ಮುಖ್ಯಶಿಕ್ಷಕ ಸೇರಿ ನಾಲ್ವರು ಶಾಲಾ ಸಿಬ್ಬಂದಿ ಅಮಾನತು ಅಮಾನತು ಮಾಡಿ ಆದೇಶ ಮಾಡಿದ BEO

Suddi Sante Desk

ಶಾಲಾ ಮಕ್ಕಳಿಗೆ ಹುಳುಗಳಿರುವ ಆಹಾರ ವಿತರಣೆ ಪ್ರಕರಣ ದಲ್ಲಿ ಮಂಡ್ಯದ ಬಸರಾಳು ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಮುಖ್ಯ ಶಿಕ್ಷಕ ಸೇರಿ ನಾಲ್ವರು ಅಡುಗೆ ಸಿಬ್ಬಂದಿ ಗಳನ್ನು ಅಮಾನತು ಮಾಡಲಾಗಿದೆ.ಹೌದು ಮುಖ್ಯಶಿಕ್ಷಕ ಗಿರೀಶ್ ಸೇರಿದಂತೆ ಅಡುಗೆ ಸಿಬ್ಬಂದಿಗಳಾದ ನಾಗರತ್ನ,ಭಾಗ್ಯಮ್ಮ, ಗಂಗಮ್ಮ ರನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪನಿರ್ದೇಶಕ ಜವರೇಗೌಡ ಅಮಾನತು ಮಾಡಿ ಆದೇಶವನ್ನು ಮಾಡಿದ್ದಾರೆ.

ಇನ್ನೂ ಈ ಒಂದು ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಬಿಸಿಯೂಟ ವ್ಯವಸ್ಥೆ ಸ್ಥಗಿತಗೊಂಡಿದೆ.ಈ ಶಾಲೆ ಯಲ್ಲಿ LKG ಯಿಂದ 8ನೇ ತರಗತಿಯ ಸುಮಾರು 500‌ ಮಕ್ಕಳಿದ್ದು ಬಿಸಿಯೂಟ ಸ್ಥಗಿತವಾಗಿರುವುದರಿಂದ ಮಕ್ಕಳು ಮನೆಯಿಂದಲೇ ಊಟ ತಂದು ಶಾಲೆಯಲ್ಲಿ ಸೇವಿಸುತ್ತಿದ್ದಾರೆ

ಇತ್ತ ಈ ಒಂದು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮುಖ್ಯ ಶಿಕ್ಷಕ ಅಡುಗೆ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದು ಊಟಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮೇಲಾಧಿಕಾರಿಗಳು ಮಾಡಿಲ್ಲ ಇದರಿಂದ ಮಕ್ಕಳು ಮನೆಯಿಂದ ಊಟ ತರುತ್ತಿದ್ದಾರೆ.ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.