ರಾಜ್ಯದ ಸರ್ಕಾರಿ ನೌಕರರಿಗೆ 7ನೇ ವೇತನ ವಿಚಾರದಲ್ಲಿ ಇಂದು ಸಿಗುತ್ತಾ ಶುಭ ಸುದ್ದಿ – ಆರ್ಥಿಕ ಇಲಾಖೆಯ ಅಧಿಕಾರಿಗಳ ಭೇಟಿಯಾಗಲಿದ್ದಾರೆ ಷಡಾಕ್ಷರಿ ಅವರು ತಾರ್ಕಿಕ ಅಂತ್ಯ ಕಾಣುತ್ತಾ ಸಮಿತಿ ರಚನೆ

Suddi Sante Desk
ರಾಜ್ಯದ ಸರ್ಕಾರಿ ನೌಕರರಿಗೆ 7ನೇ ವೇತನ ವಿಚಾರದಲ್ಲಿ ಇಂದು ಸಿಗುತ್ತಾ ಶುಭ ಸುದ್ದಿ – ಆರ್ಥಿಕ ಇಲಾಖೆಯ ಅಧಿಕಾರಿಗಳ ಭೇಟಿಯಾಗಲಿದ್ದಾರೆ ಷಡಾಕ್ಷರಿ ಅವರು ತಾರ್ಕಿಕ ಅಂತ್ಯ ಕಾಣುತ್ತಾ ಸಮಿತಿ ರಚನೆ

ಬೆಂಗಳೂರು

 

ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ 7ನೇ ವೇತನ ವಿಚಾರ ಕುರಿತಂತೆ ಈ ಹಿಂದೆ ಮುಖ್ಯಮಂತ್ರಿ ಹೇಳಿದಂತೆ ಅಕ್ಟೋಬರ್ ತಿಂಗಳಲ್ಲಿ ಈ ಕುರಿತಂತೆ ಸಮಿತಿಯೊಂದನ್ನು ರಚನೆ ಮಾಡೊದಾಗಿ ಹೇಳಿದ್ದರು.ಅಕ್ಟೋಬರ್ ತಿಂಗಳು ಮುಗಿಯುತ್ತಾ ಬಂದ ಹಿನ್ನಲೆಯಲ್ಲಿ ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ರಾಗಿರುವ ಷಡಾಕ್ಷರಿ ಅವರು ಇಂದು ರಾಜ್ಯದ ಹಿರಿಯ ಆರ್ಥಿಕ ಇಲಾಖೆಯ ಅಧಿಕಾರಿಗಳ ಭೇಟಿ ಮಾಡಲಿದ್ದಾರೆ.

ಈಗಾಗಲೇ ಈ ಕುರಿತಂತೆ ನಿನ್ನೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸಮಯವನ್ನು ಕೇಳಿದ್ದು ಅದಕ್ಕೆ ಅವರು ಕೂಡಾ ಒಪ್ಪಿಕೊಂಡಿದ್ದು ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಕೆಲ ವೊಂದಿಷ್ಟು ಬೇಡಿಕೆಗಳ ಕುರಿತಂತೆ ಹಾಗೇ ಈಗಾಗಲೇ ಹೇಳಿದಂತೆ ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಮಾದರಿಯ 7ನೇ ವೇತನ ನೀಡುವ ಕುರಿತಂತೆ ಸಮಿತಿ ರಚನೆ ವಿಚಾರ ಮತ್ತು ಜಾರಿಗೆ ಮಾಡುವ ಕುರಿತಂತೆ ಚರ್ಚೆಯನ್ನು ಷಡಾಕ್ಷರಿ ಅವರು ಅಧಿಕಾರಿಗ ಳೊಂದಿಗೆ ಚರ್ಚೆಯನ್ನು ಮಾಡಲಿದ್ದಾರೆ.

PDO ಹುದ್ದೆಗಳನ್ನು PDO- Grade-1 ಗೆ ಉನ್ನತಿಕರಿಸುವ ಬೇಡಿಕೆಗಳಿಗೆ ಪರಿಹಾರ ಕಂಡುಕೊಳ್ಳಲು ಆರ್ಥಿಕ ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚಿ ಸಲು ಅಗತ್ಯ ದಾಖಲೆಗಳನ್ನು ನೀಡಿ ಮಾಹಿತಿ ಯನ್ನು ರಾಜ್ಯಾಧ್ಯಕ್ಷರು ನೀಡಲಿದ್ದು ಇದರೊಂದಿಗೆ ರಾಜ್ಯದ ಸರ್ಕಾರಿ ನೌಕರರಿಗೆ 7ನೇ ವೇತನ ನೀಡುವ ವಿಚಾರ ಕುರಿತಂತೆ ಸಮಿತಿ ರಚನೆ ವಿಚಾರವನ್ನು ಪ್ರಮುಖವಾಗಿ ಚರ್ಚೆಯನ್ನು ಮಾಡಿ ಸಮಗ್ರವಾದ ಮಾಹಿತಿಯನ್ನು ಪಡೆದು ಕೊಂಡು ಶೀಘ್ರದಲ್ಲೇ ಜಾರಿಗೆ ಮಾಡುವ ಕುರಿ ತಂತೆ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಪರವಾಗಿ ಒತ್ತಾಯವನ್ನು ಮಾಡಲಿದ್ದು

ಹೀಗಾಗಿ ಇವತ್ತಿನ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ತುಂಬಾ ಮಹತ್ವ ಪಡೆದುಕೊಂಡಿದ್ದು ಶುಕ್ರವಾರ ಇಂದು ರಾಜ್ಯದ ಸರ್ಕಾರಿ ನೌಕರರಿಗೆ ಶುಭ ಸುದ್ದಿ ಸಿಗುತ್ತದೆಯಾ ಎಂಬ ನಿರೀಕ್ಷೆಯಲ್ಲಿ ರಾಜ್ಯದ ಸರ್ಕಾರಿ ನೌಕರರು ಇದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.