ಧಾರವಾಡ ಕೃಷಿ ವಿವಿ ಇಬ್ಬರು ಮಹಿಳಾ ನೌಕರರ ಸಾವು ಪ್ರಕರಣ – ಮುಲ್ಲಾ ,ಮೇಸ್ತ್ರಿ ಅಮಾನತು

Suddi Sante Desk

ಧಾರವಾಡ –

ಧಾರವಾಡದ ಕೃಷಿ ಮಹಾವಿದ್ಯಾಲಯದಲ್ಲಿನ ಇಬ್ಬ ರು ಮಹಿಳಾ ನೌಕರರ ಸಾವಿನ ಪ್ರಕರಣ ಕುರಿತು ಕೊನೆಗೂ ಕುಲಪತಿಗಳ ಆಪ್ತ ಸಹಾಯಕ ಎಮ್ ಎಮ್ ಮುಲ್ಲಾ, ಟೈಪಿಸ್ಟ್ ಯು ಬಿ ಮೇಸ್ತ್ರಿ ಇಬ್ಬರ ನ್ನು ಕೃಷಿ ವಿಶ್ವವಿದ್ಯಾಲಯದ ಆಡಳಿತಾಧಿಕಾರಿಗಳು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ

ಜನೇವರಿ 30 ರಂದು ಉತ್ತರ ಕನ್ನಡದ ಮಾಸ್ತಿಕಟ್ಟಾ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಧಾರವಾಡ ದ  ಕೃಷಿ ವಿಶ್ವ ವಿದ್ಯಾಲಯದ ಇಬ್ಬರು ಮಹಿಳಾ ನೌಕರರು ಸಾವಿಗೀಡಾಗಿದ್ದರು.ಈ ಒಂದು ಪ್ರಕರಣ ಕುರಿತು ಸಂಶಯಾಸ್ಪದ ವ್ಯಕ್ತಪಡಿಸಿ ಹಲವು ಸಂಘ ಟನೆ ಗಳು ಮುಲ್ಲಾ ಮತ್ತು ಮೇಸ್ತ್ರಿ ವಿರುದ್ಧ ಪ್ರತಿಭಟ ನೆ ಮಾಡಿದ್ದರು ಇದರ ನಡುವೆ ಯುವತಿಯ ಪೊಷ ಕರು ಈಗಾಗಲೇ ಅತ್ಯಾಚಾರ ಪ್ರಕರಣವನ್ನು ಇಬ್ಬ ರು ಮೇಲೆ ದಾಖಲು ಮಾಡಿದ್ದು ಇವೆಲ್ಲವೂ ಬೆಳವ ಣಿಗೆಯಿಂದಾಗಿ ಸಧ್ಯ ಮುಲ್ಲಾ ಮತ್ತು ಮೇಸ್ತ್ರಿ ಇಬ್ಬ ರನ್ನು ಅಮಾನತು ಮಾಡಲಾಗಿದೆ.

ಮುಲ್ಲಾ
ಮೇಸ್ತ್ರಿ

ಇವೆಲ್ಲವೂ ಬೆಳವಣಿಗೆ ಯಿಂದ ಮತ್ತು ಕುಲಪತಿ ಗಳ ಸೂಚನೆ ಹಿನ್ನಲೆಯಲ್ಲಿ ಕೃಷಿ ವಿವಿ ಆಡಳಿತಾಧಿಕಾರಿ ಇಬ್ಬರನ್ನು ಸೇವೆಯಿಂದ ಅಮಾನತು ಮಾಡಿ ಆದೇ ಶ ಹೊರಡಿಸಿದ್ದಾರೆ.ಸಧ್ಯ ಅಮಾನತು ಮಾಡಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡ ಬೇಕು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.