ನ್ಯಾಯವಾದಿ ಹತ್ಯೆಯ ದೃಶ್ಯ ಸಿಸಿ ಟಿವಿ ಯಲ್ಲಿ ಸರೆ – ಭಯ ಹುಟ್ಟಿಸುತ್ತಿದೆ ಹತ್ಯೆಯ ಭೀಕರ ದೃಶ್ಯ……

Suddi Sante Desk

ಹೊಸಪೇಟೆ –
.

ಹೊಸಪೇಟೆ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ಆವರಣದಲ್ಲಿ ಶನಿವಾರ (ಫೆ.27) ರಂದು ವಕೀಲ ಕಾಂಗ್ರೆಸ್ ಮುಖಂಡ ತಾರಿಹಳ್ಳಿ ವೆಂಕಟೇಶ್ (48) ಅವರ ಹತ್ಯೆಯ ವಿಚಾರದಲ್ಲಿ ಆರೋಪಿ ಚೀಲದಲ್ಲಿ ಮಚ್ಚೊಂದನ್ನು ತಗೆದು ಕೊಂಡು ಬಂದು ಹತ್ಯೆ ಮಾಡಿದ ಘಟನೆ ನಡೆದಿತ್ತು.

ಈ ಒಂದು ಹತ್ಯೆಯ ಭೀಕರ ದೃಶ್ಯ ವಕೀಲರ ಸಂಘದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾರಿಹಳ್ಳಿ ಅವರ ಸಂಬಂಧಿ ಮನೋಜ್ ಎಂಬುವರು ಮಚ್ಚಿನಿಂದ ಕುತ್ತಿಗೆಯ ಭಾಗಕ್ಕೆ ಹೊಡೆದು ಕೊಲೆ ಮಾಡಿದ್ದಾರೆ.

ಹತ್ಯೆಯಾದ ನ್ಯಾಯವಾದಿ

ಕುರ್ಚಿ ಮೇಲೆ  ಕುಳಿತುಕೊಂಡು ನೋಟರಿ ಮಾಡುತ್ತಿದ್ದಾಗ ತಾರಿಹಳ್ಳಿ ಅವರಿಗೆ ಏಕಾಏಕಿ ಬಂದು ಹೊಡೆದಿದ್ದಾನೆ.

https://youtu.be/DRd23Ll6T5Q

ಅವರ ದೇಹರಕ್ತಸಿಕ್ತವಾಗಿ ಸ್ಥಳದಲ್ಲೇ ಮೃತಪಟ್ಟರು. ಮಚ್ಚಿನ ಹೊಡೆಯುತ್ತಿರುವ ದೃಶ್ಯವು ಸಿಸಿ ಟಿವಿ ಯಲ್ಲಿ ಸೆರೆಯಾಗಿದೆ.ಮಚ್ಚಿನಿಂದ ಬರೊಬ್ಬರಿ ಹತ್ತಕ್ಕೂ ಹೆಚ್ಚು ಬಾರಿ ಹೊಡೆದು ಹೊಡೆದು ಹತ್ಯೆ ಮಾಡಿದ್ದಾರೆ.ಘಟನೆಯಿಂದ ನ್ಯಾಯಾಲಯ ದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಜನರು ಭಯದಲ್ಲಿ ದೂರಕ್ಕೆ ಓಡಿರುವುದೂ ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾಗಿದೆ.

ಆರೋಪಿ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.