ಸಹೋದರಿಬ್ಬರ ಆತ್ಮಹತ್ಯೆ  ಮೂವರ ಬಂಧನ  – ತೀವ್ರಗೊಂಡ ತನಿಖೆ…..

Suddi Sante Desk
ಸಹೋದರಿಬ್ಬರ ಆತ್ಮಹತ್ಯೆ  ಮೂವರ ಬಂಧನ  – ತೀವ್ರಗೊಂಡ ತನಿಖೆ…..

ಉತ್ತರಪ್ರದೇಶ

ಸಹೋದರಿಬ್ಬರ ಆತ್ಮಹತ್ಯೆ ಪ್ರಕರಣ ಕುರಿತು  ಮೂವರನ್ನು ಬಂಧನ ಮಾಡಿದ ಘಟನೆ ಉತ್ತರ ಪ್ರದೇಶ ದಲ್ಲಿ ನಡೆದಿದೆ ಹೀಗಾಗಿ ಇತ್ತ ಪೊಲೀಸರು ಈ ಒಂದು ಪ್ರಕರಣ ದ ತನಿಖೆ ಯನ್ನು  ತೀವ್ರಗೊಳಿಸಿದ್ದಾರೆ.ಹೌದು ಉತ್ತರ ಪ್ರದೇಶದ ಆಶ್ರಮದಲ್ಲಿ ಸಹೋದರಿಯರಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಮೂವರನ್ನು ಬಂಧಿಸಲಾಗಿದೆ.

ಆಗ್ರಾ ಜಿಲ್ಲೆಯ ಜಗನೇರ್‌ ಪಟ್ಟಣದಲ್ಲಿರುವ ಬ್ರಹ್ಮಕುಮಾರಿ ಆಶ್ರಮದಲ್ಲಿ ಸಹೋದರಿಯ ರಾದ ಏಕ್ತಾ ಸಿಂಘಾಲ್(38) ಮತ್ತು ಶಿಖಾ ಸಿಂಘಾಲ್ (34) ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸ ಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಹೋದರಿಯರು ಕೃತ್ಯಕ್ಕೆ ಮೊದಲು ಪತ್ರ ಬರೆದಿಟ್ಟಿದ್ದು ನಮ್ಮ ಈ ಆತ್ಮಹತ್ಯೆಗೆ ನೀರಜ್, ತಾರಾ ಚಂದ್, ಗುಡ್ಡನ್ ಮತ್ತು ಪೂನಂ ಅವರೇ ಕಾರಣ ಎಂದು ತಿಳಿಸಿದ್ದರು.ಜೊತೆಗೆ ಸಹೋದರಿ ಯರ ಮೊಬೈಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದರು.ಇದರ ಆಧಾರದ ಮೇರೆಗೆ ಜಗನೇರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊ ಳ್ಳಲಾಗಿತ್ತು.

ಆತ್ಮಹತ್ಯೆ ಪತ್ರದಲ್ಲಿ ಹೆಸರಿಸಲಾದ ನೀರಜ್ ಸಿಂಘಾಲ್,ತಾರಾ ಚಂದ್ ಮತ್ತು ಗುಡ್ಡನ್ ಸಹೋದರಿಯರಿಗೆ ಸಂಬಂಧಿಗಳಾಗಿದ್ದು, ಪೂನಂ ಎಂಬಾಕೆ ಆಶ್ರಮದ ಸದಸ್ಯೆಯಾಗಿದ್ದಾಳೆ

ಸುದ್ದಿ ಸಂತೆ ನ್ಯೂಸ್ ಆಗ್ರಾ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.