ಮದುವೆಗೆ ಹೋಗಿದ್ದ ಬಾಲಕ ನೀರು ಪಾಲು – ಧಾರವಾಡದ ಮುಖ್ಯ ಪೇದೆ ಅವರ ಮಗ ಕಾಲುವೆಯಲ್ಲಿ ಧಾರುಣ ಸಾವು

Suddi Sante Desk

ಧಾರವಾಡ –

ಮದುವೆಗೆ ಹೋಗಿದ್ದ ಬಾಲಕನೊರ್ವ ನೀರು ಪಾಲಾಗಿರುವ ಘಟನೆ ನವಲಗುಂದ ದಲ್ಲಿ ನಡೆದಿದೆ. ನವಲಗುಂದ ತಾಲ್ಲೂಕಿನ ನಾಗರಳ್ಳಿ ಕಾಲುವೆಯಲ್ಲಿ ಈ ಒಂದು ಘಟನೆ ನಡೆದಿದೆ. ಮೂರು ದಿನಗಳ ಹಿಂದೆಯಷ್ಟೇ ಬಾಲಕ ಮದುವೆಗೆಂದು ಹೋಗಿದ್ದನು.ಕಾಲುವೆಯಲ್ಲಿ ಸ್ನಾನ ಮಾಡಲು ಹೋದ ಸಮಯದಲ್ಲಿ ಕೊಚ್ಚಿ ಹೋಗಿದ್ದನು ಬಾಲಕ.

ಎರಡು ದಿನಗಳ ನಂತರ ನವಲಗುಂದ ತಾಲೂಕಿನ ನಾಗರಳ್ಳಿ ಬಳಿ ಹಳ್ಳದಲ್ಲಿ ಬಾಲಕನ ಮೃತ ದೇಹ ಕಾಣಿಸಿಕೊಂಡಿದೆ. ನವಲಗುಂದ ತಾಲೂಕಿನ ಮೊರಬ ಗ್ರಾಮದ ಬಳಿಯ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಬಾಲಕ ಕಾಂತೇಶ ಪರಸಪ್ಪ ಮನಗುಂಡಿ ಮೃತ ದೇಹ ಇಂದು ಪತ್ತೆಯಾಗಿದೆ.

ಕೊಚ್ಚಿ ಹೋದ ಬಾಲಕನ ದೇಹವನ್ನು ನೋಡಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನೂ ವಿಷಯ ತಿಳಿದ ಧಾರವಾಡ ಜಿಲ್ಲಾ ಎಸ್ಪಿ ಕೃಷ್ಣಕಾಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಇನ್ನೂ ಬಾಲಕನ ತಂದೆ ಪರಸಪ್ಪ ಮನಗುಂಡಿ ಧಾರವಾಡದಲ್ಲಿ ಪೊಲೀಸ್ ಪೇದೆಯಾಗಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.