BEO ಮೇಲೆ ಹಲ್ಲೆ ಮಾಡಿದ ಶಿಕ್ಷಕ ದಕ್ಷ ಪ್ರಾಮಾಣಿಕ ಬಿಇಓ ಮೇಲೆ ನಡೆದ ಹಲ್ಲೆಗೆ ಖಂಡನೆ…..NPS ನೌಕರರ ಸಂಘದ ಅಧ್ಯಕ್ಷ ಮಾಲತೇಶ್ ಬಬ್ಬಜ್ಜಿ ಖಂಡನೆ…..

Suddi Sante Desk

ಚಿತ್ತಾಪುರ –

ಸಂಬಳವನ್ನು ತಡೆಹಿಡಿದಿದ್ದಾರೆ ಎಂದುಕೊಂಡು ಅಸಮಾಧಾನ ಗೊಂಡ ಶಿಕ್ಷಕರೊಬ್ಬರು ಕ್ಷೇತ್ರ ಶಿಕ್ಷ ಣಾಧಿಕಾ ರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಕಲಬುರಗಿ ಯ ಚಿತ್ತಾಪುರ ದಲ್ಲಿ ನಡೆದಿದೆ ಹೌದು ಚಿತ್ತಾಪುರ ಕ್ಷೇತ್ರ ಶಿಕ್ಷಣಾ ಧಿಕಾರಿ ಸಿದ್ದವೀರಯ್ಯ ರುದನೂರು ಅವರ ಮೇಲೆ ತಾಲ್ಲೂಕಿನ ದೇವಾಜಿ ನಾಯಕ ತಾಂಡಾದ ಪ್ರಾಥಮಿಕ ಶಾಲಾ ಶಿಕ್ಷಕ ಮಲ್ಲಿನಾಥ ಪೂಜಾರ ಹಲ್ಲೆ ಮಾಡಿದ ಶಿಕ್ಷಕರಾಗಿದ್ದಾರೆ.

ಶಿಕ್ಷಕ ಶಾಲೆಗೆ ಹಾಜರಾಗಿಲ್ಲ ಎಂಬ ಕಾರಣಕ್ಕಾಗಿ ಬಿಇಓ ಅವರು ಶಿಕ್ಷಕ ನ ಸಂಬಳ ವನ್ನು ತಡೆಹಿಡದಿದ್ದು ಇದರಿಂ ದಾಗಿ ಅಸಮಾಧಾನ ಗೊಂಡ ಶಿಕ್ಷಕ ಬಿಇಓ ಅವರ ಮನೆಗೆ ನುಗ್ಗಿ ಕೈ ಗೆ ಸಿಕ್ಕ ಸಿಕ್ಕ ವಸ್ತುಗಳಿಂದ ಹಲ್ಲೆ ಮಾಡಿ ದ್ದಾರೆ.

https://youtu.be/7txjbhOMMTA

ಸಧ್ಯ ತೀವ್ರವಾಗಿ ಗಾಯಗೊಂಡಿರುವ ಬಿಇಓ ಅವರು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆಯನ್ನು ನೀಡಲಾಗುತ್ತಿದ್ದು ಇತ್ತ ಇವರ ಮೇಲೆ ನಡೆದ ಹಲ್ಲೆಯನ್ನು ಜಿಲ್ಲೆಯ ಶಿಕ್ಷಕರು ಅದರಲ್ಲೂ ಕ.ರಾ.ಸ.(NPS)ನೌಕರರ ಸಂಘ ಚಿತ್ತಾಪೂರ ಘಟಕದ ಸರ್ವ ಸದಸ್ಯರ ಪರವಾಗಿ ತಾಲ್ಲೂಕು ಅಧ್ಯಕ್ಷರು ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ಕ.ರಾ.ಪ್ರಾ.ಶಾ.ಶಿ ಸಂಘದ ಮಾಲತೇಶ್ ಬಬ್ಬಜ್ಜಿ ಯವರು ಖಂಡಿಸಿದ್ದಾರೆ

ಸಧ್ಯ ಇತ್ತ ಸಿದ್ಧವೀರಯ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲೆ ಹಲ್ಲೆ ನಡೆದ ಸುದ್ದಿ ಕೇಳಿ ತುಂಬಾ ನೋವಾಯಿತು.ತಮ್ಮಂತ ಪ್ರಾಮಾಣಿಕ ಅಧಿಕಾರಿಗಳ ಮೇಲೆ ಈ ರೀತಿಯ ಹಲ್ಲೆ ನಿಜಕ್ಕೂ ಖಂಡನೀಯ ಆದಷ್ಟು ಬೇಗ ಗುಣಮುಖರಾಗಿ ಬರಲೆಂದು ಆ ದೇವರಲ್ಲಿ ಪ್ರಾರ್ಥಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.