ಭಾವುಕರಾಗುತ್ತಾ ವಿದಾಯದ ಭಾಷಣ ಮಾಡಿದ ರಾಜಾಹುಲಿ BSY – ಮತ್ತೆ ಸದನಕ್ಕೆ ಬರುವುದಿಲ್ಲ ಇದು ವಿದಾಯದ ಭಾಷಣ ಎಂದ ಮಾಜಿ ಸಿಎಂ ಯಡಿಯೂರಪ್ಪ

Suddi Sante Desk
ಭಾವುಕರಾಗುತ್ತಾ ವಿದಾಯದ ಭಾಷಣ ಮಾಡಿದ ರಾಜಾಹುಲಿ BSY – ಮತ್ತೆ ಸದನಕ್ಕೆ ಬರುವುದಿಲ್ಲ ಇದು ವಿದಾಯದ ಭಾಷಣ ಎಂದ ಮಾಜಿ ಸಿಎಂ ಯಡಿಯೂರಪ್ಪ

ಬೆಂಗಳೂರು

ಕಳೆದ 40 ವರ್ಷಗಳಿಂದ ವಿಧಾನ ಸಭೆಯಲ್ಲಿ ರಾಜಾಹುಲಿಯಾಗಿ ಮೆರೆದಿದ್ದ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ವಿಧಾಯದ ಭಾಷಣ ವನ್ನು ಮಾಡಿದ್ದಾರೆ.ಹೌದು ಬಜೆಟ್ ಮೇಲಿನ ಚರ್ಚೆಯ ಮಧ್ಯೆ ಮಾತನಾಡಿದ ಬಿಎಸ್ ವೈ ಇನ್ನೂ ಮುಂದೆ ವಿಧಾನಸಭೆಗೆ ನಾನು ಬರುವ ಪ್ರಶ್ನೆಯೆ ಇಲ್ಲ ಇದೇ ಕೊನೆಯ ಅಧಿವೇಶವ ಎಂದರು.ವಿಧಾನಸಭೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿದಾಯದ ಭಾಷಣ ಮಾಡಿದ್ದು ನಾನು ಮತ್ತೆ ಚುನಾವಣೆಗೆ ನಿಲ್ಲಲ್ಲ ಇದು ತಮ್ಮ ಕೊನೆ ಭಾಷಣವೆಂದು ಭಾವುಕರಾದ ಪ್ರಸಂಗವೂ ಕಂಡು ಬಂದಿತು.

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ಹಾಗೂ ವಿದಾಯದ ಭಾಷಣ ಮಾಡಿದ ಯಡಿ ಯೂರಪ್ಪ ನಾನು ಮತ್ತೆ ಚುನಾವಣೆಗೆ ನಿಲ್ಲುವು ದಿಲ್ಲ ಎಂದು ಹೇಳಿದ್ದೇನೆ.ಮತ್ತೆ ನಾನು ಸದನದ ಒಳಗೆ ಬರುವ ಪ್ರಶ್ನೆಯೇ ಇಲ್ಲ ಈ ವೇಳೆ ವಿಪಕ್ಷ ಸದಸ್ಯರಾದ ಪ್ರಿಯಾಂಕ್ ಖರ್ಗೆ, ಶಿವಲಿಂಗೇ ಗೌಡರು ಯಡಿಯೂರಪ್ಪ ಮತ್ತೆ ಚುನಾವಣೆಗೆ ನಿಂತು ಗೆಲ್ಲಬೇಕು ಎಂದು ಘೋಷಣೆ ಕೂಗಿದರು. ಈ ವೇಳೆ ಭಾವುಕರಾದ ಯಡಿಯೂರಪ್ಪ ಮತ್ತೆ ನಾನು ಸದನಕ್ಕೆ ಬರುವುದಿಲ್ಲ, ಚುನಾವಣೆಗೆ ನಿಲ್ಲುವುದಿಲ್ಲ, ಇದು ಒಂದು ರೀತಿಯ ವಿದಾಯದ ಭಾಷಣ ಎಂದು ಗದ್ಗದಿತರಾದರು.ವಿಪಕ್ಷದ ಬಹಳಷ್ಟು ನಾಯಕರು ನಮ್ಮ ಜೊತೆ ಬರಲು ಸಿದ್ಧರಿದ್ದಾರೆ.

ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುತ್ತೇವೆ. ಕಾಂಗ್ರೆಸ್ ಮತ್ತೆ ವಿಪಕ್ಷದಲ್ಲಿಯೇ ಕೂರುವುದು ನಿಶ್ಚಿತ ಎನ್ನುತ್ತಾ ಮಾತುಗಳನ್ನು ಮುಗಿಸಿದರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.