ಹೊಸ ಪೆನಲ್ ಹೊಸ ಭರವಸೆ -ರಂಗೇರುತ್ತಿರುವ ಚುನಾವಣೆಗೆ ಆನಂದ ಭೀ ಕೆಂಭಾವಿ ಮನವಿ ಮಾಡಿಕೊಂಡಿದ್ದೇನು ಗೊತ್ತಾ…..

Suddi Sante Desk
ಹೊಸ ಪೆನಲ್ ಹೊಸ ಭರವಸೆ -ರಂಗೇರುತ್ತಿರುವ ಚುನಾವಣೆಗೆ ಆನಂದ ಭೀ ಕೆಂಭಾವಿ ಮನವಿ ಮಾಡಿಕೊಂಡಿದ್ದೇನು ಗೊತ್ತಾ…..

ವಿಜಯಪುರ

 

ಹೊಸ ಪೆನಲ್ ಹೊಸ ಭರವಸೆ ರಂಗೇರುತ್ತಿರುವ 2025 ರ GOCC ಬ್ಯಾಂಕ್ ಚುನಾವಣೆ ಹೌದು GOCC ಬ್ಯಾಂಕಿಗೆ ನಿಲ್ಲಲು ತಡೆಹಿಡಿಯಲು ನನ್ನನ್ನು ದೊಡ್ಡ ಹುದ್ದೆ ಕೊಡ್ತೀನಿ ಮತ್ತು ಹಣ ಕೊಡ್ತೀನಿ ಅಂದರೂ ಕೂಡ ಅದರ ಪ್ರಭಾವಕ್ಕೆ ಒಳಗಾಗದೆ ಶಿಕ್ಷಕರ ಅಭಿಪ್ರಾಯದ ಮೇರೆಗೆ ಇಂದು ನಾನು GOCC ಬ್ಯಾಂಕಿನ ಚುನಾವಣೆಗೆ ಹಿರಿಯರ ನೇತೃತ್ವದಲ್ಲಿ ಹೊಸ ಪೆನಲ್ ನ್ನು ಕಟ್ಟಿಕೊಂಡು 05,2025 ರಂದು ನಡೆಯುವ ಚುನಾವಣೆಗೆ ಸ್ಪರ್ಧೆ ಮಾಡ್ತಾಯಿದ್ದೀನಿ. ತಮ್ಮೆಲ್ಲ ಆಶೀರ್ವಾದ ಇರಲಿ

ಆತ್ಮೀಯ ವಿಜಯಪುರ ಹಾಗೂ ಬಾಗಲಕೋಟ ಅವಳಿ ಜಿಲ್ಲೆಯ ನೌಕರರ ಬಂಧುಗಳ ಗಮನಕ್ಕೆ

ಕೆಲವು ವ್ಯಕ್ತಿಗಳು ಸೋಲಿನ ಭಯದಿಂದ ಭರವಸೆಯ ಬೆಳಕು ಹೊಸ ಪೆನಲ್ ಬಗ್ಗೆ ಇಲ್ಲ ಸಲ್ಲದ ಉಹಾಪೋಹ ಗಳನ್ನು ಎಬ್ಬಿಸಿ ನೌಕರರಲ್ಲಿ ಗೊಂದಲ ಸೃಷ್ಟಿ ಮಾಡುತ್ತಿ ದ್ದಾರೆ. ಕೊನೇದಾಗಿ *ಹೊಸ ಪೆನಲ್* ಇರುವದಿದಿಲ್ಲ. ನಾಮಿನೆಷನ್ ನಂತರ ಮೊದಲಿನ ಎರಡೇ ಪೆನಲ್ ಉಳಿಯುತ್ತವೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ದಯಮಾಡಿ ಯಾರೂ ಕಿವಿಗೋಡಬೇಡಿ.

ಕಣದಲ್ಲಿ ಬ್ಯಾoಕಿನ ಉಳಿವಿಗಾಗಿ ಹುಟ್ಟಿಕೊಂಡ ಹೊಸ ಪೆನಲ್ ಗಟ್ಟಿಯಾಗಿ ಕೊನೆಯವರೆಗೂ ಇರುತ್ತದೆ ಅಂತ ಎಲ್ಲರ ಗಮನಕ್ಕೆ ತರಬಯಸುತ್ತೇನೆ.ಬಲ್ಲ ಮೂಲಗಳ ಪ್ರಕಾರ ಗೆಲುವಿಗಾಗಿ ಬಹಳಷ್ಟು ಅಭ್ಯರ್ಥಿಗಳು ನೂರೆಂಟು ಸರ್ಕಸ್ ಮಾಡ್ತಿದ್ದಾರೆ ಅಂತ ತಿಳಿದು ಬರುತ್ತಿದೆ.

ಪ್ರತಿ ವರ್ಷ ಶಿಕ್ಷಕರು ಕಾಲು ಬಿದ್ದರೆ ಮನಸ್ಸು ಕರಗಿ ವೋಟ್ ಮಾತ್ತಿದ್ದರು. ಆದರೆ ಈ ಬಾರಿ ಎಲ್ಲಾ ನಮ್ಮ ಸಹೋದರ/ಸಹೋದರಿಯರು ಎಷ್ಟೇ ಸಲ ಕಾಲು ಬಿದ್ದರೂ, ದುಡ್ಡು ಕೊಟ್ಟರೂ, ಶಾಲೆ ಶಾಲೆಗೆ ಗಿಫ್ಟ್ ಕೊಟ್ಟರೂ ಕೂಡ ಹೊಸ ಪೆನಲ್ ಅಭ್ಯರ್ಥಿಗಳಿಗೆ ಮತ ನೀಡಿ ಹೊಸ ಪೆನಲ್ ಮಾಡ್ತೀವಿ ಅಂತ ಶಪಥ ಮಾಡಿ ದ್ದಾರೆ. ಅವರಿಗೆ ತುಂಬು ಹೃದಯದ ಧನ್ಯವಾದಗಳು.*

ಹೊಸ ಪೆನಲ್ ನ ಭರವಸೆಗಳು

ದುಂದು ವೆಚ್ಚಕ್ಕೆ ಕಡಿವಾಣ ಹಾಕುವದೇ ನಮ್ಮ ಮೊದಲ ಆದ್ಯತೆ.ಹೊಸ ಬ್ರಾಂಚ್ ಓಪನ್ ಮಾಡಲ್ಲ ಹೊಸ ಹುದ್ದೆ ತುಂಬಲ್ಲ.ಪ್ರತಿ ರೀಬಾಂಡ್ ಮಾಡುವಾಗ ಬಿಲ್ಡಿಂಗ್ ಫಂಡ್ ಮುರಿಯಲ್ಲ.

ಆನಂದ ಭೀ ಕೆಂಭಾವಿ ಪ್ರಭಾರಿ ಮುಖ್ಯ ಗುರುಗಳು MPS ಹಿರೇಮಸಳಿ ತಾ ಇಂಡಿ
GOCC ಕಣದಲ್ಲಿರುವ ಹೊಸ ಪೆನಲ್ ನ ಸಾಮಾನ್ಯ ಅಭ್ಯರ್ಥಿ
ಮೊಬೈಲ್ ನಂಬರ್:9901275220 ಬ್ಯಾಂಕ್ ಉಳಿಸಿ ನೌಕರರ ಬಚಾವೋ.ಬ್ಯಾಂಕ್ ಅಭಿವೃದ್ಧಿಯೇ ಹೊಸ ಪೆನಲ್ ನ ಪರಮೋಚ್ಚ ಗುರಿ.

 

ಸುದ್ದಿ ಸಂತೆ ನ್ಯೂಸ್ ವಿಜಯಪುರ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.