This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಸಿದ್ದತೆಗಳಿಲ್ಲದೇ ಶಾಲೆ ಆರಂಭಕ್ಕೆ ನಿರ್ಧಾರ – ಎಡವಟ್ಟು ಮಾಡಿಕೊಳ್ಳುತ್ತಾ ಸರ್ಕಾರ – ಆತಂಕದ ನಡುವೆ ಈ ನಿರ್ಧಾರ ಯಾಕೆ…..

WhatsApp Group Join Now
Telegram Group Join Now

ಬೆಂಗಳೂರು –

ಕೋವಿಡ್ ಮಹಾಮಾರಿ ಕಡಿಮೆಯಾಗುತ್ತಿದೆ ಎನ್ನುವಷ್ಟರಲ್ಲಿಯೇ ಮತ್ತೆ ಮೂರನೇಯ ಅಲೆಯ ಆತಂಕ. ಇದರ ನಡುವೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಇಂದಿನಿಂದ ನೈಟ್ ಕರ್ಫ್ಯೂ ವಿಕೇಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಇನ್ನೂ ಇದೆಲ್ಲದರ ನಡುವೆ ಇನ್ನೂ ಕೂಡಾ ರಾಜ್ಯದಲ್ಲಿ ಶಿಕ್ಷಕರಿಗೆ ಪೂರ್ಣ ಪ್ರಮಾಣದಲ್ಲಿ ಲಸಿಕೆ ನೀಡಲಾಗಿಲ್ಲ. ಜೊತೆಗೆ ಮಕ್ಕಳಿಗೂ ಕೂಡಾ ಲಸಿಕೆ ಹಾಕಿಲ್ಲ ಮತ್ತೆ ಡೆಲ್ಟಾ ಪ್ಲಸ್ ಆತಂಕ ಜೊತೆಗೆ ಇನ್ನೂ ಕೂಡಾ ಪೂರ್ಣ ಪ್ರಮಾಣದಲ್ಲಿ ಸಿದ್ದತೆಗಳು ಕೂಡಾ ಮುಗಿದಿಲ್ಲ ಇಂತಹ ಪರಸ್ಥಿತಿಯ ನಡುವೆ ಆಗಸ್ಟ್ 23 ರಂದು ರಾಜ್ಯದಲ್ಲಿ ಶಾಲೆಗಳ ಆರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಧಾರವನ್ನು ತಗೆದಕೊಂಡಿದ್ದಾರೆ.

ಹೌದು ಬಹು ದಿನಗಳ ನಂತರ ಶಾಲಾ ಕಾಲೇಜು ಓಪನ್ ಗೆ ಕೋವಿಡ್ ಸಲಹಾ ಸಮಿತಿ‌ ಹಾಗೂ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಹಾಗಾದರೆ ಕಳೆದ ಎರಡು ವರ್ಷಗಳಿಂದ ಶಾಲಾ ಕಾಲೇಜ್ ಗೆ ಬರದ ವಿದ್ಯಾರ್ಥಿಗಳು ಈಗ ಬರ್ತಾರಾ? ಅಥವಾ ಮೂರನೇ ಅಲೆ ಅಂತಾ ಪೋಷಕರು ಬೇಡ ಅಂತಾರಾ? ಹಾಗಾದರೆ ಏನಾಗುತ್ತೆ ವಿದ್ಯಾರ್ಥಿಗಳ ಸ್ಕೂಲ್ ಭವಿಷ್ಯ? ಕೊವೀಡ್ ಎಂಬ ಮಹಾಮಾರಿ ಯಿಂದ ಕಳೆದ ಸುಮಾರು 18 ತಿಂಗಳಿಂದ ಶಾಲೆ ಯಿಂದ ವಂಚಿತರಾಗಿ ಕಲಿಕೆಯಿಂದ ವಿದ್ಯಾರ್ಥಿಗಳು ದೂರ ಇರುವಂತೆಯಾಗಿತ್ತು.

ಆದರೆ ಇದೀಗ ಸರ್ಕಾರ ಇದೇ ತಿಂಗಳು 23 ರಿಂದ ಹಂತ ಹಂತವಾಗಿ ಶಾಲೆ ಆರಂಭ ಮಾಡುವುದಾಗಿ ಏಕಾಏಕಿ ಹೇಳಿಕೆ ಕೊಟ್ಟು ಯಡವಟ್ಟು ಮಾಡ್ತಿದಿ ಯಾ ಎಂಬ ಪ್ರಶ್ನೆ ಈಗ ಉದ್ಬವವಾಗಿದೆ.ಏಕೆಂದರೆ ವಿದ್ಯಾರ್ಥಿಗಳಿಗೆ ಇನ್ನೂ ಕೂಡಾ ಲಸಿಕೆ ಬಿಟ್ಟಿಲ್ಲ. ಯಾವುದೇ 16 ವರ್ಷದ ಒಳಗೆ ಇರುವ ವಿದ್ಯಾರ್ಥಿ ಲಸಿಕೆ ಪಡೆದಿಲ್ಲ.ಆದ್ರೆ ಇದೀಗ ಮಕ್ಕಳಿಗೆ ಲಸಿಕೆ ಕೊಡದೇ ಶಾಲೆ ಆರಂಭ ಮಾಡುವುದಾಗಿ ಹೇಳಿದ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಯಾಕೆ ಸಿದ್ಧತೆ ಮಾಡಿಕೊಂಡಿಲ್ಲ.ಸಿದ್ಧತೆ ಮಾಡಿಕೊಳ್ಳದೆ ಶಾಲೆ ಆರಂಭ ಮಾಡಿ ಮಕ್ಕಳಿಗೆ ಕಂಟಕ ತರುತ್ತಾರಾ? ಎಂಬ ಪ್ರಶ್ನೆ ಸಾಮಾನ್ಯವಾಗಿ ಕಾಡ್ತಿದೆ.ಒಂದು ಕಡೆ ಕೊರೊನಾ ಮೂರನೇ ಅಲೆಯ ಆರ್ಭಟ ಮತ್ತೊಂದು ಕಡೆ ಟೆಲ್ಟಾ ಪ್ಲಸ್ ವೈರಸ್ ಆತಂಕ.

ಈ ಎರಡರ ನಡುವೆ ವಿದ್ಯಾರ್ಥಿಗಳ ಜೀವ ಮುಖ್ಯನಾ ? ಭವಿಷ್ಯ ಮುಖ್ಯನಾ? ಎಂಬ ಪ್ರಶ್ನೆ ಸಾಮಾನ್ಯವಾಗಿ ಕಾಡುತ್ತಿದೆ.ಪೋಷಕರಾದ ವಾಣಿ ಮಗುವಿನ ಭವಿಷ್ಯಕ್ಕಿಂತ ಜೀವನೇ ಮುಖ್ಯವೆಂದು ಹೇಳ್ತಾರೆ. ಅಷ್ಟೇ ಅಲ್ಲದೇ ಲಸಿಕೆ ಇಲ್ಲದೆ ಯಾವುದೇ ಕಾರಣಕ್ಕೂ ಮಕ್ಕಳನ್ನ ಶಾಲೆಗೆ ಕಳಿಸುವುದಿಲ್ಲ ಎಂದು ಅಸಮಾಧಾನ ಹೊರಹಾಕಿದ್ರು.ಒಟ್ನಲ್ಲಿ ಮೂರನೇ ಅಲೆ ಆರ್ಭಟ ಇದೆ ಅಂತಾ ತಜ್ಞರು ಸೂಚನೆ ಕೊಟ್ರು ಸಹ ಸರ್ಕಾರ ಉಢಾಪೆ ಹೇಳಿಕೆ ನೀಡುವ ಮೂಲಕ ಮಕ್ಕಳ ಜೀವದ ಜೊತೆ ಭವಿಷ್ಯದ ಚೆಲ್ಲಾಟವಾಡುವುದಕ್ಕೆ ಮುಂದಾಗಿದೆ . ಹಾಗಾಗಿ ಪೋಷಕರು ಮೊದಲು ಲಸಿಕೆ ಕೊಡಿ ಅನಂತರ ಶಾಲೆ ಆರಂಭಿಸಿ ಎಂದು ಒಕ್ಕೂರಿಲಿನಿಂದ ಒತ್ತಾಯಿಸಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೊಡಬೇಕು


Google News

 

 

WhatsApp Group Join Now
Telegram Group Join Now
Suddi Sante Desk