ಧಾರವಾಡ ದಲ್ಲಿ ತಪ್ಪಿತು ದೊಡ್ಡ ದುರಂತ – ಎಕ್ಸೆಲ್ ಕಟ್ ಆಗಿ ಕೆಲಗೇರಿ ಕೆರೆಗೆ ಬಿದ್ದ ಟ್ರಾಕ್ಟರ್ ಸಾರ್ವಜನಿಕರಿಂದ ಚಾಲಕನ ರಕ್ಷಣೆ…..

Suddi Sante Desk

ಧಾರವಾಡ –

ಧಾರವಾಡ ದಲ್ಲಿ ಹಾಡು ಹಗಲೇ ದೊಡ್ಡದೊಂದು ಅಗೌಡ ದುರಂತ ತಪ್ಪಿದೆ ಹೌದು.ಎಕ್ಸೆಲ್ ಕಟ್ ಆಗಿ ಕೆರೆಗೆ ಬಿದ್ದಿದೆ ಟ್ರ್ಯಾಕ್ಟರ್ ವೊಂದು.ಧಾರವಾಡ ಹೊರವಲಯದ ಕೆಲಗೇರಿ ಕೆರೆಯಲ್ಲಿ ಈ ಒಂದು ಘಟನೆ ನಡೆದಿದೆ.

ಇನ್ನೂ ಕೆರೆಯಲ್ಲಿ ಟ್ರಾಕ್ಟರ್ ಬೀಳುತ್ತಿದ್ದಂತೆ ಬಿದ್ದ ಟ್ರ್ಯಾಕ್ಟರ್ ಕೆಳಗೆ ಸಿಲುಕಿದ್ದ ಚಾಲಕನನ್ನು ಸ್ಥಳದಲ್ಲೇ ಇದ್ದ ಸಾರ್ವಜನಿ ಕರು ಹರಸಾಹಸ ಮಾಡಿ ಹೊರಗೆ ತೆಗೆದರು ಹೀಗಾಗಿ ಸ್ಥಳದಲ್ಲಿದ್ದ ಜನರಿಂದ ಚಾಲಕ ನನ್ನು ರಕ್ಷಣೆ ಮಾಡಲಾಗಿದೆ

ಟ್ರ್ಯಾಕ್ಟರ್ ನಲ್ಲಿ ಒಟ್ಟು ನಾಲ್ಕು ಜನರಿದ್ದರು ನಾಲ್ವರಲ್ಲಿ ಒರ್ವ ಟ್ರ್ಯಾಕ್ಟರ್ ಕೆಳಗೆ ಸಿಲುಕಿದ್ದನು.ಟ್ರ್ಯಾಕ್ಟರ್ ಕೆಳಗೆ ಸಿಲುಕಿದ್ದ ಚಾಲಕನ ಸ್ಥಿತಿ ಗಂಭೀರವಾಗಿದ್ದು ಇನ್ನೂಳಿದ ಮೂವರಿಗೆ ಸಣ್ಣ ಪುಟ್ಟ ಪ್ರಮಾಣದಲ್ಲಿ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ

ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸಾರ್ವಜನಿಕರು ಅವರನ್ನು ಆಸ್ಪತ್ರೆಗೆ ಶಿಪ್ಟ್ ಮಾಡಿದ್ದು ಸ್ಥಳದಲ್ಲಿದ್ದ ಜನರಿಂದ ಬಚಾವಾಗಿದ್ದಾರೆ ನಾಲ್ವರು.

ಗಾಯಾಳುಗಳನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿದ್ದು ಚಿಕಿತ್ಸೆ ಯನ್ನು ನೀಡಲಾಗುತ್ತಿದೆ.ಧಾರವಾಡ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದ್ದು ಪೊಲೀಸರು ಪರಿಶೀಲನೆ ಮಾಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.