ಧಾರವಾಡ ಜಿಲ್ಲಾ ನೂತನ ಪೊಲೀಸ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಗುಂಜನ್ ಆರ್ಯ – ಡಾ ಗೋಪಾಲ ಬ್ಯಾಕೋಡ್ ಗೆ ಬೀಳ್ಕೊಡುಗೆ ಹೊಸ ಎಸ್ಪಿ ಸ್ವಾಗತ ಮಾಡಿಕೊಂಡ ಜಿಲ್ಲೆಯ ಪೊಲೀಸ್ ಅಧಿಕಾರಿಗಳು…..

Suddi Sante Desk
ಧಾರವಾಡ ಜಿಲ್ಲಾ ನೂತನ ಪೊಲೀಸ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಗುಂಜನ್ ಆರ್ಯ – ಡಾ ಗೋಪಾಲ ಬ್ಯಾಕೋಡ್ ಗೆ ಬೀಳ್ಕೊಡುಗೆ ಹೊಸ ಎಸ್ಪಿ ಸ್ವಾಗತ ಮಾಡಿಕೊಂಡ ಜಿಲ್ಲೆಯ ಪೊಲೀಸ್ ಅಧಿಕಾರಿಗಳು…..

ಧಾರವಾಡ

ಧಾರವಾಡ ಜಿಲ್ಲಾ ನೂತನ ಪೊಲೀಸ ವರಿಷ್ಠಾಧಿಕಾರಿ ಯಾಗಿ ಗುಂಜನ್ ಆರ್ಯ ಅಧಿಕಾರ ಸ್ವೀಕಾರ ಹೌದು 2018 ಬ್ಯಾಚ್ ಐಪಿಎಸ್ ಅಧಿಕಾರಿ ಗುಂಜನ ಆರ್ಯ ಅವರು ಧಾರವಾಡ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹಿಂದಿನ ಎಸ್.ಪಿ.ಡಾ. ಗೋಪಾಲ ಬ್ಯಾಕೋಡ್ ಅವರಿಂದ ಅಧಿಕಾರ ಸ್ವೀಕರಿಸಿದರು.

ಗುಂಜನ್ ಆರ್ಯ ಅವರು ಮೂಲತಃ ಮಧ್ಯಪ್ರದೇಶ ರಾಜ್ಯದವರಾಗಿದ್ದು, 2018 ರ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದಾರೆ. ಈ ಮೊದಲು ಅವರು ರಾಯಚೂರ ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ಯಾಗಿ, ಚಿಕ್ಕಮಂಗಳೂರು ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಧಾರವಾಡ ಎಸ್.ಪಿ. ಆಗಿ ನೇಮಕವಾಗುವ ಮೊದಲು ಅವರು ಬೆಂಗಳೂರಿನಲ್ಲಿ ರಾಜ್ಯ ಆಂತರಿಕ ಭದ್ರತಾ ವಿಭಾಗದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆಯಲ್ಲಿದ್ದರು.ಬೆಂಗಳೂರಿಗೆ ವರ್ಗಾವಣೆ ಆಗಿರುವ ಡಾ.ಗೋಪಾಲ ಬ್ಯಾಕೋಡ  ಅವರನ್ನು ಎಸ್.ಪಿ. ಕಚೇರಿಯಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿ ಗಳು, ಸಿಬ್ಬಂದಿಗಳು ಬಿಳ್ಕೋಡುಗೆ ನೀಡಿ, ನೂತನ ಎಸ್.ಪಿ.ಗುಂಜನ್ ಆರ್ಯ ಅವರನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಬರಮನಿ, ಉಪ ಪೊಲೀಸ ವರಿಷ್ಠಾಧಿ ಕಾರಿ ವಿನೋದ ಮುಕ್ತೆದಾರ, ಸಿಇಎನ್ ಡಿವೈಎಸ್ ಪಿ ಶಿವಾಂದ ಕಟಗಿ ಸೇರಿದಂತೆ ಧಾರವಾಡ ಗ್ರಾಮೀಣ ಜಿಲ್ಲೆಯ ಎಲ್ಲಾ ಪೊಲೀಸ್ ವೃತ್ತದ ಪೊಲೀಸ್ ಇನ್ಸ್ಪೆಕ್ಟರ್ ಗಳು, ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಮೋದ್ ಕಪಲಿ

ಸುದ್ದಿ ಸಂತೆ ನ್ಯೂಸ್ ಧಾರವಾಡ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.