ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ಗಳಿಗೆ ಭೂಮಿ ಪೂಜೆ ಮಾಡಿದ ಶಾಸಕ ಅಮೃತ ದೇಸಾಯಿ ಕ್ಷೇತ್ರದಲ್ಲಿ ಮುಂದುವರಿದ ಅಭಿವೃದ್ಧಿ ಕಾಮಗಾರಿ ಗಳು…..

Suddi Sante Desk

ಧಾರವಾಡ –

ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡುತ್ತಿದ್ದಾರೆ ಕೋಟಿ ಕೋಟಿ ರೂಪಾಯಿ ಗಳ ವೆಚ್ಚದಲ್ಲಿನ ಹಲವಾರು ಕಾಮಗಾರಿ ಗಳಿಗೆ ಶಾಸಕರು ಪೂಜಾ ಕಾರ್ಯ ಮಾಡುವುದರ ಮೂಲಕ ಚಾಲನೆ ನೀಡಿದರು

ಹೌದು ಮೊದಲು ಮಾದನಭಾವಿ ಗ್ರಾಮದಲ್ಲಿ ಹಲವಾರು ಅಭಿವೃಧ್ದಿ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಮಾಡಿದರು.ಗ್ರಾಮದ S C ಕಾಲನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ನಿರ್ಮಾಣ ಕಾಮಗಾರಿಗೆ ಮಕ್ಕಳಿಂದ ಶಾಸಕ ಅಮೃತ ದೇಸಾಯಿ ಭೂಮಿ ಪೂಜಾ ಮಾದಿಸಿ ಚಾಲನೆ ನೀಡಿದರು

ಇದರೊಂದಿಗೆ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹಾಗೂ ಟಾಟಾ ಹಿಟ್ಯಾಚಿ ಕಂಪನಿಯ ಸಿ ಎಸ್ ಆರ್ ಯೋಜನೆಯಡಿ ಅಮೃತ ಸರೋವರ(ಕೆರೆ) ಪುನಶ್ಚೇತನ ನಿರ್ಮಾಣ ಕಾಮಗಾರಿಗೆ ಪೂಜಾ ಸಲ್ಲಿಸಲಾ ಯಿತು.ಇದೇ ವೇಳೆ ಮಾದನಭಾವಿ ಗ್ರಾಮದ ನಿರ್ಮಾಣ ಹಂತದಲ್ಲಿರುವ ಆಂಜನೇಯ ದೇವಸ್ಥಾನದ ಕಾಮಗಾರಿ ಪರಿಶೀಲಿಸಲಾಯಿತು.

ಈ ಸಂಧರ್ಭದಲ್ಲಿ ಟಾಟಾ ಹಿಟಾಚಿ ಕಂಪನಿಯ ಅಧಿಕಾರಿ ಗಳಾದ ಪ್ರಶಾಂತ ದೀಕ್ಷಿತ,ರಾಜು ಜೀವಣ್ಣವರ,ರುದ್ರಪ್ಪ ಅರಿವಾಳ,ನಾಗನಗೌಡ ಪಾಟೀಲ,ಸಂಭಾಜಿ ಜಾದವ, ವಿಠ್ಠಲ ಪೂಜಾರ,ಸಿದ್ದಪ್ಪ ದೊಡವಾಡ,ಮಂಜುನಾಥ ಕೇರಾಳಿ,ವಿಠ್ಠಲ ಕಂಬಾರಗಣವಿ,ಮಂಜುನಾಥ ಕಲ್ಲೇದ, ರಮೇಶ ದೊಡವಾಡ,ಬಸವರಾಜ್ ಕರೆಮ್ಮನವರ್,ಸಂಜು ಚಿನಗುಡಿ,ಈರಣ್ಣ,ಗುಳದಕೊಪ್ಪ,ಬಸವರಾಜ ನಂದಿಹಳ್ಳಿ, ಮಂಜು ಪುಡಕಲಕಟ್ಟಿ ಹಾಗೂ ಮಾದನಭಾವಿ ಗ್ರಾಮದ ಗುರು ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.