ಗೌರಿ ಗಣೇಶ ಹಬ್ಬಕ್ಕೆ ರಾಜ್ಯ ಸರ್ಕಾರಿ ನೌಕರರಿಗೆ ಸಿಗಲಿದೆ ಗುಡ್ ನ್ಯೂಸ್ – ತೆರೆ ಮರೆಯಲ್ಲಿ ಸರ್ಕಾರ ನಡೆಸಿದೆ ಸಮಿತಿಗಳ ರಚನೆಯ ಭರ್ಜರಿ ಸಿದ್ದತೆ…..

Suddi Sante Desk

ಬೆಂಗಳೂರು –

ರಾಜ್ಯದ ಸರ್ಕಾರಿ ನೌಕರರಿಗೆ ಕೊನೆಗೂ ಕೇಂದ್ರ ಮಾದರಿಯ 7ನೇ ವೇತನ ಆಯೋಗ ರಚನೆ ಕುರಿತಂತೆ ಕೊನೆಗೂ ಕಾಲ ಕೂಡಿ ಬಂದಿದ್ದು ಇನ್ನೇನು ಘೋಷಣೆ ಯೊಂದೇ ಬಾಕಿ ಇದ್ದಿದ್ದು ಸೆಪ್ಟಂಬರ್ 6 ರಂದು ರಾಜ್ಯದ ಸರ್ಕಾರಿ ನೌಕರರಿಗೆ ಸರ್ವೋತ್ತಮ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮ ಇದೆ ಅಂದೇ ರಾಜ್ಯದ ಮುಖ್ಯ ಮಂತ್ರಿಯವರು ಈ ಒಂದು ಸಮಿತಿ ರಚನೆಯ ಘೋಷ ಣೆಯನ್ನು ಮಾಡಲಿದ್ದಾರೆ‌.

ಈ ಕುರಿತಂತೆ ರಾಜ್ಯದ ಸರ್ಕಾರಿ ನೌಕರರ ಅದರಲ್ಲೂ ವಿಶೇಷವಾಗಿ ಶಿಕ್ಷಕರ ಧ್ವನಿಯಾಗಿ ಕೆಲಸವನ್ನು ಮಾಡು ತ್ತಿರುವ ನಿಮ್ಮ ಸುದ್ದಿ ಸಂತೆ ನ್ಯೂಸ್ ಮತ್ತು ಷಡಾಕ್ಷರಿ ಸರ್ ಅಭಿಮಾನಿ ಬಳಗದ ಬೂದನೂರು ಮಹೇಶ್ ಮಂಡ್ಯ ಮತ್ತು ಟೀಮ್ ನವರ ನಿರಂತರ ಪ್ರಯತ್ನದ ಫಲವಾಗಿ ಮತ್ತು ಷಡಾಕ್ಷರಿ ಅವರ ಬಿಡುವಿಲ್ಲದ ಪ್ರಯತ್ನದ ಫಲವಾಗಿ ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ 7ನೇ ವೇತನ ನೀಡುವ ಕುರಿತಂತೆ ಸಮಿತಿ ರಚನೆಯನ್ನು ಮಾಡುವ ಕುರಿತಂತೆ ಈಗಾಗಲೇ ಮುಖ್ಯಮಂತ್ರಿಯವರು ಸದ್ದು ಗದ್ದಲವಿಲ್ಲದೇ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯ ದರ್ಶಿ ಸೇರಿದಂತೆ ಸಮಿತಿಗೆ ಸದಸ್ಯರನ್ನು ನೇಮಕ ಮಾಡಿದ್ದು ಯಾರ ನೇತ್ರತ್ವದಲ್ಲಿ ಯಾರು ಯಾರು ಸದಸ್ಯರು ಪ್ರಧಾನ ಕಾರ್ಯದರ್ಶಿ ಯಾರು ಹೀಗೆ ಎಲ್ಲಾ ಜವಾಬ್ದಾರಿಗಳನ್ನು ಅಂದೇ ಘೋಷಣೆ ಮಾಡಲಿದ್ದಾರೆ

ಇದೇಲ್ಲವನ್ನು ರಾಜ್ಯದ ಸಮಸ್ತ ಸರ್ಕಾರಿ ನೌಕರರು ತುದಿ ಗಾಲಲ್ಲಿ ನಿಂತುಕೊಂಡು ಕಾಯುತ್ತಿದ್ದು ಸೆಪ್ಟಂಬರ್ 6 ರಂದು ಘೋಷಣೆಯಾಗಲಿದ್ದು ಇದರೊಂದಿಗೆ ಈ ಕುರಿತಂತೆ ಎಲ್ಲಾ ಅಂತಿಮ ಸಿದ್ದತೆಗಳಾಗಿದ್ದು ಹೀಗಾಗಿ ಗೌರಿ ಗಣೇಶ ಹಬ್ಬಕ್ಕೆ ರಾಜ್ಯದ ನೌಕರರಿಗೆ ಗುಡ್ ನ್ಯೂಸ್ ಸಿಗಲಿದ್ದು ಸಮಿತಿ ರಚನೆ ನಂತರ ಐದಾರು ತಿಂಗಳಲ್ಲಿ ವರದಿ ನೀಡಿದ ಕೂಡಲೇ ಜಾರಿಗೆ ಬರಲಿದ್ದು ಏನೇನಾ ಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.