ಧಾರವಾಡದ ವರ್ತಕರ ಸಂಘಕ್ಕೆ 6ನೇ ಬಾರಿಗೆ ಅಧ್ಯಕ್ಷರಾಗಿ ಕಾಯಕಯೋಗಿ ಶಿವಶಂಕರ ಹಂಪಣ್ಣವರ – ಅವಿರೋಧವಾಗಿ ಆಯ್ಕೆಯಾದ ನೇರ ದಿಟ್ಟ ನಾಯಕರಿಗೆ ಅಭಿನಂದನೆಗಳ ಮಹಾಪೂರ…..

Suddi Sante Desk
ಧಾರವಾಡದ ವರ್ತಕರ ಸಂಘಕ್ಕೆ 6ನೇ ಬಾರಿಗೆ ಅಧ್ಯಕ್ಷರಾಗಿ ಕಾಯಕಯೋಗಿ ಶಿವಶಂಕರ ಹಂಪಣ್ಣವರ – ಅವಿರೋಧವಾಗಿ ಆಯ್ಕೆಯಾದ ನೇರ ದಿಟ್ಟ ನಾಯಕರಿಗೆ ಅಭಿನಂದನೆಗಳ ಮಹಾಪೂರ…..

ಧಾರವಾಡ

ಧಾರವಾಡದ ವರ್ತಕರ ಸಂಘಕ್ಕೆ 6ನೇ ಬಾರಿಗೆ ಅಧ್ಯಕ್ಷರಾಗಿ ಕಾಯಕಯೋಗಿ ಶಿವಶಂಕರ ಹಂಪಣ್ಣವರ ಅವಿರೋಧವಾಗಿ ಆಯ್ಕೆಯಾದ ನೇರ ದಿಟ್ಟ ನಾಯಕರಿಗೆ ಅಭಿನಂದನೆಗಳ ಮಹಾಪೂರ…..

ಧಾರವಾಡದ ಹೆಸರಾಂತ ದಲಾಲ ವರ್ತಕರ ಸಂಘಕ್ಕೆ ಮತ್ತೆ ಹಿರಿಯ ವ್ಯಾಪಾರಿ ಕಾಯಕಯೋಗಿ ಶಿವಶಂಕರ್ ಹಂಪಣ್ಣನವರ ಆಯ್ಕೆಯಾಗಿದ್ದಾರೆ.6ನೇ ಬಾರಿಗೆ ಸಂಘಕ್ಕೆ ಮತ್ತೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಯಾಗಿ ಹೊಸದೊಂದು ದಾಖಲೆಯನ್ನು ನಿರ್ಮಾಣ ಮಾಡಿದ್ದಾರೆ.ಹೌದು ಹಿರಿಯ ವ್ಯಾಪಾರಸ್ಥ ಶಿವಶಂಕರ ಹಂಪಣ್ಣವರ ಅವಿರೋಧವಾಗಿ ಆಯ್ಕೆಯಾದರು.

ಬಸವಂತಪ್ಪ‌ ಪೂಜಾರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಂಘದ ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘದ ನೂತನ ಅಧ್ಯಕ್ಷರಾಗಿ ಶಿವಶಂಕರ ಹಂಪಣ್ಣವರ ಅವಿರೋಧವಾಗಿ ಆಯ್ಕೆಯಾದರು.ಈ ಮೂಲಕ ಸತತ ಆರನೇ ಬಾರಿಗೆ ಹಂಪಣ್ಣವರ ಆಯ್ಕೆಯಾದರು.
ನೂತನ ಪದಾಧಿಕಾರಿಗಳಾಗಿ ತಮ್ಮಣ್ಣ ಯಂಡಿಗೇರಿ (ಉಪಾಧ್ಯಕ್ಷ),

ಬಸವರಾಜ ತೆಗ್ಗಿ(ಕಾರ್ಯದರ್ಶಿ), ರಾಜೇಂದ್ರ ಜಾಧವ (ಜಂಟಿ ಕಾರ್ಯದರ್ಶಿ),ಬಸವರಾಜ ಸುರೇಬಾನ (ಖಜಾಂಚಿ), ಎಸ್.ವೈ. ಸಂಕೋಜಿ, ಸಂಗಪ್ಪ‌ ಕಪಲಿ, ಮೈನುದ್ದೀನ್ ಅಮ್ಮಿನಭಾವಿ, ಶಂಕರ‌ ಬೆಂಡಿಗೇರಿ, ಉಮೇಶ ಗುಡ್ಡದ, ಈರಣ್ಣ ಹಂಚಿನಮನಿ (ಕಾ.ಕಾ.ಸಮಿತಿ ಸದಸ್ಯರು), ಎಸ್.ಜಿ.ಖಾನಗೌಡ್ರ, ಎಂ.ಎಫ್. ಬಾಳನಗೌಡ್ರ, ಮಲ್ಲಿಕಾರ್ಜುನ ‌ನಂದಿಗೋಳ, ರಾಜು ಮಟ್ಟಿ, ವೈ.ಎಸ್. ಮುಂದಿಮನಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.