This is the title of the web page
This is the title of the web page

Live Stream

[ytplayer id=’1198′]

July 2025
T F S S M T W
 12
3456789
10111213141516
17181920212223
24252627282930
31  

| Latest Version 8.0.1 |

Local News

ಅರವಿಂದ ಬೆಲ್ಲದ,ಯತ್ನಾಳ್ ಇಬ್ಬರಲ್ಲಿ ಒಬ್ಬರು CM ಆಗತಾರೆ ಎಂದುಕೊಂಡಿದ್ದೇವು – ಜಯ ಮೃತ್ಯುಂಜಯ ಸ್ವಾಮಿಜಿ ಮಾತು

WhatsApp Group Join Now
Telegram Group Join Now

ಬೆಳಗಾವಿ –

ಇತ್ತೀಚೆಗೆ ನಡೆದಹೊಸ ಸಂಪುಟದಿಂದ ಬಸನಗೌಡ ಪಾಟೀಲ್ ಯತ್ನಾಳ್ ಇಲ್ಲವೇ ಅರವಿಂದ ಬೆಲ್ಲದ್ ಮುಖ್ಯಮಂತ್ರಿ ಆಗತಾರೆ ಎಂದುಕೊಂಡಿದ್ದೇವು ಎಂದು ಬಸವ ಜಯಮೃತ್ಯುಂಜಯ ಸ್ವಾಮಿಜಿ ಹೇಳಿದರು‌.ಬೆಳಗಾವಿಯಲ್ಲಿ ಮಾತನಾಡಿದ ಅವರು ನಾನು ಪ್ರಾಮಾಣಿಕವಾಗಿ ಮೀಸಲಾತಿಗಾಗಿ ಒತ್ತಾಯಿಸಿ ಪಾದಯಾತ್ರೆ ಮಾಡಿದ್ದೆ ಎಂದರು

ಈ ವೇಳೆ ಪ್ರಧಾನಿ ಮೋದಿಗೆ ಒಂದು ಸತ್ಯ ಗೊತ್ತಾಯಿತು.ಬೆಂಗಳೂರಿನಲ್ಲಿ ಪಂಚಮಸಾಲಿ ಹೋರಾಟ ವೇಳೆ ಹತ್ತು ಲಕ್ಷ ಜನ ಸೇರಿದ್ರು.ಇತಿಹಾ ಸದಲ್ಲಿ ಹೋರಾಟದಲ್ಲಿ ಇಷ್ಟೊಂದು ಜನ ಯಾವ ತ್ತೂ ಸೇರಿರಲಿಲ್ಲ.ಬೆಂಗಳೂರಿಗೆ ನಮ್ಮ ಪಾದಯಾತ್ರೆ ಹೋದಮೇಲೆ ಪ್ರಧಾನಿಗೆ ಸತ್ಯ ಗೊತ್ತಾಯ್ತು ಎಂದರು.

ಲಿಂಗಾಯತರಲ್ಲಿ ಬಹುಸಂಖ್ಯಾತರೆಂದ್ರೆ ಪಂಚಮ ಸಾಲಿಗಳು ಅಂತಾ ಗೊತ್ತಾಯ್ತು.ನಾಯಕತ್ವ ಬದಲಾವಣೆ ವೇಳೆ ಪಂಚಮಸಾಲಿ ಸಮಾಜದ ಇಬ್ಬರನ್ನು ಪರಿಗಣಿಸಲಾಗಿತ್ತು.ಬೆಂಗಳೂರಿಗೆ ಧರ್ಮೆಂದ್ರ ಪ್ರಧಾನ್ ಆಗಮಿಸುವ ವೇಳೆಯೂ ಪಂಚಮಸಾಲಿ ಸಮುದಾಯಕ್ಕೆ ಸಿಎಂ ಸ್ಥಾನ ಸಿಗುವ ನಿರೀಕ್ಷೆ ಇತ್ತು.ಆದ್ರೆ ಕೊನೆ ಘಳಿಗೆಯಲ್ಲಿ ಯಾರು ಒತ್ತಡ ಮಾಡಿದರೂ ಗೊತ್ತಿಲ್ಲ. ಪಂಚಮ ಸಾಲಿಗಳನ್ನು ಸಿಎಂ ಮಾಡಿದ್ರೆ ಧರ್ಮಸ್ಥಳಕ್ಕೆ ಹೋಗ್ತಿವಿ ಅಂತಾ ಯಾರು ಒತ್ತಾಯಿಸಿದ್ರು ಗೊತ್ತಿಲ್ಲ.

ಮಾಧ್ಯಮಗಳಲ್ಲಿ ಇದನ್ನ ನೋಡಿದ್ದು ಹಾಗಾಗಿರ ಬಹುದು ಅಂದುಕೊಂಡಿದ್ದೀವಿ ಆದರೆ .ಅವರ ಒತ್ತಡಕ್ಕೆ ಮಣಿದು ಪಂಚಮಸಾಲಿಗಳಿಗೆ ಸಿಎಂ ಸ್ಥಾನ ತಪ್ಪಿರಬಹುದು ಎಂದರು.ಆದರೂ ಒಂದು ಸಮಾಧಾನ ಇದೆ.ನಾಯಕತ್ವ ಬದಲಾವಣೆ ಆದ್ರೆ ಉತ್ತರ ಕರ್ನಾಟಕ ಲಿಂಗಾಯತ ಶಾಸಕರನ್ನು ಸಿಎಂ ಮಾಡಬೇಕೆಂದು ಆಗ್ರಹಿಸಿದ್ದೆವು.ನಮ್ಮ ಬಯಕೆ ಯಂತೆ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ ಎಂದರು.


Google News

 

 

WhatsApp Group Join Now
Telegram Group Join Now
Suddi Sante Desk