ಬದುಕಲಿಲ್ಲ ಮಂಜುನಾಥ ಮಲ್ಲೂರ – ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವು

Suddi Sante Desk

ಧಾರವಾಡ –

ಧಾರವಾಡದ ಮರಾಠಾ ಕಾಲೊನಿಯಲ್ಲಿ ನಿನ್ನೆ ತಡರಾತ್ರಿ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಂಜುನಾಥ ಮಲ್ಲೂರ ನಿಧನರಾದರು. ನಿನ್ನೆ ಮರಾಠಾ ಕಾಲೊನಿಯಲ್ಲಿ ರಸ್ತೆಯಲ್ಲಿ ಅಪಘಾತವಾಗಿ ಹರಸಾಹಸ ಮಾಡಿದ ಧಾರವಾಡದ ಕೆಲ ಯುವಕರು ಹರಸಾಹಸ ಮಾಡಿ ಆಸ್ಪತ್ರೆಗೆ ಶಿಪ್ಟ್ ಮಾಡಿಸಿದ್ದರು.

ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಕೂಡಲೇ SDM ಆಸ್ಪತ್ರೆಗೆ ಸೇರಿಸಲಾಯಿತು. ನಿನ್ನೆ ರಾತ್ರಿಯಿಂದ ಈವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ತೀವ್ರವಾಗಿ ರಕ್ತಸ್ರಾವ ವಾಗಿತ್ತು.ತುಂಬಾ ಗಂಭೀರವಾಗಿದ್ದ ಮಂಜುನಾಥ ಗೋಪಾಲ ಮಲ್ಲೂರ ಕೊನೆಗೂ ಚಿಕಿತ್ಸೆ ಫಲಿಸದೇ ಸಾವಿಗೀಡಾದರು‌ .

ತುಂಬಾ ಹೆಚ್ಚಿನ ಪ್ರಮಾಣದಲ್ಲಿ ಗಾಯಗೊಂಡಿದ್ದ ಮಂಜುನಾಥ ಧಾರವಾಡ ಮತ್ತು ದಾಂಡೇಲಿ ಯಲ್ಲಿ ಬಾರ್ ನಡೆಸುತ್ತಿದ್ದರು.ತುಂಬಾ ಉತ್ಸಾಹಿ ಮತ್ತು ಸರಳ ಸಂಭಾವಿತನಾಗಿದ್ದ ಇವರು ಕೊನೆಗೂ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ‌.

ತೀವ್ರವಾಗಿ ಗಾಯಗೊಂಡ ಇವರು ಗುಣಮುಖರಾಗುತ್ತಾರೆ ಎಂದುಕೊಳ್ಳಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.ಧಾರವಾಡದ ಹೊಸ ಬಸ್ ನಿಲ್ದಾಣದ ಬಳಿಯ ನಿವಾಸಿಯಾಗಿದ್ದರು. ಮಂಜುನಾಥ ಅಗಲಿಕೆಗೆ ಧಾರವಾಡದ ಅವರ ಗೆಳೆಯರು ಮಿತ್ರರು ಬಂಧುಗಳು ಕಂಬನಿ ಮಿಡಿದಿದ್ದಾರೆ.

ಅದರಲ್ಲೂ ವಿಶೇಷವಾಗಿ ಕುಮಾರೇಶ್ವರ ಯುವಕ ಮಂಡಳದೊಂದಿಗೆ ಒಳ್ಳೆಯ ಒಡನಾಟವನ್ನು ಇಟ್ಟುಕೊಂಡಿದ್ದರು. ಇವರ ಅಗಲಿಕೆಗೆ ಸಾಯಿ ಯುವಕ ಮಂಡಳದ ಪ್ರಭು ಹಿರೇಮಠ, ಸಂತೋಷ್ ಕೋಟಿ, ಪ್ರದೀಪ್ ಬಡಿಗೇರ, ಬಸವರಾಜ ,ಮಂಜು ಪವಾರ,ವೇದಕುಮಾರ ನವಲಗುಂದ,ರಮೇಶ್‌ ಕುಂಬಾರ,ಮಲ್ಲಿಕಾರ್ಜುನ ರಡ್ಡಿ,ಅಮೀತ್ ಬಸಾಪೂರ ,ಮಂಜು ಜವರೇಗೌಡ ಸೇರಿದಂತೆ ಗೆಳೆಯರು ಕಂಬನಿ ಮೀಡಿದಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.