ಸೋಮೇಶ್ವರ ದೇವಸ್ಥಾನದ ಹಿರಿಯ ಅರ್ಚಕ ನಿಧನ

Suddi Sante Desk

ಧಾರವಾಡ –

ಧಾರವಾಡದದ ಐತಿಹಾಸಿಕ ಸೋಮೇಶ್ವರ ದೇವಸ್ಥಾನದ ಹಿರಿಯ ಅರ್ಚಕರಾಗಿದ್ದ ಗಂಗಯ್ಯ ಸಂಗಯ್ಯ ಬಳ್ಳಾರಿಮಠ ನಿಧನರಾಗಿದ್ದಾರೆ. 50 ವರ್ಷದ ಹಿರಿಯ ಅರ್ಚಕರಾಗಿದ್ದ ಇವರು ಕಳೆದ 40 ವರುಷಗಳಿಂದ ಧಾರವಾಡದ ಸೋಮೇಶ್ವರ ದೇವಸ್ಥಾನದಲ್ಲಿ ಅರ್ಚಕರಾಗಿದ್ದರು.ಎಂದಿನಂತೆ ಇಂದು ಬೆಳಗಿನ ಜಾವ ಪೂಜೆಗೆಂದು ಎದ್ದಾಗ ಹೃದಯಾಘಾತವಾಗಿದೆ.

ಕೂಡಲೇ ಇವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಪ್ರಯತ್ನವನ್ನು ಕುಟುಂಬದವರು ಮಾಡಿದ್ರು. ಆದ್ರೂ ಚಿಕಿತ್ಸೆ ಫಲಿಸದೇ ಹಿರಿಯ ಅರ್ಚಕರು ಸಾವಗೀಡಾದ್ರು. ಮೃತ ಹಿರಿಯ ಅರ್ಚಕರು ಇಬ್ಬರು ಹೆಣ್ಣು ಮಕ್ಕಳು ಒರ್ವ ಪುತ್ರ ಹಾಗೇ ಪತ್ನಿಯನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ವೀರಶೈವ ಧರ್ಮದ ಸಂಪ್ರದಾಯದಂತೆ ಮಧ್ಯಾಹ್ನ ಸೋಮೇಶ್ವರ ದೇವಸ್ಥಾನದ ಇವರ ತಂದೆಯ ಗದ್ದಿಗೆ ಪಕ್ಕದಲ್ಲಿ ನೆರವೆರಲಿದೆ. ಇನ್ನೂ ನಿಧನಕ್ಕೆ ನವಲೂರು ಗ್ರಾಮದ ಹಿರಿಯರು ಕುಟುಂಬಸ್ಥರು ಸಂತಾಪವನ್ನು ಸೂಚಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.