ಇಂದಿನಿಂದ ಅಧಿವೇಶನ ಆರಂಭ – ರಾಜ್ಯ ಸರ್ಕಾರದ ಮೊದಲ ಅಧಿವೇಶನಕ್ಕೆ ಸಾಲು ಸಾಲುಗಳ ಸಮಸ್ಯೆಗಳ ಸುರಿಮಳೆ…..

Suddi Sante Desk
ಇಂದಿನಿಂದ ಅಧಿವೇಶನ ಆರಂಭ – ರಾಜ್ಯ ಸರ್ಕಾರದ ಮೊದಲ ಅಧಿವೇಶನಕ್ಕೆ ಸಾಲು ಸಾಲುಗಳ ಸಮಸ್ಯೆಗಳ ಸುರಿಮಳೆ…..

ಬೆಂಗಳೂರು

ಇಂದಿನಿಂದ ರಾಜ್ಯ ಸರ್ಕಾರದ ಮೊದಲ ಅಧಿವೇಶನ ನೆಡಯಲಿದೆ.ಹೌದು ಕರ್ನಾಟಕ ವಿಧಾನಸಭೆ ಚುನಾವಣೆ-2023ರಲ್ಲಿ  ಕಾಂಗ್ರೆಸ್ ಸರ್ಕಾರ ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರ ಗದ್ದುಗೆ ಏರಿದೆ.

ಹೊಸ ಸರ್ಕಾರದ ಮೊದಲ ವಿಧಾನಮಂಡಲದ ಅಧಿವೇಶನ ಇಂದಿನಿಂದ ಆರಂಭಗೊಳ್ಳಲಿದೆ. ಜುಲೈ.3ರ ಇಂದಿನಿಂದ ಜುಲೈ.14ರವರೆಗೆ ವಿಧಾನಮಂಡಲದ ಉಭಯ ಸದನಗಳ ಕಲಾಪ  ನಡೆಯಲಿದೆ. ಜುಲೈ.3ರ ಮೊದಲ ದಿನದ ಮಧ್ಯಾಹ್ನ 12 ಗಂಟೆಗೆ ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭಾಷಣ ಮಾಡಲಿದ್ದಾರೆ.

ಹೊಸ ಸರ್ಕಾರದ ಮೊದಲ ಅಧಿವೇಶನದಲ್ಲಿ ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಕೈಗೊಂಡ ಮತಾಂತರ ನಿಷೇಧ ಕಾಯ್ದೆ ರದ್ದು ಗೋಹತ್ಯೆ ನಿಷೇಧ ಕಾಯ್ದೆ ವಾಪಾಸ್ ಸೇರಿದಂತೆ ವಿವಿದ ಮಸೂದೆಗಳನ್ನು ಮಂಡಿಸಿ ಸರ್ಕಾರ ಅಂಗೀಕಾರ ಪಡೆಯುವ ನಿರೀಕ್ಷೆಯಿದೆ.

ರಾಜ್ಯ ಸರ್ಕಾರವನ್ನು ಕಟ್ಟಿ ಹಾಕಲು ಬಿಜೆಪಿ ಹಾಗೂ ಜೆಡಿಎಸ್ ತಯಾರಿ ನಡೆಸಿದ್ದು ಯಾವೆಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷದ ವರು ಮಾತಿನ ಮಲ್ಲಯುದ್ಧದ ಮೂಲಕ ಕಟ್ಟಿ ಹಾಕಲಿವೆ ಹೋರಾಟ ಮಾಡಲಿವೆ ಎಂಬು ದನ್ನು  ಕಾದು ನೋಡಬೇಕಿದೆ.

ವಿಪಕ್ಷಗಳನ್ನು ಮಣಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕೂಡಾ ತಯಾರಿ ನಡೆಸಿದೆ.ಅಲ್ಲದೇ ಇದೇ ವಿಧಾನಮಂಡಲದ ಅಧಿವೇಶನದಲ್ಲೇ ಜುಲೈ 7 ರಂದು ಕರ್ನಾಟಕ ಬಜೆಟ್ ಅನ್ನು ಕೂಡ ಮಂಡಿಸಲಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.