ಮೇರೆಗೆ ಎಸಿಬಿ ಡಿವೈಎಸ್ಪಿ ಸದಾನಂದ ತಿಪ್ಪಣ್ಣನವರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ 3 ಸಾವಿರ ಹಣ ಪಡೆಯುವಾಗ ಮಹೇಶ್ ಅವರ ನ್ನು ಬಂಧಿಸಿದ್ದಾರೆ.ಹಣ ಮತ್ತು ಮಹೇಶ್ ಅವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.