ಕಾರು ಲಾರಿ ಡಿಕ್ಕಿ ಸ್ವಲ್ಪದರಲ್ಲಿಯೇ ಪಾರಾದರು ಕಾರಿನ ಚಾಲಕ – ಧಾರವಾಡ ಬಾಗಲಕೋಟ ಪೆಟ್ರೊಲ್ ಬಂಕ್ ನ ಸಿಗ್ನಲ್ ಬಳಿ ಘಟನೆ

Suddi Sante Desk

ಧಾರವಾಡ –

ಸಿಗ್ನಲ್ ನಿಂದ ಹೊರಟಿದ್ದ ಕಾರಿಗೆ ಏಕಾಎಕಿಯಾಗಿ ಬಂದ ಲಾರಿಯೊಂದು ಡಿಕ್ಕಿಯಾಗಿ ಕಾರಿನಲ್ಲಿದ್ದ ಚಾಲಕ ಸ್ವಲ್ಪದಲ್ಲಿಯೇ ಪಾರಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಬಾಗಲಕೋಟ ಪೆಟ್ರೊಲ್ ಬಂಕ್ ನ ಸಿಗ್ನಲ್ ಬಳಿ ಈ ಒಂದು ಘಟನೆ ನಡೆದಿದೆ. ಬಾಗಲಕೋಟ ಪೆಟ್ರೊಲ್ ಬಂಕ್ ನ ಮೇಲಿಂದ ಕೆಳಗಡೆ ಬಂದ ಪೊಲೊ ಕಾರು ಸಿಗ್ನಲ್ ಇದೆ ಎಂದುಕೊಂಡು ಹೊರಟಿತ್ತು ಹುಬ್ಬಳ್ಳಿ ಕಡೆಯಿಂದ ಧಾರವಾಡ ಕಡೆಗೆ ಹೊರಟಿದ್ದ ಲಾರಿಯೊಂದು ಏಕಾಎಕಿಯಾಗಿ ಬಂದು ಕಾರಿಗೆ ಡಿಕ್ಕಿಯಾಗಿದೆ.

ಕಾರಿನ ಎರಡು ಬಾಗಿಲುಗಳು ಸಂಪೂರ್ಣವಾಗಿ ಹಾಳಾಗಿದ್ದು ಇನ್ನೂ ಲಾರಿಯ ಮುಂಬಾಗ ಕೂಡಾ ಜಖಂ ಆಗಿದೆ. ಇನ್ನೂ ಕಾರಿನಲ್ಲಿದ್ದ ಟಿಕಾರೆ ಎಂಬುವರು ಪಾರಾಗಿದ್ದಾರೆ. ಯಾವುದೇ ರೀತಿಯ ಗಾಯಗಳಾಗಿಲ್ಲ . ಕಾರಿಗೆ ಲಾರಿ ಡಿಕ್ಕಿಯಾಗುತ್ತಿದ್ದಂತೆ ಲಾರಿಯನ್ನು ಬಿಟ್ಟು ಚಾಲಕ ಎಸ್ಕೇಫ್ ಆಗಿದ್ದಾರೆ. ಇನ್ನೂ ಸುದ್ದಿ ತಿಳಿದ ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ರವಿರಾಜ ಪಾಟೀಲ ಮತ್ತು ಈರಣ್ಣ ಲಕ್ಕಮ್ಮನವರ ಸ್ಥಳಕ್ಕೇ ಆಗಮಿಸಿ ಪರಿಶೀಲನೆ ಮಾಡಿ ಸಧ್ಯ ಲಾರಿಯನ್ನು ವಶಕ್ಕೆ ತಗೆದುಕೊಂಡಿದ್ದು ದೂರು ದಾಖಲು ಮಾಡಿಕೊಂಡಿರುವ ಸಂಚಾರಿ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.