ಶಾಸಕರ ಕಚೇರಿಗೆ ಕನ್ನಾ – ದಾಖಲೆಗಳನ್ನು ಕಳ್ಳತನ ಮಾಡಿದ ಖದೀಮರು

Suddi Sante Desk

ಬೆಳಗಾವಿ –
ಶಾಸಕರೊಬ್ಬರ ಕಚೇರಿಗೆ ಕಳ್ಳರು ಕನ್ನ ಹಾಕಿದ ಘಟನೆ ರಾಮದುರ್ಗದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ವಿಧಾನಸಭಾ ಕ್ಷೇತ್ರದ ಶಾಸಕ ಮಹಾದೇವಪ್ಪ ಯಾದವಾಡ ಕಚೇರಿಗೆ ಖದೀಮರು ಕನ್ನಾ ಹಾಕಿದ್ದಾರೆ.

ಶಾಸಕ ಮಹಾದೇವಪ್ಪ ಯಾದವಾಡ

ನಿನ್ನೇ ತಡರಾತ್ರಿ ಪಡಕೋಟಿ ಗಲ್ಲಿಯಲ್ಲಿರುವ ಮನೆಯ ಮುಂದೆ ಇರುವ ಶಾಸಕರ ಕಚೇರಿಗೆ ಖದೀಮರು ಕೈಚಳಕ ತೋರಿದ್ದಾರೆ. ಕಚೇರಿಯ ಬೀಗ‌ ಮುರಿದು ಕಳ್ಳತನ ಮಾಡಿದ್ದಾರೆ ದುಷ್ಕರ್ಮಿಗಳು.

ಮುಸುಕುಧಾರಿಗಳಿಂದ ಕಳ್ಳತನ ನಡೆದಿರೋ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಕಚೇರಿ ಬೀಗವನ್ನು ಮುರಿದ ಖದೀಮರು ಕಚೇರಿಯಲ್ಲಿನ ಕೆಲ ದಾಖಲೆಗಳನ್ನು ಹಾಗೇ ಚೇಕ್ ಗಳನ್ನು ಕೈಗೆ ಸಿಕ್ಕ ಇತರೆ ಕೆಲ ವಸ್ತುಗಳನ್ನು ಕಳ್ಳರು ತಗೆದುಕೊಂಡು ಹೋಗಿದ್ದಾರೆ.

ಇನ್ನೂ ವಿಷಯ ತಿಳಿದ ರಾಮದುರ್ಗ ಪೊಲೀಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಮಾಡಿದರು. ಪೊಲೀಸ್ ಶ್ವಾನ ದಳದೊಂದಿಗೆ ಸಿಬ್ಬಂದಿಗಳು ಕೂಡಾ ಸ್ಥಳಕ್ಕೇ ಭೇಟಿ ನೀಡಿ ಮಾಹಿತಿ ಕಲೆಹಾಕಿದರು.

ಇನ್ನೂ ಕಳ್ಳರು ಬಂದು ಕಳ್ಳತನ ಮಾಡಿಕೊಂಡು ಮರಳಿ ಹೋಗುತ್ತಿರುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರಯಾಗಿವೆ. ಸಧ್ಯ ಪ್ರಕರಣವನ್ನು ದಾಖಲು ಮಾಡಿಕೊಂಡಿರುವ ರಾಮದುರ್ಗ ಪೊಲೀಸರು ತನಿಖೆ ಮಾಡ್ತಾ ಇದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.