ಮಧ್ಯಾಹ್ನದ ಬಿಸಿಯೂಟಕ್ಕೆ ಮತ್ತಷ್ಟು ಬಲ – ಯೋಜನೆಗೆ ಬಲ‌ ನೀಡಿದ ಕೇಂದ್ರ ಸರ್ಕಾರ…..

Suddi Sante Desk
ಮಧ್ಯಾಹ್ನದ ಬಿಸಿಯೂಟಕ್ಕೆ ಮತ್ತಷ್ಟು ಬಲ – ಯೋಜನೆಗೆ ಬಲ‌ ನೀಡಿದ ಕೇಂದ್ರ ಸರ್ಕಾರ…..

ಬೆಂಗಳೂರು

ಮಧ್ಯಾಹ್ನದ ಬಿಸಿಯೂಟಕ್ಕೆ ಮತ್ತಷ್ಟು ಬಲ ಸಿಕ್ಕಂತಾ ಗಿದ್ದು ಈ ಹಿಂದೆ ಇದ್ದ ದರದಲ್ಲಿ ಕೇಂದ್ರ ಸರ್ಕಾರ ಒಂದಿಷ್ಟು ಹೆಚ್ಚು ಮಾಡಿ ನೆರವು ನೀಡಿ ಮಕ್ಕಳಿಗೆ ಆಸರೆ ಯಾಗಿದೆ ಹೌದು ಕೇಂದ್ರ ಸರ್ಕಾರವು ಪಿಎಂ ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಗೆ ಬಳಸುವ ‘ವಸ್ತುಗಳ ಖರೀದಿ ವೆಚ್ಚ’ ಹೆಚ್ಚಿಸಿದೆ ಈ ಮೂಲಕ ಕೇಂದ್ರೀಯ ಪ್ರಾಯೋಜಿತ ಯೋಜನೆಯ ಅನುದಾನ ಏರಿಸಿದೆ

ಊಟ ತಯಾರಿಸಲು ಮುಖ್ಯವಾಗಿ ಬೇಕಾಗುವ ಬೇಳೆ, ತರಕಾರಿ, ಎಣ್ಣೆ ಹಾಗೂ ಇತರ ಪದಾರ್ಥಗಳು, ಇಂಧನ ಖರೀದಿಗೆ ಈ ಹಿಂದೆ ನಿಗದಿಪಡಿಸಿದ್ದ ದರಗಳನ್ನು ಹೆಚ್ಚಿಸಿದೆ.ಒಟ್ಟಾರೆ ದರ ಗಳಲ್ಲಿ ಶೇ.13.70 ಏರಿಸಿ ಆದೇಶಿಸಿದೆ. ದೇಶದ 10.24 ಲಕ್ಷ ಶಾಲೆಗಳಲ್ಲಿ ಯೋಜನೆ ಜಾರಿಯಲ್ಲಿದ್ದು, ಒಟ್ಟು 11.70 ಕೋಟಿ ಮಕ್ಕಳಿಗೆ ಊಟ ನೀಡಲಾಗುತ್ತಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.