ಅಂದು ಶಿಕ್ಷಕ ಇಂದು ಶಾಸಕ – ಪತ್ನಿ ಅದೇ ಕ್ಷೇತ್ರದಲ್ಲಿ ತಹಶೀಲ್ದಾರ್ – ಆಡಳಿತದ ಚುಕ್ಕಾಣಿ ಪತಿ ಪತ್ನಿ ಕೈಯಲ್ಲಿ – ಶಿಕ್ಷಕ ಬಂಧುಗಳಿಗೆ ಪ್ರೇರಣೆಯಾದರು ಇವರು…..

Suddi Sante Desk

ಬಸವಕಲ್ಯಾಣ –

ಅಧಿಕಾರ ಅನ್ನೋದು ಸಿಕ್ಕ ಸಿಕ್ಕವರಿಗೆ ಒಲಿದು ಬರೊದಿಲ್ಲ ಅನ್ನೊದಕ್ಕೆ ಈ ಒಂದು ಸ್ಟೋರಿನೆ ಸಾಕ್ಷಿ. ಹೌದು ಎಲ್ಲವನ್ನೂ ಪಡೆದುಕೊಂಡು ಬಂದಿರಬೇಕು ಎನ್ನೊದಕ್ಕೆ ಇತ್ತೀಚಿಗೆ ಹೊಸದಾಗಿ ಶಾಸಕರಾಗಿ ಆಯ್ಕೆಯಾದ ಶರಣು ಸಲಗಾರ್ ಸಾಕ್ಷಿ ಹಿಂದೊಮ್ಮೆ ಸಾಮಾನ್ಯ ಶಿಕ್ಷಕ ಆಗಿದ್ದು ನಂತರ ಜನಪ್ರತಿನಿಧಿಗ ಳಿಗೆ ಆಪ್ತ ಸಲಹೆಗಾರರಾಗಿದ್ದ ಇವರು ಇಂದು ಅದೇ ಕ್ಷೇತ್ರದಲ್ಲಿ ಈಗ ಶಾಸಕರಾಗಿದ್ದಾರೆ,ಇನ್ನೂ ಅವರ ಪತ್ನಿ ಅದೇ ಕ್ಷೇತ್ರದ ತಹಶೀಲ್ದಾರ್ ಹೌದು ಬೀದರ್ ಜಿಲ್ಲೆ ಬಸವಕಲ್ಯಾಣ ತಹಶೀಲ್ದಾರ್ ಸಾವಿತ್ರಿ ಸಲಗ ರ್ ಹಾಗೂ ಶಾಸಕ ಶರಣು ಸಲಗರ್ ಪತಿ-ಪತ್ನಿ ಇದ ಕ್ಕೆ ಸಾಕ್ಷಿಯಾಗಿ ನಮ್ಮ ಮುಂದೆ ಇದ್ದಾರೆ

ಬಸವಕಲ್ಯಾಣ ಕ್ಷೇತ್ರಕ್ಕೆ ಇತ್ತೀಚೆಗೆ ನಡೆದ ಚುನಾವಣೆ ಯಲ್ಲಿ ಶರಣು ಸಲಗರ್ ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ಚುನಾವಣೆ ಮುಗಿಯುವವರೆಗೆ ಬೇರೆಡೆಗೆ ವರ್ಗಾವಣೆಗೊಂಡಿದ್ದ ಸಾವಿತ್ರಿ ಸಲಗರ ಅವರು ಈಗ ಮತ್ತೆ ಬಸವ ಕಲ್ಯಾಣಕ್ಕೆ ನಿಯೋಜನೆ ಗೊಂಡಿದ್ದಾರೆ

ನಿಯೋಜನೆಗೊಂಡು ಮರಳಿ ಪತಿ ರಾಯರ ಕ್ಷೇತ್ರದಲ್ಲಿ ಕರ್ತವ್ಯಕ್ಕೆ ಹಾಜರಾಗುವ ಮುನ್ನ ಶರಣು ಸಲಗರ್ ಅವರು ಪತಿ ಸಾವಿತ್ರಿ ಸಲಗಾರ ಅವರಿಗೆ ಸಿಹಿ ತಿನ್ನಿಸುವ ಮೂಲಕ ಬರಮಾಡಿಕೊಂಡರು. ಇನ್ನೂ ಸಾವಿತ್ರಿ ಕೂಡ ಪತಿ ಶಾಸಕರಾಗಿದ್ದಕ್ಕೆ ಸಿಹಿ ತಿನ್ನಿಸಿ ಸಂಭ್ರಮಿಸಿದರು.ಒಟ್ಟಾರೆ ಏನೇ ಆಗಲಿ ಹಿಂದೊಮ್ಮೆ ಶಿಕ್ಷಕ ರಾಗಿದ್ದ ಶರಣು ಸಲಗಾರ ಈಗ ಅದೇ ಕ್ಷೇತ್ರದಲ್ಲಿ ಶಾಸಕರು ಇನ್ನೂ ಅವರ ಪತ್ನಿ ತಹಶೀಲ್ದಾರ್ ಸಧ್ಯ ಪತಿ ಪತ್ನಿ ಇಬ್ಬರು ಕ್ಷೇತ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿದ್ದು ಒಳ್ಳೆಯ ಕೆಲಸ ಕಾರ್ಯ ಮಾಡಿ ಜನರಿಗೆ ಒಳ್ಳೆಯ ಆಡಳಿತ ನೀಡಲಿ ಪ್ರೀತಿ ಪಾತ್ರರಾಗಲಿ ಎಂಬೊದೆ ನಮ್ಮ ಆಶಯ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.