ಸರ್ಕಾರಿ ನೌಕರರ ಬೇಡಿಕೆಗಳ ಕುರಿತು ರಾಜ್ಯಾಧ್ಯಕ್ಷರನ್ನು ಭೇಟಿಯಾದ ಶಿಕ್ಷಕರು – ಬೇಡಿಕೆಗಳ ಕುರಿತು ಮನವಿ ನೀಡಿದ ಶಿಕ್ಷಕರು…..

Suddi Sante Desk
ಸರ್ಕಾರಿ ನೌಕರರ ಬೇಡಿಕೆಗಳ ಕುರಿತು ರಾಜ್ಯಾಧ್ಯಕ್ಷರನ್ನು ಭೇಟಿಯಾದ ಶಿಕ್ಷಕರು – ಬೇಡಿಕೆಗಳ ಕುರಿತು ಮನವಿ ನೀಡಿದ ಶಿಕ್ಷಕರು…..

ಬೆಂಗಳೂರು –

ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಯವರಿಗೆ ಮನವಿ ನೀಡಲಾ ಯಿತು.ಹೌದು  ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ  ಷಡಾಕ್ಷರಿ ಅವರನ್ನು ಭೇಟಿ ಮಾಡಿ ಶಿಕ್ಷಕರ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಮನವಿ ಪತ್ರ ಸಲ್ಲಿಸಿದರು

ಕರ್ನಾಟಕ ರಾಜ್ಯ ಸರಕಾರಿ ನೌಕರರ ವೇತನಕ್ಕಾಗಿ ಇರುವ ಅನುದಾನದ ಗೊಂದಲ, ಕೆ.ಜಿ.ಐ.ಡಿ.14 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪ್ರೌಢಶಾಲಾ, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಮುಂಬಡ್ತಿ ಪ್ರಕ್ರಿಯೆ ಪೂರ್ಣಗೊಳಿಸಿ, ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯ ಪ್ರೋತ್ಸಾಹಧನ ಪಡೆಯಲು ರಾಜ್ಯಾದ್ಯಂತ ಏಕರೂಪ ಆದೇಶ ಮತ್ತು SSLC ಪರೀಕ್ಷೆ ಯಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರ ಮೇಲೆ ಸೂಕ್ತ ವಿಚಾರಣೆ ನಡೆಸಿ ತಪ್ಪಿತಸ್ಥರು ಎಂದು ಸಾಬೀತು ಆದ ಮೇಲೆ ಕ್ರಮಕೈಗೊಳ್ಳಲು ಸರಕಾರಕ್ಕೆ ಒತ್ತಾಯಿಸಿ, ನೌಕರರ ಅನೇಕ ಸಮಸ್ಯೆಗಳನ್ನು ಈಡೇರಿಸಬೇಕೆಂದು ಮನವಿ ಸಲ್ಲಿಸಿದರು.

ರಾಜ್ಯ ಸಂಘದ ಗಿರಿಗೌಡರ, ಯಡ್ರಾಮಿ ತಾಲೂಕ ಅಧ್ಯಕ್ಷ ಶಿವಕುಮಾರ ಡಂಬಳ, ಕಲಬುರಗಿ ನಿರ್ದೇಶಕ ಮಹೇಶ ಬಸರಕೋಡ, ಯಡ್ರಾಮಿ ಖಜಂಚಿ ನಿಜಲಿಂಗಪ್ಪ ಮಾನ್ವಿ, ಆಳಂದ ಚಂದ್ರಶೇಖರ ಪಾಟೀಲ, ಮಲ್ಲಿಕಾರ್ಜುನ ಕೂಡಗಿ ಅವರು ಉಪಸ್ಥಿತರಿದ್ದರು.

14 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪ್ರೌಢಶಾಲಾ, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಮುಂಬಡ್ತಿ ಪ್ರಕ್ರಿಯೆ ಪೂರ್ಣಗೊಳಿಸಿ, ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯ ಪ್ರೋತ್ಸಾಹಧನ ಪಡೆಯಲು ರಾಜ್ಯಾದ್ಯಂತ ಏಕರೂಪ ಆದೇಶ ಮತ್ತು ಎಸ್ ಎಸ್  ಎಲ್ ಸಿ ಪರೀಕ್ಷೆಯಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರ ಮೇಲೆ ಸೂಕ್ತ ವಿಚಾರಣೆ ನಡೆಸಿ ತಪ್ಪಿತಸ್ಥರು ಎಂದು ಸಾಬೀತು ಆದಮೇಲೆ ಕ್ರಮಕೈಗೊಳ್ಳಲು ಸರಕಾರಕ್ಕೆ ಒತ್ತಾಯಿಸಿ, ನೌಕರರ ಅನೇಕ ಸಮಸ್ಯೆಗಳನ್ನು ಈಡೇರಿಸಬೇಕೆಂದು ಮನವಿ ಸಲ್ಲಿಸಿದರು.

ರಾಜ್ಯ ಸಂಘದ ಗಿರಿಗೌಡರ, ಯಡ್ರಾಮಿ ತಾಲೂಕ ಅಧ್ಯಕ್ಷ ಶಿವಕುಮಾರ ಡಂಬಳ, ಕಲಬುರಗಿ ನಿರ್ದೇಶಕ ಮಹೇಶ ಬಸರಕೋಡ, ಯಡ್ರಾಮಿ ಖಜಂಚಿ ನಿಜಲಿಂಗಪ್ಪ ಮಾನ್ವಿ, ಆಳಂದ ಚಂದ್ರಶೇಖರ ಪಾಟೀಲ, ಮಲ್ಲಿಕಾರ್ಜುನ ಕೂಡಗಿ ಅವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.. ಂಂಂಂಂ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.