ಜೈಲು ಸೇರಿದ BEO ಕೈತುಂಬಾ ಸಂಬಳವಿದ್ದರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದ ರಾಮಕೃಷ್ಣಯ್ಯ ಗೆ ಜೈಲು ದಾರಿ ತೋರಿಸಿದ ಹೊಟೇಲ್ ಮಾಲೀಕ

Suddi Sante Desk
ಜೈಲು ಸೇರಿದ BEO ಕೈತುಂಬಾ ಸಂಬಳವಿದ್ದರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದ ರಾಮಕೃಷ್ಣಯ್ಯ ಗೆ ಜೈಲು ದಾರಿ ತೋರಿಸಿದ ಹೊಟೇಲ್ ಮಾಲೀಕ

ತುಮಕೂರು

 

ಊಟ-ತಿಂಡಿಯ ಹೋಟೆಲ್ ಬಿಲ್ ಪಾಸ್ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟು ಲೋಕಾಯುಕ್ತ ಬಲೆಗೆ ಬಿದ್ದಿದ್ದ ತುಮಕೂರಿನ ಶಿಕ್ಷಣ ಇಲಾಖೆಯ ಅಧಿಕಾರಿ ಜೈಲು ಸೇರಿದ್ದಾರೆ.ಹೌದು ಲೋಕಾ ಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ (ಡಿಐಇಟಿ) ಪ್ರಾಂಶುಪಾಲ ರಾಮಕೃಷ್ಣಯ್ಯ ಈಗ ಜೈಲು ಸೇರಿದ್ದು ತುಮಕೂರುಲೋಕಾಯುಕ್ತ ಡಿವೈಎಸ್​​ಪಿ ರವೀಶ್ ನೇತೃತ್ವದಲ್ಲಿ ಕಾರ್ಯಾ ಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಮಧುಗಿರಿ ಶೈಕ್ಷಣಿಕ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ (ಡಿಐಇಟಿ) ಪ್ರಾಂಶುಪಾಲ ರಾಮಕೃಷ್ಣಯ್ಯ ಅವರನ್ನು ಲಂಚ ಪಡೆಯುವಾಗಲೇ ಬಲೆಗೆ ಹಾಕಿದ್ದರು.

 

ಊಟ-ತಿಂಡಿಯ ಬಾಬ್ತು ಹೋಟೆಲ್ ಬಿಲ್ ಪಾಸ್ ಮಾಡಲು ರಾಮಕೃಷ್ಣಯ್ಯ 17 ಸಾವಿರ ರೂ. ಲಂಚ ಕೇಳುತ್ತಿದ್ದಾರೆ ಎಂಬುದಾಗಿ ಹನು ಮಂತರಾಜು ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು ಈ ದೂರಿನ ಮೇರೆಗೆ ಲೋಕಾ ಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಸುಧೀರ್ಘವಾಗಿ ವಿಚಾರಣೆ ಮಾಡಿ ರಾಮಕೃಷ್ಣ ಯ್ಯ ಅವರನ್ನು ವಶಕ್ಕೆ ಪಡೆದು ನ್ಯಾಯಾಧೀಶರ ಮುಂದೆ ಹಾಜರು ಮಾಡಿ ತನಿಖೆ ಮಾಡಿ ಮತ್ತಷ್ಟು ಪೂರಕವಾದ ದಾಖಲೆಗಳನ್ನು ವಶಪಡಿಸಿಕೊಂ ಡು ನ್ಯಾಯಾಧೀಶರ ಮುಂದೆ ಹಾಜರು ಮಾಡಲಾ ಗಿದ್ದು ಹದಿನೈದು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ ಹೀಗಾಗಿ ಬಿಇಒ ಅವರಿಗೆ ಲೋಕಾಯುಕ್ತ ಪೊಲೀಸರು ಜೈಲಿಗೆ ಕಳಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.