ಹುಬ್ಬಳ್ಳಿಯಲ್ಲಿ ಒಂದೇ ದಿನ ಐವರು ಸಾವು – ಸಾವಿಗೆ ಸ್ಪಷ್ಟ ಕಾರಣ ಹುಡುಕುತ್ತಿರುವ ಜಿಲ್ಲಾ ಆರೋಗ್ಯ ಇಲಾಖೆ – ಆಸ್ಪತ್ರೆ ವಿರುದ್ಧ ಮೃತರ ಆಕ್ರೋಶ…..

Suddi Sante Desk

ಹುಬ್ಬಳ್ಳಿ –

ಹುಬ್ಬಳ್ಳಿಯ ಗೋಕುಲ ರಸ್ತೆಯ ಖಾಸಗಿ ಆಸ್ಪತ್ರೆ ಯಲ್ಲಿ ಮಂಗಳವಾರ ಒಂದೇ ದಿನ ಐವರು ಕೋವಿ ಡ್ ಸೋಂಕಿತರು ನಿಧನರಾಗಿದ್ದಾರೆ.ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಐವರು ಸೋಂಕಿತರು ನಿಧನ ರಾಗಿದ್ದಾರೆ‌


ಮಧ್ಯಾಹ್ನ 3-45 ರಿಂದ 5 ಗಂಟೆಯವೊಳಗೆ ನಿಧನ ಹೊಂದಿದ್ದಾರೆ.ಸಾವಿಗೆ ಆಕ್ಸಿಜನ್ ಸಮಸ್ಯೆ ಕಾರಣ ಎಂಬುದು ಮೃತರ ಕುಟುಂಬದವರ ಆರೋಪ

ಆಗಿದ್ದು ಆದರೆ ಇದನ್ನು ನಿರಾಕರಿಸಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯಶವಂತ ಮದೀನಕರ, ಮೃತರಲ್ಲಿ ಕೆಲವರು ತೀವ್ರತರವಾದ ರೋಗಗಳಿಂದ ನರಳುತ್ತಿದ್ದರು.ಕೆಲವರಿಗೆ ವಯಸ್ಸಾಗಿತ್ತು. ಹೀಗಾಗಿ ಸಾವಿಗೀಡಾಗಿದ್ದಾರೆ. ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರ ತೆ ಇಲ್ಲ ಎಂದರು.ಆದರೂ ಮತ್ತೊಮ್ಮೆ ಸಾವಿನ ಸ್ಪಷ್ಟ ಕಾರಣದ ತನಿಖೆಗಾಗಿ ತಜ್ಞರ ಸಮಿತಿ ಯೊಂದ ನ್ನು ಎರಡು ದಿನಗಳವೊಳಗಾಗಿ ರಚಿಸಲಾಗುವುದು ಎಂದರು

ಮೃತರ ವಿವರ

ವಾಣಿ ಜನ್ನು (51) ಹುಬ್ಬಳ್ಳಿಯ ಕೇಶ್ವಾಪುರ ನಿವಾಸಿ.

ವಿನಯಾ ನಾಯಕ (47) ಶಿರಸಿ ನಿವಾಸಿ.

ಬಾಲಚಂದ್ರ ಡಿ‌. (61) ಹುಬ್ಬಳ್ಳಿಯ ನಿವಾಸಿ.

ದೇಸಾಯಿಗೌಡ ಪಾಟೀಲ (59)ಮಾಜಿ ಜಿಪಂ‌ ಹಾಗೂ ಪಾಲಿಕೆ ಸದಸ್ಯ.

ಸುಶಾಂತ ದ್ರೋಣಾವತ (39) ಹುಬ್ಬಳ್ಳಿಯ ನಿವಾಸಿ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.