ಸರ್ಕಾರಿ ಆದೇಶದ ಬೆನ್ನಲ್ಲೇ ಚಟುವಟಿಕೆ ಆರಂಭ ಮಾಡಿದ 7ನೇ ವೇತನ ಆಯೋಗದ ಅಧ್ಯಕ್ಷರು – ನೂತನ ಸದಸ್ಯರೊಂದಿಗೆ ಮಹತ್ವದ ಸಭೆ ಕರೆದ ಸುಧಾಕರ್ ರಾವ್ ರವರು

Suddi Sante Desk
ಸರ್ಕಾರಿ ಆದೇಶದ ಬೆನ್ನಲ್ಲೇ ಚಟುವಟಿಕೆ ಆರಂಭ ಮಾಡಿದ 7ನೇ ವೇತನ ಆಯೋಗದ ಅಧ್ಯಕ್ಷರು – ನೂತನ ಸದಸ್ಯರೊಂದಿಗೆ ಮಹತ್ವದ ಸಭೆ ಕರೆದ ಸುಧಾಕರ್ ರಾವ್ ರವರು

ಬೆಂಗಳೂರು

7ನೇ ವೇತನ ಆಯೋಗ ವಿಚಾರ ಕುರಿತಂತೆ ಸಮಿತಿ ರಚನೆಗೆ ಕೊನೆಗೂ ರಾಜ್ಯ ಸರ್ಕಾರ ಅಧಿಕೃತವಾದ ಆದೇಶವನ್ನು ಹೊರಡಿಸಿದ್ದು ಈ ಒಂದು ಆದೇಶವು ಅತ್ತ ಹೊರಬೀಳುತ್ತಿದ್ದಂತೆ ಇತ್ತ ಈ ಒಂದು ಸಮಿತಿಯ ನೂತನ ಅಧ್ಯಕ್ಷರಾ ಗಿರುವ ನಿವೃತ್ತ ಐಎಎಸ್ ಅಧಿಕಾರಿ ಸುಧಾಕರ್ ರಾವ್ ಅವರು ಪುಲ್ ಆಕ್ಟಿವ್ ಆಗಿದ್ದಾರೆ.

ಹೌದು ಹೆಸರನ್ನು ಘೋಷಣೆ ಮಾಡಿದ ನಂತರ ಒಂದಿಷ್ಟು ಕಾರ್ಯ ಚಟುವಟಿಕೆ ಆರಂಭ ಮಾಡಿ ಮತ್ತೆ ಸೈಲಂಟ್ ಆಗಿದ್ದ ಅಧ್ಯಕ್ಷರು ರಾಜ್ಯ ಸರ್ಕಾರ ದಿಂದ ಆದೇಶ ಬರುತ್ತಿದ್ದಂತೆ ಮತ್ತೆ ಕಾರ್ಯ ಚಟು ವಟಿಕೆಗಳನ್ನು ಆರಂಭ ಮಾಡಿದ್ದಾರೆ.ಸಮಿತಿಗೆ ಸದಸ್ಯರಾಗಿ ಆಯ್ಕೆಯಾಗಿರುವ ಮೂಲ ಸೌಕರ್ಯ ಇಲಾಖೆಯ ಜಂಟಿ ಕಾರ್ಯರ್ಶಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರನ್ನು ಆಯೋಗದ ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದ್ದು.

ನಿವೃತ್ತ ಐಎಎಸ್‌ ಅಧಿಕಾರಿ ಪಿ.ಬಿ.ರಾಮಮೂರ್ತಿ ಮತ್ತು ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ನಿವೃತ್ತ ಪ್ರಧಾನ ನಿರ್ದೇಶಕ ಶ್ರೀಕಾಂತ್‌ ಬಿ.ವನಹಳ್ಳಿ ಅವರನ್ನು ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಇವ ರೊಂದಿಗೆ ಅಧ್ಯಕ್ಷರು ಸಭೆಯನ್ನು ಕರೆದಿದ್ದಾರೆ

ಸಧ್ಯ ಈ ಒಂದು ಸಮಿತಿಗೆ ವರದಿಯನ್ನು ನೀಡೊದು ದೊಡ್ಡ ಕೆಲಸವಾಗಿದ್ದು ಹೀಗಾಗಿ ಸಾಲು ಸಾಲು ಚುನಾವಣೆಗಳು ಬರುವ ಹಿನ್ನಲೆ ಯಲ್ಲಿ ಹೀಗಾಗಿ ಸರ್ಕಾರ ನೀಡಿರುವ ಕಾಲ ಮೀತಿಯೊಳಗಾಗಿ ವರದಿಯನ್ನು ನೀಡೊದು ಸವಾಲಾಗಿದ್ದು ಇದರಿಂದಾಗಿ ಇಂದು ಅಧ್ಯಕ್ಷರು ತುರ್ತಾಗಿ ಸಮಿತಿಯ ಸದಸ್ಯರೊಂದಿಗೆ ಸಭೆಯನ್ನು ಕರೆದಿದ್ದು ಏನೇನು ಚರ್ಚೆಯಾ ಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ. ಒಟ್ಟಾರೆ ಏನೇ ಆಗಲಿ ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಆದೇಶ ಆಗಿದ್ದು ಸಂತೋಷದ ವಿಚಾರವಾಗಿದೆ.

ಸುದ್ದಿ ಸಂತೆ ನ್ಯೂಸ್

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.