ಚಿಕಿತ್ಸೆ ಗಾಗಿ ದೈಹಿಕ ಶಿಕ್ಷಕನ ಪರದಾಟ – ರಾಜ್ಯದಲ್ಲಿ ಚಿಕಿತ್ಸೆಗಾಗಿ ಶಿಕ್ಷಕರು ಹೇಗೆ ಪರದಾಡುತ್ತಿದ್ದಾರೆ ಒಮ್ಮೆ ನೋಡಿ – ಎಲ್ಲಿದ್ದಿರಾ ಶಿಕ್ಷಣ ಸಚಿವರೇ…..

Suddi Sante Desk

ವಿಜಯನಗರ –

ರಾಜ್ಯದಲ್ಲಿ ಕರೋನ ಸೊಂಕು ಕಾಣಿಸಿಕೊಂಡ ನಂತರ ಚಿಕಿತ್ಸೆ ಗಾಗಿ ಶಿಕ್ಷಕರು ಹೇಗೆ ಪರದಾಡತಾ ಇದ್ದಾರೆ. ಚಿಕಿತ್ಸೆ ಗಾಗಿ ಏನೇಲ್ಲಾ ನೋವು ಸಮಸ್ಯೆ ಅನುಭವಿಸತಾ ಇದ್ದಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿ‌.ಹೌದು ಹೊಸಪೇಟೆಯಲ್ಲಿ ದೈಹಿಕ ಶಿಕ್ಷಕ ನಿಸಾರಗ ಅಹಮ್ಮದ್ ಚಿತ್ರಣವೇ ತಾಜಾ ಉದಾ ಹರಣೆಯಾಗಿದೆ.

ಹೌದು ದೈಹಿಕ ಶಿಕ್ಷಕ ಕರೊನಾ ವಾರಿಯರ್ಸ್‌ ಆಗಿ ಕೆಲಸವನ್ನು ಮಾಡತಾ ಇದ್ದಾರೆ. ಕರೋನ ಸೋಂಕು ಕಾಣಿಸಿಕೊಂಡ ನಂತರ ಚಿಕಿತ್ಸೆ ಗಾಗಿ ಆಸ್ಪತ್ರೆಗೆ ಬಂದ ರೆ ಚಿಕಿತ್ಸೆ ಸಿಗದೇ ಸಿಗದೇ ಪರದಾಡಿದ ಚಿತ್ರಣ ಕಂಡು ಬಂದಿತು

ಅಲ್ಲದೇ ಅವಶ್ಯಕವಾಗಿ ಬೇಕಾದ ವೆಂಟಿಲೇಟರ್ ಸಿಗದೇ ಪರದಾಡಿದ್ದು ಕಂಡು ಬಂದಿತು.ನಾಲ್ಕೈದು ಆಸ್ಪತ್ರೆ ಸುತ್ತಾಡಿದರು ವೆಂಟಿಲೇಟರ್ ಬೆಡ್ ಸಿಗದೇ ತಿರುಗಾಡಿದ ಚಿತ್ರಣ ದೃಶ್ಯ ಕಂಡು ಬಂದಿತು

ಕರೊನಾ ವಾರಿಯರ್ಸ್‌ ಚಿಕಿತ್ಸೆಗಾಗಿ ಅಲೆದಾಡುವ ಚಿತ್ರಣ ಪರಿಸ್ಥಿತಿ ಯಾರಿಗೂ ಕಾಣುತ್ತಿಲ್ವಾ ಕೇಳುತ್ತಿ ಲ್ವಾ ಎಂಬ ಮಾತುಗಳು ಇಡೀ ಹೊಸಪೇಟೆ ನಗರದ ತುಂಬೆಲ್ಲಾ ಕೇಳಿ ಬಂದವು

ಕರೊನಾ ಪಾಸಿಟಿವ್ ಬಂದ ನಂತರ ಸರ್ಕಾರಿ ಆಸ್ಪ ತ್ರೆಗೆ ದಾಖಲಾಗಿದ್ದಾರೆ‌.ನಂತರ ಅಲ್ಲಿಂದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ‌‌.ದೈಹಿಕ ಶಿಕ್ಷಕ ನಿಸಾ ರ್ ಅಹಮ್ಮದ್ ಚಿಕಿತ್ಸೆಗಾಗಿ ಅಲೆದಾಟ ಮಾಡಿದ್ದು ಕಂಡು ಬಂದಿತು‌.ಪರಿಸ್ಥಿತಿ ಕೈ ಮೀರೋ ಹಂತಕ್ಕೆ ಬಂದಾಗ ಕೈ ಎತ್ತಿದ ಖಾಸಗಿ ಆಸ್ಪತ್ರೆ.ವಿಜಯನಗರ- ಬಳ್ಳಾರಿ ಅವಳಿ ಜಿಲ್ಲೆಗಳಲ್ಲಿ ವೆಂಟಿಲೇಟರ್ ಬೆಡ್ ಇಲ್ಲದ ಕಾರಣ ಪಕ್ಕದ ಜಿಲ್ಲೆಗೆ ರವಾನೆ ಮಾಡಿದರು. ಇನ್ನೂ ಈ ಒಂದು ವಿಚಾರ ಕುರಿತು ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದರು

ಕೊಪ್ಪಳ ಜಿಲ್ಲೆಯ ಗಂಗಾವತಿಗೆ ಚಿಕಿತ್ಸೆಗೆ ರವಾನೆ ಮಾಡಿದೆ ಹೊಸಪೇಟೆ ಆಡಳಿತ.ನಾವು ಟ್ರೇಸಿಂಗ್ ಟೀಮ್ ನಲ್ಲಿ ಕೆಲಸ ಮಾಡ್ತಿದ್ದೇವೆ.ನಮಗೆ ಪ್ರತ್ಯೇಕ ಚಿಕಿತ್ಸೆಗೆ ಬೆಡ್ ಗಳನ್ನು ಮೀಸಲಿಡಿ ಎನ್ನುತ್ತಿದ್ದಾರೆ ವಾರಿಯರ್ಸ್‌ ಆದರೂ ಯಾರು ಕೂಡಾ ಈ ಒಂದು ವಿಚಾರದಲ್ಲಿ ಸ್ಪಂದಿಸಲಿಲ್ಲ.ರಿಸ್ಕ್ ನಲ್ಲಿ ಕೆಲಸ ಮಾಡೋ ನಮಗೆ ಚಿಕಿತ್ಸೆ ಸಿಗದೇ ಇದ್ರೆ ಕಷ್ಟ ಅಂತ ಅಳಲು ತೋಡಿಕೊಂಡಿದ್ದಾರೆ ಕರೊನಾ ವಾರಿಯ ರ್ಸ್. ಇನ್ನೂ ಇಷ್ಟೊಂದು ಸಮಸ್ಯೆ ಸಂಕಷ್ಟ ಇದ್ದರೂ ಕೂಡಾ ಶಿಕ್ಷಣ ಸಚಿವರು ಸರ್ಕಾರ ಸಂಘಟನೆ ಲೀಡ ರ್ಸ್ ಎಲ್ಲಿದ್ದಾರೆ ಏನು ಮಾಡತಾ ಇದ್ದಾರೆ ನೋಡಿ ದಯಮಾಡಿ ಇದನ್ನೊಮ್ಮೆ ದಯಮಾಡಿ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.