ಬಿಜೆಪಿಯಿಂದ ಟಿಕೆಟ್ ಬಯಲಿಸಿದ ಪ್ರಮೋದ್ ಮುತಾಲಿಕ್ – ಬಿಜೆಪಿ ನಾಯಕರ ಭೇಟಿ

Suddi Sante Desk

ಬೆಳಗಾವಿ –

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗಾಗಿ ಟಿಕಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಚುನಾವಣೆ ಘೋಷಣೆಯಾಗುವ ಮುನ್ನವೇ ಟಿಕೇಟ್ ಗಾಗಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಟಿಕೇಟ್ ಗಾಗಿ ತೆರೆ ಮರೆಯಲ್ಲಿ ಕಸರತ್ತನ್ನು ಮಾಡ್ತಾ ಇದ್ದಾರೆ. ಇನ್ನೂ ಇವೆಲ್ಲದರ ನಡುವೆ ಬೆಳಗಾವಿ ಲೋಕಸಭಾ ‌ಕ್ಷೇತ್ರದ ಉಪಚುನಾವಣೆಗಾಗಿ ಬಿಜೆಪಿಯಿಂದ ಪ್ರಮೋದ ಮುತಾಲಿಕ ಟಿಕೆಟ್ ಬಯಸಿದ್ದಾರೆ. ಈ ಕುರಿತಂತೆ ಪ್ರಮೋದ ಮುತಾಲಿಕ್.ಬಿಜೆಪಿ ಹಲವು‌‌ ನಾಯಕರನ್ನು ಭೇಟಿ ಮಾಡಿ ‌ಮಾತುಕತೆಯನ್ನು ಮಾಡಿದ್ದಾರೆ.

ನನಗೆ ಟಿಕೆಟ್ ನೀಡುವಂತೆ ಮನವಿ. ಮಾಡಿರುವ ಪ್ರಮೋದ ಮುತಾಲಿಕ ಬೆಳಗಾವಿ ಲೋಕಸಭಾ ‌ಕ್ಷೇತ್ರದ ಬಿಜೆಪಿ ಉಸ್ತುವಾರಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಭೇಟಿಯಾಗಿ ಚರ್ಚೆ ಮಾಡಿದ್ದಾರೆ.

ಈಗಾಗಲೇ ಒಂದು ಸುತ್ತು ಎಲ್ಲಾ ನಾಯಕರನ್ನು ಭೇಟಿಯಾಗಿರುವ ಪ್ರಮೋದ ಮುತಾಲಿಕ ನನಗೂ ಟಿಕೇಟ್ ಕೊಡಿ ಇದೊಂದು ಬಾರಿ ಅವಕಾಶವನ್ನು ಮಾಡಿಕೊಂಡುವಂತೆ ಮುತಾಲಿಕ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಭೇಟಿಯಾಗಿರುವ ನಾಯಕರನ್ನು ಒತ್ತಾಯಿಸಿದ್ದಾರೆ.

ಕಳೆದ ಹದಿನೈದು ದಿನಗಳಿಂದ ಪ್ರಮೋದ ಮುತಾಲಿಕ ಟಿಕೇಟ್ ವಿಚಾರವನ್ನು ಗಂಭೀರವಾಗಿ ತಗೆದುಕೊಂಡಿದ್ದು ಇದೊಂದು ಅವಕಾಶವನ್ನು ನೀಡುವಂತೆ ಒತ್ತಾಯವನ್ನು ಮಾಡಿದ್ದಾರೆ.

ಬಿಜೆಪಿ ಟಿಕೆಟ್ ಗಾಗಿ‌ 20ಕ್ಕೂ ಹೆಚ್ಚು ಜನರ ಲಾಭಿ. ಪ್ರಮೋದ್ ಮುತಾಲಿಕ್ ಸಹ ಟಿಕೆಟ್ ಆಕಾಂಕ್ಷಿ.ಬೆಳಗಾವಿ ಜಿಲ್ಲೆಯಲ್ಲಿ ಹಿಂದುತ್ವ ಗಟ್ಟಿ‌ ಮಾಡುವಲ್ಲಿ ಪ್ರಮುಖ ‌ಪಾತ್ರ‌ ವಹಿಸಿರೋ‌ ಮುತಾಲಿಕ್

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.