ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಆಯ್ಕೆಯಲ್ಲಿ ಶಿಕ್ಷಕರಿಗೆ ಅನ್ಯಾಯ ಬಸವರಾಜ ಗುರಿಕಾರ ಕಳೆದ 5 ವರ್ಷದಿಂದ ಈ ರೀತಿ ಆಗುತ್ತಿದೆ ಎಂದರು ಅಖಿಲ ಭಾರತ ಶಿಕ್ಷಕರ ಪೆಡರೇಷನ್ ಕಾರ್ಯದ್ಯಕ್ಷ ಬಸವರಾಜ ಗುರಿಕಾರ…..

Suddi Sante Desk

ಧಾರವಾಡ –

ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಆಯ್ಕೆಯಲ್ಲಿ ಶಿಕ್ಷಕರಿಗೆ ಅನ್ಯಾಯವಾಗಿದ್ದು ಕಳೆದ 5 ವರ್ಷದಿಂದ ಈ ರೀತಿ ಆಗುತ್ತಿದೆ.ದೇಶದಲ್ಲಿ ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾಲಯದ ವರೆಗೆ 50 ಲಕ್ಷಕ್ಕೂ ಹೆಚ್ಚು ಶಿಕ್ಷಕರಿದ್ದು ಕೇವಲ ದೇಶದ್ಯಾಂತ್ಯ 45 ಶಿಕ್ಷಕರುಗಳಿಗೆ ಮಾತ್ರ ರಾಷ್ಟ್ರ ಪ್ರಶಸ್ತಿ ಘೋಷಣೆ ಮಾಡಲಾಗಿದೆ ಎಂದು ಅಖಿಲ ಭಾರತ ಶಿಕ್ಷಕರ ಪೆಡರೇಷನ್ ಕಾರ್ಯದ್ಯಕ್ಷ ಬಸವರಾಜ ಗುರಿಕಾರ ಹೇಳಿದ್ದಾರೆ. ಪತ್ರಿಕಾ ಪ್ರಕಟಣೆ ಯ ಮೂಲಕ ಈ ಒಂದು ಆರೋಪವನ್ನು ಮಾಡಿದ್ದಾರೆ.

ಇನ್ನೂ ಕಳೆದ 5-6 ವರ್ಷಗಳಿಗೆ ಮುಂಚೆ ಪ್ರತಿ ವರ್ಷ 360 ಶಿಕ್ಷಕರುಗಳಿಗೆ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಲಾಗುತಿತ್ತು ಕರ್ನಾಟಕದ ಕನಿಷ್ಠ 10 ಶಿಕ್ಷಕರುಗಳಿಗೆ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಗುತಿತ್ತು ಈಗ ಈ ಅವಕಾಶ ತಪ್ಪಿದೆ ಈ ಅನ್ಯಾಯ ಸರಿಪಡಿಸುವಂತೆ ಕೇಂದ್ರ ಸರಕಾರಕ್ಕೆ ಹಲ ವಾರು ಸಲ ವಿನಂತಿ ಮಾಡಿದ್ದರು.ಸಹ ಪ್ರಶಸ್ತಿ ಆಯ್ಕೆ ಯಲ್ಲಿ ಕೇಂದ್ರ ಸರಕಾರ ಜಿಪುಣತನ ತೋರಿದೆ ಇದು ಖಂಡ ನೀಯ ತಕ್ಷಣ ಈ ಅನ್ಯಾಯ ಸರಿಪಡಿಸಿ ಪ್ರತಿ ರಾಜ್ಯಕ್ಕೆ ಕನಿಷ್ಟ 15 ರಾಷ್ಟ್ರ ಪ್ರಶಸ್ತಿಗಳಂತೆ ಈ ಹಿಂದಿನ ಕೇಂದ್ರ ಸರ್ಕಾರಗಳು ನೀಡಿದ ರೀತಿ ಕನಿಷ್ಟ 350 ಕ್ಕೂ ಹೆಚ್ಚು ರಾಷ್ಟ್ರಪ್ರಶಸ್ತಿಗಳನ್ನು ಕೇಂದ್ರ ಸರಕಾರ ನೀಡಿ ಶಿಕ್ಷಕರು ಗಳಿಗೆ ಗೌರವ ಸಲ್ಲಿಸಬೇಕೆಂದು ಅಖಿಲ ಭಾರತ ಶಿಕ್ಷಕರ ಪೆಡರೇಷನ್ ಕಾರ್ಯಾದ್ಯಕ್ಷ ಬಸವರಾಜ ಗುರಿಕಾರ ಆಗ್ರಹಿಸಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.