ನೌಕರರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ ಪ್ರಯಾಣಕ್ಕೆ ಉಚಿತ ಸೌಲಭ್ಯ ಘೋಷಣೆ…..

Suddi Sante Desk

ನವದೆಹಲಿ –

7ನೇ ವೇತನ ಆಯೋಗದ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ ಸಿಕ್ಕಿದೆ.ವಾಸ್ತವವಾಗಿ ಸರ್ಕಾರವು ತನ್ನ ನೌಕರರಿಗೆ ತುಟ್ಟಿಭತ್ಯೆ ನೀಡುವ ಮೊದಲು ದೊಡ್ಡ ಘೋಷಣೆ ಮಾಡಿದೆ.ಹೌದು, ಪ್ರವಾಸ,ತರಬೇತಿ,ವರ್ಗಾವಣೆ,ನಿವೃತ್ತಿ ಸಮಯದಲ್ಲಿ ನೌಕರರಿಗೆ ತೇಜ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿ ಸಲು ಅವಕಾಶ ನೀಡುವುದಾಗಿ ಸರ್ಕಾರ ಘೋಷಿಸಿದೆ.

ಇನ್ನೂ ನಿಮ್ಮ ಮನೆಯ ಯಾವುದೇ ಸದಸ್ಯರು ಸರ್ಕಾರಿ ನೌಕರರಾಗಿದ್ದರೆ ನೀವು ಸಹ ಇದರ ಪ್ರಯೋಜನವನ್ನು ಪಡೆಯಬಹುದು.

7ನೇ ವೇತನ ಆಯೋಗವು ಸೆಪ್ಟೆಂಬರ್ 12ರಂದು ಹೊರಡಿಸಿದ ಕಚೇರಿ ಜ್ಞಾಪಕ ಪತ್ರದಲ್ಲಿ ಸರ್ಕಾರವು ತನ್ನ ಅನುಮೋದನೆಯನ್ನ ನೀಡಿದೆ. ಅದರ ನಂತ್ರ ಉದ್ಯೋಗಿ ಗಳು ಈಗ ಪ್ರವಾಸ ಮಾಡಬಹುದು.ಅಂದ ಹಾಗೆ ಉದ್ಯೋಗಿಗಳಿಗೆ ಪ್ರಯಾಣಿಸಲು ಅವಕಾಶ ನೀಡಲು 2017ರಲ್ಲಿ ಕಚೇರಿ ಮೆಮೊರಾಂಡಮ್ ನಿರ್ಧಾರವನ್ನು ತೆಗೆದುಕೊಂಡಿದೆ.

ಕೇಂದ್ರ ನೌಕರರು ದೀರ್ಘಾವಧಿಯಿಂದ ತುಟ್ಟಿ ಭತ್ಯೆಗಾಗಿ ಕಾಯುತ್ತಿದ್ದಾರೆ.ಪ್ರಸ್ತುತ ಶೇ.34ರಷ್ಟು ನೌಕರರಿಗೆ ನೀಡ ಲಾಗಿದ್ದು ಸರ್ಕಾರ ತುಟ್ಟಿಭತ್ಯೆ ಘೋಷಿಸಿದರೆ ದೀಪಾವಳಿ ಗೂ ಮುನ್ನ ಸರ್ಕಾರಿ ನೌಕರರಿಗೆ ಭಾರಿ ಮೊತ್ತದ ಲಾಭ ದೊರೆಯಲಿದೆ.ಅಂದರೆ ಉದ್ಯೋಗಿಗಳಿಗೆ ಶೇ.4ರಷ್ಟು ಹೆಚ್ಚಳವಾಗಲಿದೆ.ಅದರ ನಂತರ ಅದು 38% ಆಗುತ್ತದೆ. ಈ ಕುರಿತು ಸರ್ಕಾರ ಈ ತಿಂಗಳ ಕೊನೆಯ ದಿನಾಂಕವನ್ನ ಪ್ರಕಟಿಸುವ ನಿರೀಕ್ಷೆಯಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.