ಡೋರಿ ಗ್ರಾಮದಲ್ಲಿ ನಾಗರಾಜ ಛಬ್ಬಿ ಟೀಮ್ ನಿಂದ ಕುಕ್ಕರ್ ಗಳ ವಿತರಣೆ – ಗ್ರಾಮಕ್ಕೆ ಆಗಮಿಸಿದ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಅವರ ಮುಂದೆ ಸಮಸ್ಯೆಗಳನ್ನು ಹೇಳಿಕೊಂಡು ಬೆಂಬಲ ನೀಡಿದ ಗ್ರಾಮಸ್ಥರು

Suddi Sante Desk
ಡೋರಿ ಗ್ರಾಮದಲ್ಲಿ ನಾಗರಾಜ ಛಬ್ಬಿ ಟೀಮ್ ನಿಂದ ಕುಕ್ಕರ್ ಗಳ ವಿತರಣೆ – ಗ್ರಾಮಕ್ಕೆ ಆಗಮಿಸಿದ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಅವರ ಮುಂದೆ ಸಮಸ್ಯೆಗಳನ್ನು ಹೇಳಿಕೊಂಡು ಬೆಂಬಲ ನೀಡಿದ ಗ್ರಾಮಸ್ಥರು

ಕಲಘಟಗಿ

ಅತ್ತ ಚುನಾವಣೆಯ ಸಿದ್ದತೆಯಲ್ಲಿ ಎಲ್ಲಾ ರಾಜಕೀಯ ಪಕ್ಷದರವರು ಭರ್ಜರಿ ಸಿದ್ದತೆ ಮಾಡುತ್ತಿದ್ದರೆ ಇತ್ತ ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ನಾಗರಾಜ ಛಬ್ಬಿ ಟೀಮ್ ನಿಂದ ಕ್ಷೇತ್ರದಲ್ಲಿ ಪ್ರವಾಸ ಬಲು ಜೋರಾಗಿದೆ.

ಕಳೆದ ಒಂದೂವರೆ ಎರಡು ತಿಂಗಳಿನಿಂದ ಕ್ಷೇತ್ರದಲ್ಲಿ ಬಿಡುವಿಲ್ಲದೇ ಸುತ್ತಾಡುತ್ತಿರುವ ನಾಗರಾಜ್ ಛಬ್ಬಿ ಮತ್ತು ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಹೋದಲ್ಲೆಲ್ಲ ಉತ್ತಮವಾಗಿ ಸ್ಪಂದನೆ ಬೆಂಬಲ ಕಂಡು ಬರುತ್ತಿದೆ.ಕೇವಲ ಕುಕ್ಕರ್ ಗಳನ್ನು ವಿತರಣೆ ಮಾಡಿದೇ ಮೊದಲ ಗ್ರಾಮದಲ್ಲಿ  ಗ್ರಾಮಸ್ಥರೊಂದಿಗೆ ಸಭೆಯನ್ನು ಮಾಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿ ನಂತರ ಕುಕ್ಕರ್ ಗಳನ್ನು ವಿತರಣೆ ಮಾಡಲಾಗುತ್ತಿದೆ.

ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲಿ ಈ ಒಂದು ಚಿತ್ರಣವು ಕಂಡು ಬರುತ್ತಿದ್ದು ಡೋರಿ ಗ್ರಾಮ ದಲ್ಲೂ ಕೂಡಾ ಈ ಒಂದು ಕಾರ್ಯಕ್ರಮವು ನಡೆಯಿತು.ಹೌದು ಕಲಘಟಗಿ ವಿಧಾನಸಭಾ ಕ್ಷೇತ್ರದ ಡೋರಿ ಗ್ರಾಮದಲ್ಲಿ ಶ್ರೀಮತಿ ಜ್ಯೋತಿ ನಾಗರಾಜ್ ಛಬ್ಬಿ ರವರ ನೇತೃತ್ವದಲ್ಲಿ ಕುಕ್ಕರ್ ವಿತರಣಾ ಕಾರ್ಯಕ್ರಮ ನಡೆಯಿತು.

ಗ್ರಾಮದ ಹಿರಿಯರಾದ ಶಶಿಧರ್ ಇನಾಮ್ದಾರ್ ಗ್ರಾಮ ಪಂಚಾಯತಿ ಅಧ್ಯಕ್ಷ ಉಮೇಶ್ ಕದಂ ಅಲ್ಲಾಭಕ್ಷ್ ಬಡಗಿ,ದಾಕ್ಷಾಯಿಣಿ ಗೋವೇಕರ್, ಕುಮಾರ್ ನಾಯಕ್ ,ಬಾಬು ಕೊನೆವಾಡಿ, ಸಂಗಯ್ಯ ಹಿರೇಮಠ, ವಿನೋದ್ ನಾಯ್ಕರ್, ರಮೇಶ್ ಹರಿಜನ್,ಪ್ರದೀಪ್ ಕುಣಕಿಕೊಪ್ಪ, ಪ್ರಕಾಶ್ ಕುಂಕಿಕೊಪ್ಪ,ಅಮೀನಾಬೇಗಂ ನದಾಫ್, ಅಶೋಕ್ ರೇಡೇಕರ್, ಮಂಜುನಾಥ್ ಕುಂಕಿ ಕೊಪ್ಪ, ಪುಂಡಲಿಕ್ ಬೇಲೂರ, ಪಕೀರ್ ಕಾಂಬ್ಳೆಕರ್,ಮಂಜುನಾಥ ಮೋರಬದ, ಮತ್ತು ಗ್ರಾಮದ ಸಮಸ್ತ ಗುರು ಹಿರಿಯರು ತಾಯಂ ದಿರು ಅಳ್ಳಾವರ ಭಾಗದ ಎಲ್ಲಾ ಮುಖಂಡರು ಉಪಸ್ಥಿತರಿದ್ದು ಕುಕ್ಕರ್ ವಿತರಣೆಯ ಕಾರ್ಯ ಕ್ರಮವನ್ನು ಯಶಶ್ವಿಗೊಳಿಸಿದರು.

ಸುದ್ದಿ ಸಂತೆ ನ್ಯೂಸ್ ಕಲಘಟಗಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.