OPS ಗಾಗಿ ಮಾರ್ಚ್ ನಂತರ ಹೋರಾಟ – ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಹೋರಾಟ ಎಂದರು ಷಡಾಕ್ಷರಿ ಅವರು

Suddi Sante Desk
OPS ಗಾಗಿ ಮಾರ್ಚ್ ನಂತರ ಹೋರಾಟ – ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಹೋರಾಟ ಎಂದರು ಷಡಾಕ್ಷರಿ ಅವರು

ಶಿವಮೊಗ್ಗ

ಎನ್ ಪಿಎಸ್ ರದ್ದತಿಗಾಗಿ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಮಾರ್ಚ್ ನಂತರ ಹೋರಾಟವನ್ನು ಮಾಡಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಹೇಳಿದರು.ಶಿವಮೊಗ್ಗದಲ್ಲಿ ಮಾತನಾಡಿದ ಅವರು ಎನ್‌ ಪಿ ಎಸ್ ರದ್ದತಿ ಕುರಿ ತಂತೆ ಬೆಂಗಳೂರಿನಲ್ಲಿ ದೊಡ್ಡ ಹೋರಾಟವನ್ನು ಮಾಡಲಾಗುತ್ತದೆ ಎಂದರು.

NPS ರದ್ದು ಮಾಡಿ OPS ನ್ನು ತರಬೇಕೆಂದು ಈಗ ಒಂದು ಗುಂಪು ಬೆಂಗಳೂರಿನಲ್ಲಿ ಹೋರಾಟ ನಡೆಸುತ್ತಿದೆ.ಆದರೆ 7ನೇ ಹಣಕಾಸು ಆಯೋಗ ಜಾರಿಯಾಗುವ ತನಕ ಸರ್ಕಾರಿ ನೌಕರರ ಸಂಘ ಕಾಯ್ದು ನೋಡಿ ನಂತರ ಎನ್‌ ಪಿ ಎಸ್ ರದ್ದತಿ ಗಾಗಿ ಹೋರಾಟವನ್ನು ಮಾಡಲಾಗುವುದು ಎಂದರು.ಇನ್ನೂ ಸರ್ಕಾರಿ ನೌಕರರು ದಿಢೀರ್ ಅಂತಾ ಪ್ರತಿಭಟನೆಗೆ ಕುಳಿತರೆ ಕಚೇರಿಗಳು ಬಾಗಿಲು ಹಾಕಬೇಕಾಗುತ್ತದೆ ಕಳೆದ ಎರಡೂವರೆ ವರ್ಷದಿಂದ ಸರ್ಕಾರಿ ನೌಕರರ ಸಂಘದಲ್ಲಿ ರಾಜ್ಯಾಧ್ಯಕ್ಷನಾಗಿ ನೌಕರರ ಪರ 22 ಆದೇಶವನ್ನ ಹೊರಡಿಸಲು ಶ್ರಮಿಸಿದ್ದೇನೆ ಯಾವ ಅಧ್ಯಕ್ಷರು ಮಾಡದ ಕೆಲಸವನ್ನ ಮಾಡಿ ತೋರಿಸಿದ್ದೇನೆ.

ಎರಡೂವರೆ ವರ್ಷದಿಂದ ನಾವು ಎನ್ ಪಿ ಎಸ್ ಗೆ ಮೊದಲು ಕೈಹಾಕಿದರೆ ಉಳಿದ 22 ಕೆಲಸಗಳು ಆಗ್ತಾ ಇರಲಿಲ್ಲವೆಂದರು.ಇನ್ನೂ ಸಮಯ ಸಂದರ್ಭ ನೋಡಿಕೊಂಡು ಸಂಘ ಹೋರಾಟಕ್ಕೆ ಇಳಿಯಲಿದೆ ಇನ್ನೂ ಸರ್ಕಾರಿ ಹುದ್ದೆಗಳ ಭರ್ತಿ ಬಗ್ಗೆ ಮಾತನಾಡಿ ಸರ್ಕಾರ ಭರ್ತಿ ಮಾಡಿಕೊಳ್ಳಲು ಹೋದರೆ ನ್ಯಾಯಾಲಯಕ್ಕೆ ಹೋಗ್ತಾರೆ ಹೊರ ಗುತ್ತಿಗೆ ನೌಕರರನ್ನು ತೆಗೆದುಕೊಂಡರೆ ಏಜೆನ್ಸಿ ಯವರಿಂದ ಸಮಸ್ಯೆಯಾಗುತ್ತಿದೆ. ಹೊರಗುತ್ತಿಗೆ, ಏಜೆನ್ಸಿ ಮೂಲಕ ನೇಮಕಾತಿಗಳನ್ನು ರದ್ದು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂ ಡಿರುವೆ ಎಂದರು.

ಸುದ್ದಿ ಸಂತೆ ನ್ಯೂಸ್ ಶಿವಮೊಗ್ಗ …..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.