ಪ್ರಾಮಾಣಿಕತೆ ಮೆರೆದ 6ನೇ ತರಗತಿಯ ವಿದ್ಯಾರ್ಥಿನಿ – ಮಾದರಿಯಾಯಿತು ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಅಮೃತಾಳ ಕಾರ್ಯ…..

Suddi Sante Desk
ಪ್ರಾಮಾಣಿಕತೆ ಮೆರೆದ 6ನೇ ತರಗತಿಯ ವಿದ್ಯಾರ್ಥಿನಿ – ಮಾದರಿಯಾಯಿತು ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಅಮೃತಾಳ ಕಾರ್ಯ…..

ಬಾಗಲಕೋಟ

ಹೌದು ಶಾಲಾ ಮೈದಾನದಲ್ಲಿ ಕಳೆದುಕೊಂಡಿದ್ದ 2 ಗ್ರಾಂ ಚಿನ್ನದ ಕಿವಿಯೋಲೆಯನ್ನು ಐದನೇ ತರಗತಿ ಬಾಲಕಿ ಚಿನ್ನ ಕಳೆದುಕೊಂಡವರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾಳೆ.ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿ ಅಮೃತಾ ಕೊಣ್ಣೂರ ಶಾಲಾ ಮೈದಾನದಲ್ಲಿ ಆಟ ವಾಡುತ್ತಿದ್ದಾಗ ಬಂಗಾರದ ಕಿವಿಯೋಲೆ ಸಿಕ್ಕಿತ್ತು ಅದನ್ನು ತಂದು ಶಾಲಾ ಶಿಕ್ಷಕರಿಗೆ ನೀಡಿದ್ದಾಳೆ.

ಕೆಲವು ದಿನಗಳ ನಂತರ ಭಾಗ್ಯಶ್ರೀ ಸೂಳೇಭಾವಿ ಎಂಬ ಮಗುವಿನ ಪೋಷಕರು ಶಾಲೆಗೆ ಬಂದು ತಮ್ಮ ಮಗುವಿನ ಕಿವಿಯೋಲೆ ಕಳೆದಿದೆ ಎಂಬ ವಿಷಯವನ್ನು ಶಿಕ್ಷಕರ ಗಮನಕ್ಕೆ ತಂದಿದ್ದಾರೆ ಆಗ ನಿಜವಾದ ಫಲಾನುಭವಿಯ ಹುಡುಕಾಟದಲ್ಲಿ ಕಾರ್ಯಪ್ರವೃತ್ತರಾಗಿದ್ದ ಶಿಕ್ಷಕರು ಇನ್ನೊಂದು ಕಿವಿಯೋಲೆ ತಂದು ತೋರಿಸಿ ಎಂದಿದ್ದಾರೆ ಪೋಷಕರು ತಂದ ಕಿವಿಯೋಲೆಯನ್ನು ಶಿಕ್ಷಕರು ಕೂಲಂಕುಷವಾಗಿ ಪರಿಶೀಲಿಸಿದ ನಂತರ ಎರಡು ಕಿವಿಯೋಲೆ ಒಂದೆ ಜೋಡಿ ಎಂದು ಖಚಿತಪಡಿಸಿ ಕೊಂಡು ನಂತರ ಅದನ್ನು ಸ್ವತಃ ವಿದ್ಯಾರ್ಥಿನಿ ಅಮೃತಾ ಕೊಣ್ಣೂರ ಕೈಯಿಂದಲೇ ಕಳೆದು ಕೊಂಡ ಕುಟುಂಬಕ್ಕೆ ಮರಳಿಸಿದ್ದಾರೆ.

ಅಮೃತಾಳ ಪ್ರಾಮಾಣಿಕತೆಯಿಂದ ಕಳೆದುಕೊಂಡ ಬಂಗಾರ ಮತ್ತೆ ನಮ್ಮ ಕೈ ಸೇರಿತು ಇಂತಹ ಮಕ್ಕಳ ಸಂಖ್ಯೆ ಹೆಚ್ಚಾಗಲಿ ಎಂದು ಪ್ರಾಮಾಣಿಕತೆ ಮೆರೆದ ಬಾಲಕಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ದರು ಸ್ಥಳದಲ್ಲಿ ಶಿಕ್ಷಕರಾದ ಎಸ್‌.ಎಸ್‌. ಲಾಯದ ಗುಂದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಬಾಗಲಕೋಟ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.