ಹೃದಯಾಘಾತದಿಂದ ಶಿಕ್ಷಕಿ ಸಾವು – ಶಾಲೆಯಲ್ಲಿ ಕುಸಿದು ಬಿದ್ದ ಶಿಕ್ಷಕಿ – ಶಿಕ್ಷಕ ಬಳಗದ ಸಂತಾಪ…..

Suddi Sante Desk
ಹೃದಯಾಘಾತದಿಂದ ಶಿಕ್ಷಕಿ ಸಾವು – ಶಾಲೆಯಲ್ಲಿ ಕುಸಿದು ಬಿದ್ದ ಶಿಕ್ಷಕಿ – ಶಿಕ್ಷಕ ಬಳಗದ ಸಂತಾಪ…..

ನರಗುಂದ –

ಶಾಲೆಗೆ ತೆರಳುವಾಗ ಶಿಕ್ಷಕಿಯೊಬ್ಬರು ಹೃದಯಾಘಾತ ಸಂಭವಿಸಿ ಮೃತಪಟ್ಟಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಬನಹಟ್ಟಿ ಗ್ರಾಮದಲ್ಲಿ ನಡೆದಿದೆ.ಬನಹಟ್ಟಿ ಕೆಪಿಎಸ್ ಶಾಲೆ ಶಿಕ್ಷಕಿ ಜ್ಯೋತಿ ಬಸವರಾಜ ಕೋಡ್ಲಿವಾಡ (34) ಮೃತ ಶಿಕ್ಷಕಿಯಾಗಿದ್ದು ಬನಹಟ್ಟಿ ಕೆಪಿಎಸ್ ಶಾಲೆಯಲ್ಲಿ ಏಳು ವರ್ಷಗಳಿಂದ ಎಲ್‌ಕೆಜಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಜ್ಯೋತಿ ಎಂದಿನಂತೆ ಬೆಳಗ್ಗೆ ತಮ್ಮ ಮನೆಯಿಂದ ಶಾಲೆಗೆ ಆಗಮಿಸುತ್ತಿದ್ದರು.

ಶಾಲೆ ಪ್ರವೇಶದ್ವಾರದ ಬಳಿ ಆಗಮಿಸುತ್ತಿದ್ದಾಗ ಶಿಕ್ಷಕಿಗೆ ಏಕಾಏಕಿ ಹೃದಯಾಘಾತ ಸಂಭವಿ ನಡುರಸ್ತೆಯಲ್ಲಿ ಕುಸಿದು ಬಿದ್ದಿದ್ದಾರೆ. ಶಿಕ್ಷಕಿಯನ್ನು ಗ್ರಾಮಸ್ಥರು ಮನೆಗೆ ಕರೆದುಕೊಂಡು ಹೋಗುವಷ್ಟ ರಲ್ಲಿ ಶಿಕ್ಷಕಿ ಕೊನೆಯುಸಿರೆಳೆದರು.ಮೃತರಿಗೆ ಪತಿ, ಓರ್ವ ಪುತ್ರಿ, ಒಬ್ಬ ಪುತ್ರ ಇದ್ದಾನೆ. ಶಿಕ್ಷಕಿಯ ಸಾವಿನ ಸುದ್ದಿ ತಿಳಿದು ಇವರ ಗೌರವಾರ್ಥ ಶಾಲೆಗೆ ರಜೆ ನೀಡಲಾಯಿತು.

ಸುದ್ದಿ ಸಂತೆ ನ್ಯೂಸ್ ಗದಗ….

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.