ಚಳಿಗಾಲದ ಅಧಿವೇಶನದಲ್ಲಿ ಧ್ವನಿ ಎತ್ತಲು NPS ನೌಕರರಿಂದ ನಾಳೆ ಮನವಿ ಸಲ್ಲಿಕೆ – ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ ಹೋರಾಟಕ್ಕೆ ಶಕ್ತಿ ತುಂಬಿ ಬಂಧುಗಳೇ

Suddi Sante Desk
ಚಳಿಗಾಲದ ಅಧಿವೇಶನದಲ್ಲಿ ಧ್ವನಿ ಎತ್ತಲು NPS ನೌಕರರಿಂದ ನಾಳೆ ಮನವಿ ಸಲ್ಲಿಕೆ – ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ ಹೋರಾಟಕ್ಕೆ ಶಕ್ತಿ ತುಂಬಿ ಬಂಧುಗಳೇ

ಬಾಗಲಕೋಟೆ

ಎನ್ ಪಿಎಸ್ ವಿಚಾರ ಕುರಿತಂತೆ ದಿನದಿಂದ ದಿನಕ್ಕೆ ರಾಜ್ಯದಲ್ಲಿ ಹೋರಾಟದ ಕಾವು ಜೋರಾ ಗುತ್ತಿದ್ದು ಇನ್ನೂ ಇತ್ತ ಡಿಸೆಂಬರ್ 19 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು ಹೀಗಾಗಿ ಈ ಒಂದು ಸಮಯದಲ್ಲಿ ಧ್ವನಿ ಎತ್ತುವಂತೆ ಒತ್ತಾಯಿಸಿ ಈಗಾಗಲೇ ರಾಜ್ಯದ ಹಲವೆಡೆ ಎನ್ ಪಿಎಸ್ ನೌಕರಿಂದ ಮನವಿ ಸಲ್ಲಿಕೆ ಕಾರ್ಯಕ್ರಮ ನಡೆಯಲಿದ್ದು

ಹೀಗಾಗಿ ನಾಳೆ ಬಾಗಲಕೋಟೆ ಮತಕ್ಷೇತ್ರದ ಶಾಸಕರಾದ ವೀರಣ್ಣ ಚರಂತಿಮಠ ರವರಿಗೆ ಮನವಿ ಸಲ್ಲಿಸಲು 05/12/2022 ಸೋಮವಾರ ದಂದು ಸಾಯಂಕಾಲ 04:00 ಘಂಟೆಗೆ ಬಸವೇ ಶ್ವರ ಕಾಲೇಜಿನ(ಹಳೆ ಬಾಗಲಕೋಟೆ) ಪ್ರವೇಶ ದ್ವಾರದಲ್ಲಿರುವ  ಬೀಳೂರ ಅಜ್ಜನವರ ಗುಡಿಯ ಹತ್ತಿರ ಆಗಮಿಸುವಂತೆ ಎಲ್ಲಾ NPS ನೌಕರ ಬಂಧುಗಳು ಹಾಜರಿರಲು ವಿನಂತಿಯನ್ನು ಮಾಡ ಲಾಗಿದೆ.

ಇದರೊಂದಿಗೆ ಪ್ರೌಢಶಾಲಾ ಎನ್ ಪಿಎಸ್ ಬಂಧುಗಳು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಈ ಮೂಲಕ ಬಾಗಲಕೋಟೆ ತಾಲ್ಲೂಕಾ ಪ್ರೌಢಶಾಲಾ NPS ನೌಕರ ಬಳಗ ಕರೆ ನೀಡಿದೆ.

ಸುದ್ದಿ ಸಂತೆ ನ್ಯೂಸ್

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.