ಧಾರವಾಡ –
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಬೆಂಗಳೂರು ಸಭಾದ ಧಾರವಾಡ ಪುರುಷ ಘಟಕಕ್ಕೆ ನೂತನ ಸಾರಥಿಗಳನ್ನು ಆಯ್ಕೆ ಮಾಡಲಾಗಿದೆ ಹೌದು ಕಾಳಪ್ಪ ವಿ ಬಡಿಗೇರ್ ಅವರನ್ನು ಅಧ್ಯಕ್ಷರನ್ನಾಗಿ ಮಂಜುನಾಥ ಬಿ ಬಡಿಗೇರ ಇವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು
ಧಾರವಾಡದ ವಿಶ್ವಕರ್ಮ ಕುಲ ಬಂಧುಬಾಂಧವರು ಗ್ರಾಮ ಪ್ರತಿ ತಾಲೂಕಿನ ಪುರುಷ ಮಹಿಳಾ ಅಧ್ಯಕ್ಷರು ಸರ್ವ ಪದಾಧಿಕಾರಿ ಗಳು. ಮತ್ತು ಎರಡು ತಾಲೂಕಿನ ಜನ ಗೈರು ಹಾಜರು ಆದರೂ ಸಹ. ಅವರು ಫೋನ್ನ್ ಲ್ಲಿಯೇ ತಮ್ಮೆಲ್ಲ ಬದ್ಧತೆಗೆ ನಾವು ಬದ್ಧ. ಎಂದು ಸೂಚನೆ ನೀಡಿದ್ದರಿಂದ ಅವಿರೋಧವಾಗಿ ಪುನಃ ಅವರನ್ನೇ ಆಯ್ಕೆ ಮಾಡಲಾಯಿತು
ಯಾವುದೇ ಒಂದು ಸ್ಥಾನ ಯೋಗ ಮತ್ತು ಯೋಗ್ಯತೆ. ಮತ್ತು ಆ ವ್ಯಕ್ತಿಯಲ್ಲಿರುವ ಭದ್ರತೆ. ಮತ್ತು ಬದ್ಧತೆ ಕಾರಣವಾಗಿರುತ್ತೆ. ವಿಶ್ವ ಕರ್ಮನಿದ್ದಾನೆ ಎನ್ನಲು ಇದೆ ಸಾಕ್ಷಿ ಹೌದು ವಿಶ್ವಕರ್ಮನಿದ್ದಾನೆ ಮತ್ತೆ ತಾವೆಲ್ಲರೂ ಸೇರಿ ಅವರಿಬ್ಬರನ್ನು ಆಯ್ಕೆ ಮಾಡಲು ತಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಅವರು ಮಾಡಿದ ಸಂಘಟನೆಗಳನ್ನು ಮನದಾಳದಲ್ಲಿಟ್ಟು ಇಂದು ಪ್ರತಿಯೊಬ್ಬರು ಮನದಾಳದ ನೋವಿನ. ಮತ್ತು ಸಂಘಟನೆಯ ಬುತ್ತಿಯನ್ನು ಬಿಚ್ಚಿಟ್ಟಿದ್ದು ಕಂಡು ಬಂದಿತು
ಜಿಲ್ಲಾಧ್ಯಂತ ಬಳಗಕ್ಕೆ ಮಾತಿನ ಸವಿ ಊಟ ಅತ್ಯದ್ಭುತ ವಾಗಿ ಕಂಡು ಬಂದಿತು. ಇನ್ನು ಉಳಿದ ಪದಾಧಿಕಾರಿಗಳನ್ನು 9/8/2026. ರಂದು ಆಯ್ಕೆ ಮಾಡುವದಾಗಿ ನಿಶ್ಚಯಿಸಿದ್ದಾರೆ. ಅವರಿಬ್ಬರಿಗೂ ಶುಭ ಹಾರೈಸಿ ಜೊತೆಗೆ ಮುಂದಿನ ಸಂಘಟ ನೆಯ ಹೊಸ ಕುರುಹುಗಳನ್ನು ಅರ್ಪಿಸಿದ ಇವತ್ತು ನೆರೆ ದಂತ ನಮ್ಮ ಎಲ್ಲ ಬಳಗಕ್ಕೆ. ಮತ್ತು ರಾಜ್ಯದ್ಯಂತ ಅನೇಕ ಗಣ್ಯ ವ್ಯಕ್ತಿಗಳು ಫೋನ್ ಮಾಡಿ ಅವರೇ ಇರಲಿ ಎಂಬ ಕೂಗು : ಅಬ್ಬ! ಕೂಗಿಗೆ ಒಂದು ಸಲಾಂ.
ಧಾರವಾಡ ಜಿಲ್ಲಾ ಘಟಕ. ಪುರುಷ ಮತ್ತು ಮಹಿಳಾ ಘಟಕ ಗೌರವದಿಂದ ಅಭಿನಂದನೆ ಜೊತೆಗೆ ಧನ್ಯವಾದಗಳು ಎಂದು ತಿಳಿಸುತ್ತದೆ.ಒಂದೇ ಮಾತು ಮಹಿಳಾ ಘಟಕವನ್ನು ಸ್ಥಾಪಿಸಿ ಹೆಸರಿಸಿ ಪಸರಿಸಿದ ಮಹನೀಯರಿಗೊಂದು ಶುಭಾಶಯ ಹೇಳಲಾಯಿತು ಮತ್ತು ತಮಗೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ನೂತನ ಸಾರಥಿಗಳು ಹೇಳಿದರು
ಸುದ್ದಿ ಸಂತೆ ನ್ಯೂಸ್ ಧಾರವಾಡ…..



